Tuesday, July 25, 2006

ಹಿಂದೂ ಭುಗಿಲು: ಕಾಂಗ್ರೆಸ್ಸಿಗರ ಕಣ್ಣಲ್ಲಿ ಕಂಡಿದೆ ದಿಗಿಲು !

ರವಿ ಬೆಳಗೆರೆ


`ಇನ್ನು ಈ ದೇಶದ ಮುಸ್ಲಿಮರನ್ನು ಕೈಬಿಟ್ಟು ಹಿಂದೂಗಳ ಪರವಾಗಿ ನಿಂತುಬಿಡಿ. ಓಲೈಸುತ್ತೀರೋ ಬಿಡ್ತೀರೋ: ಹಿಂದೂಗಳನ್ನು ಎದುರಂತೂ ಹಾಕಿಕೊಳ್ಳಬೇಡಿ' ಎಂಬ ಸಂದೇಶ ಎಸ್ಸೆಂ ಕೃಷ್ಣರ ಸರ್ಕಾರಕ್ಕೆ ಹೈಕಮ್ಯಾಂಡಿನಿಂದ ಅದೆಷ್ಟು ಬಲವಾಗಿ ಬಂದು ತಲುಪಿದೆ ಎಂದರೆ, ಮೊನ್ನೆ ಬೆಂಗಳೂರಿಗೆ ಬಂದಿದ್ದ ತೊಗಾಡಿಯಾನನ್ನು ಎಸ್ಸೆಂ ಕೃಷ್ಣ ಮನೆಗೆ ಊಟಕ್ಕೆ ಕರೆಯುವುದೊಂದನ್ನು ಬಿಟ್ಟು ಇನ್ನೆಲ್ಲ ಮಾಡಿದರು.

ಬೆಂಗಳೂರಿನಲ್ಲಿ ನಡೆದ ವಿರಾಟ್ ಸಭೆ, ಬಾಬಾ ಬುಡನ್‌ಗಿರಿಯಲ್ಲಿ ನಡೆದ ಕೇಸರಿ ಜಾತ್ರೆಗಳು ಏನನ್ನಾದರೂ ಇಂಡಿಕೇಟ್ ಮಾಡುತ್ತಿವೆ ಅಂದರೆ, ಅದು ಕಾಂಗ್ರೆಸ್ಸಿಗರ ಬದಲಾದ ನಿಲುವುಗಳನ್ನಷ್ಟೇ ಇಂಡಿಕೇಟ್ ಮಾಡುತ್ತಿವೆ. ಕೇಸರಿ ಜನಪ್ರವಾಹ ನೋಡಿದ `ಕನ್ನಡಪ್ರಭ' ಪತ್ರಿಕೆಯವರು ಮೊಳಕೈ ಗಾತ್ರದ ಅಕ್ಷರಗಳಲ್ಲಿ ಅದನ್ನು ಹಿಂದೂ ಮಹಾಸಾಗರ ಅಂತ ಬಣ್ಣಿಸಿ ಕೃತಾರ್ಥರಾಗಿ ಹೋದರು. ಅವತ್ತಿನ ತನಕ `ವಿಜಯ ಕರ್ನಾಟಕ'ದವರಷ್ಟೇ ಪ್ರಗತಿಪರ ಬುದ್ಧಿಜೀವಿಗಳ ವಿರುದ್ಧ ಇದ್ದಾರೆ ಎಂಬ ಭಾವನೆಯಿತ್ತು . `ಹಿಂದೂ ಮಹಾಸಾಗರ' ಎಂಬ ದೈತ್ಯಾಕಾರದ ಹೆಡ್ಡಿಂಗು ನೋಡುತ್ತಿದ್ದಂತೆಯೇ ಎಲ್ಲರಿಗೂ ಒಂದು ವಿಷಯ ಮನವರಿಕೆಯಾಗಿ ಹೋಯಿತು; ಬೀಸುವ ಗಾಳಿಯ ದಿಕ್ಕು ಬದಲಾಗಿದೆ !

ಸ್ವಾತಂತ್ರ್ಯ ಬಂದಾಗಿನಿಂದಲೂ ಉತ್ತರ ಪ್ರದೇಶ್, ಮಧ್ಯಪ್ರದೇಶ್, ಈಗಿನ ಛತ್ತೀಸ್‌ಘಡ ಮುಂತಾದವು ಚುನಾವಣೆಗಳಲ್ಲಿ ಒಂದು ರಾಷ್ಟ್ರಮಟ್ಟದ ರಾಜಕೀಯ ಸ್ಥಿತಿಯ ಸಿಗ್ನಲ್ಲು -ಸಂದೇಶಗಳನ್ನು ಕೊಡುತ್ತಲೇ ಬಂದಂಥವು. ಹಿಂದಿ ಬೆಲ್ಟ್‌ನಲ್ಲಿ ಅಕಾರಕ್ಕೆ ಬಂದ ಪಕ್ಷವೇ ದೇಶವನ್ನಾಳುತ್ತದೆ ಎಂಬ ಮಾತು ದಶಕಗಳ ಕಾಲ ಜಾರಿಯಲ್ಲಿತ್ತು . ಮಧ್ಯೆ ಒಂದೆರಡು ಕಲಬೆರಕೆಗಳಾದರೂ ಜಾತಿ ಆಧಾರಿತವಾದ ಮತ ಚಲಾವಣೆಯ ಪ್ಯಾಟರ್ನ್ ಮೊನ್ನೆ ಮೊನ್ನೆಯ ತನಕ ತೀವ್ರವಾಗಿ ಬದಲಾಗಿರಲಿಲ್ಲ . ಆದರೆ ಇವತ್ತು ಉಮಾಭಾರತಿಯ ಗೆಲುವನ್ನು ನೋಡುತ್ತಿದ್ದರೆ, ಇದು ಕೇವಲ ಹಿಂದೂಗಳ ಕ್ರೋಢೀಕರಣದಿಂದಾಗಿ, ಕೇವಲ ಹಿಂದೂಗಳ ಒಗ್ಗೂಡುವಿಕೆಯ ನಿರ್ಧಾರದಿಂದಾಗಿ ಒದಗಿ ಬಂದ ಗೆಲುವಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಮೊಟ್ಟ ಮೊದಲ ಬಾರಿಗೆ ಮುಸ್ಲಿಮರೂ ಬಿಜೆಪಿಯ ಕಡೆಗೆ ವಾಲಿದ್ದಾರೆ. ಇಲ್ಲದಿದ್ದರೆ ದಿಗ್ವಿಜಯ್ ಸಿಂಗ್ ವಿರುದ್ಧ ಉಮಾಭಾರತಿಯ ಬಿಜೆಪಿ ೧೭೩ ಸ್ಥಾನಗಳಲ್ಲಿ ನೆಲೆಯೂರಲು ಸಾಧ್ಯವೇ ಇರಲಿಲ್ಲ . ರಾಜಸ್ತಾನ್ ಮತ್ತು ಛತ್ತೀಸ್‌ಘಡದಲ್ಲೂ ಕೂಡ ಮುಸ್ಲಿಮರು ಏಕಾ‌ಏಕಿ ಕಾಂಗ್ರೆಸ್‌ನ ಕೈಬಿಟ್ಟು ಬಿಜೆಪಿಯತ್ತ ನಡೆದುಹೋಗಿರುವ ಸೂಚನೆಗಳಿವೆ.

ಇದನ್ನು ಗಮನಿಸುತ್ತಿದ್ದಂತೆಯೇ ಬಹುಶಃ ಕರ್ನಾಟಕದಲ್ಲಿ ಮೊದಲು ಬೆಚ್ಚಿಬಿದ್ದವರು ಎಸ್ಸೆಂ.ಕೃಷ್ಣ . ಮೂಡಿಗೆರೆಯಂತಹ ಅಂಗೈಯಗಲದ ಊರಿಗೆ ತೊಗಾಡಿಯಾ ಬರುತ್ತಾನೆಂದರೆ, `ಕೈ ಮುರೀತೀನಿ, ಕಾಲು ಮುರೀತಿನಿ' ಅಂದಿದ್ದರು ಕಾಂಗ್ರೆಸ್ ನಾಯಕಿ ಮೋಟಮ್ಮ. ಆ ಮಾತ್ರದ ಧೈರ್ಯ ಕೃಷ್ಣರಿಗಿರಲಿಲ್ಲವಾ ? `ನಮ್ಮದು ಪ್ರಜಾಪ್ರಭುತ್ವವಾದೀ ದೇಶ. ಯಾರು ಬೇಕಾದರೂ ಬಂದು ಭಾಷಣ ಮಾಡಿಕೊಂಡು ಹೋಗಬಹುದು' ಅಂದರು. ಅಷ್ಟೇ ಅಲ್ಲ , ಚಂದ್ರೇಗೌಡರಂಥ ಮಂತ್ರಿಗೆ ಕೌಪೀನ ತೊಡಿಸಿ ಅಪ್ಪಟ ಬ್ರಾಹ್ಮಣ ವಟುವಿನಂತೆ ಮಾತಾಡಲು ಬಿಟ್ಟು ತಾವು ಸುಮ್ಮನುಳಿದು ಬಿಟ್ಟರು.

ಇವತ್ತು ಮಲೇಬೆನ್ನೂರಿನಲ್ಲಿ , ಬಾಬಾ ಬುಡನ್ ಗಿರಿಯಲ್ಲಿ , ಬೆಂಗಳೂರಿನಲ್ಲಿ ತೊಗಾಡಿಯೂ ಮತ್ತು ಮುತಾಲಿಕ್‌ರಂಥವರು ಮಾಡುತ್ತಿರುವ ವಿನಾಶಕಾರಿ ಭಾಷಣಗಳನ್ನು ಕೇಳಿಕೊಂಡು ಕಾಂಗ್ರೆಸ್ಸೆಂಬ ಕಾಂಗ್ರೆಸ್ಸು ಖಿಮಕ್ಕೆನ್ನದೆ ಕೂತಿದೆಯೆಂದರೆ, ಅದರ ಹಿಂದಿನ ಸಾರಾಂಶ ಇಷ್ಟೇ.

ಇವರು ಮುಸ್ಲಿಮರನ್ನು ಪೂರ್ತಿ ಕೈಬಿಟ್ಟಿದ್ದಾರೆ ! ಇದಕ್ಕೆ ಕಾರಣಗಳೂ ಸ್ಪಷ್ಟವಾಗಿಯೇ ಇವೆ. ಕಾಂಗ್ರೆಸ್‌ನಂಥ ಪರಾವಲಂಬಿ ಪಕ್ಷಕ್ಕೆ ಈ ಅರ್ಧ ಶತಮಾನದಲ್ಲಿ ಎಲ್ಲೂ ಬಲವಾದ ಬೇರುಗಳೇ ಇಳಿದಿಲ್ಲ . ಅವತ್ತಿಗೂ ಇವತ್ತಿಗೂ ಈ ಪಕ್ಷ ನೆಹರೂ ಮನೆತನದ ಚರಂಡಿಯ ಪಕ್ಕದಿಂದ ಎದ್ದು ಬಂದಿಲ್ಲ . ಇಂದಿರಾಗಾಂಯ ಹತ್ಯೆಯ ನಂತರ ಇವರು ತಿಥಿ ಊಟ ಉಂಡಾಗ ಮಾತ್ರ ಗೆದ್ದವರು. ಇಂದಿರಾ ಹತ್ಯೆಯಾಯಿತು; ಗೆದ್ದರು. ರಾಜೀವ್ ಹತ್ಯೆಯಾಯಿತು: ಗೆದ್ದರು. ಆನಂತರ ಇವರ ಕ್ಯಾಲ್ಕುಲೇಷನ್ನು ಎಷ್ಟು ಅಡ್ಡದಾರಿ ಹಿಡಿಯಿತೆಂದರೆ, ಸೋನಿಯಾಗಾಂಯ ವೈಧವ್ಯವನ್ನು ಮುಂದಿಟ್ಟುಕೊಂಡು ಬಂದು ತಟ್ಟೆ ಕಾಸು ಕೇಳತೊಡಗಿದರು. ಅಲ್ಲಿಗೆ ಪರಿಸ್ಥಿ ತಿ ಉಲ್ಟಾ ಹೊಡೆಯಲಾರಂಭಿಸಿತು. ಕಾಂಗ್ರೆಸ್ಸಿಗರ `ತಿಥಿಯೂಟ'ದ ರಾಜಕಾರಣಕ್ಕೆ ವಿರುದ್ಧವಾಗಿ ಬಿಜೆಪಿಯವರು ಅರಿಶಿನ ಕುಂಕುಮ, ಬಾಗಿನ ತಂದು ಮತದಾರರನ್ನು ತಮ್ಮೆಡೆಗೆ ಸೆಳೆದುಕೊಳ್ಳಲಾರಂಭಿಸಿದರು. ಅವತ್ತಿನ ಆ ಕ್ಷಣದ ತನಕ ಕಾಂಗ್ರೆಸ್ಸಿಗರು ಮಾತನಾಡುತ್ತಿದ್ದುದು ಮುಸ್ಲಿಮರ, ಕ್ರೈಸ್ತರ ಮತ್ತು ಇತರ ಅಲ್ಪಸಂಖ್ಯಾತರ ಪರವಾಗಿಯೇ. ನಿಮಗೆ ನೆನಪಿದೆಯಾ? ಗುಜರಾತದ ಮುಸ್ಲಿಂ ಮಾರಣಹೋಮ ನಡೆದ ಸಂದರ್ಭದಲ್ಲಿ `ಮುಸ್ಲಿಂಮರನ್ನು ಓಲೈಸುವುದನ್ನು ನಿಲ್ಲಿಸಿ' ಎಂಬ ತಲೆಬರಹದ ಸಂಪಾದಕೀಯವೊಂದನ್ನು ನಾನು ಬರೆದಿದ್ದೆ. ನನ್ನ ಪತ್ರಕರ್ತ ಮಿತ್ರರನೇಕರು ಕಿಡಿಕಿಡಿಯಾಗಿದ್ದರು. ಯಥಾಪ್ರಕಾರ ಮುಸ್ಲಿಂ ಓಲೈಸುವಿಕೆಯ ವಿರುದ್ಧ ಮಾತನಾಡುತ್ತಿದ್ದಂತೆಯೇ ನೀನು ಆರೆಸ್ಸೆಸ್ಸು, ನೀನು ಭಜರಂಗಿ, ನೀನು ಬಿಜೆಪಿ ಅಂದಿದ್ದರು. ಆದರೆ ಮುಸ್ಲಿಮರನ್ನು ಓಲೈಸುವುದು ತೀರಾ ಮುಸ್ಲಿಮರಿಗೆ ಎಷ್ಟು ಅಪಾಯಕಾರಿ ಎಂಬುದನ್ನು ನನ್ನ ಮುಸ್ಲಿಂ ಓದುಗ ಮಿತ್ರರೂ ಸೇರಿದಂತೆ, ದೊಡ್ಡದೊಂದು ಓದುಗ ಸಮೂಹ ಅರ್ಥ ಮಾಡಿಕೊಂಡಿತ್ತು . ಇವತ್ತು ಅದು ಪ್ರಾಕ್ಟಿಕಲ್ ಆಗೇ ಸಾಬೀತಾಗಿದೆ. ಕಾಂಗ್ರೆಸ್ಸಿಗರ ಢೋಂಗು, ಉಳಿದ ಪಕ್ಷಗಳ ನಾಯಕರ ದಗಲುಬಾಜಿತನ ಎರಡನ್ನೂ ಮುಸ್ಲಿಮರು ಅರ್ಥ ಮಾಡಿಕೊಂಡಿದ್ದಾರೆ.

ನಿನ್ನೆ ಮೊನ್ನೆಯ ತನಕ ಯಾರ್‍ಯಾರು ಸೆಕ್ಯುಲರಿಸಂ ಬಗ್ಗೆ ಮಾತನಾಡುತ್ತಿದ್ದರು ಮತ್ತು ಯಾರ್‍ಯಾರು ಮುಸ್ಲಿಮರ ಪರವಾಗಿ ದನಿಯೆತ್ತುತ್ತಿದ್ದರು ಎಂಬುದನ್ನು ನೀವೇ ಕೂತು ಪಟ್ಟಿ ಮಾಡಿರಿ. ಜಾರ್ಜ್ ಫನಾಂಡಿಸ್ ಅದರಲ್ಲಿ ಮೊದಲಿಗರಾಗುತ್ತಾರೆ. ಮಮತಾ ಬ್ಯಾನರ್ಜಿ ಕೇವಲ ಭಾರತೀಯ ಮುಸಲ್ಮಾನರಷ್ಟೇ ಅಲ್ಲ ; ಬಾಂಗ್ಲಾದೇಶದ ಮುಸಲ್ಮಾನರೂ ತನ್ನ ಬೆನ್ನಲ್ಲೇ ಹುಟ್ಟಿದವರು ಎಂಬಂತೆ ಮಾತನಾಡುವಾಕೆ. ಉಳಿದಂತೆ ಕರುಣಾನಿ, ಚಂದ್ರಬಾಬು ನಾಯ್ಡು, ಶರದ್ ಯಾದವ್, ಮುಲಾಯಂ ಸಿಂಗ್ ಯಾದವ್- ಇವರೆಲ್ಲರೂ ಮೈನಾರಿಟಿಗಳ ಪರವಾಗಿ ಮಾತನಾಡಿದವರೇ. ಆದರೆ ಅಕಾರದ ವಿಷಯಕ್ಕೆ ಬಂದಾಗ ಇವರ್‍ಯಾರಾದರೂ ಅಟಲ ಬಿಹಾರಿ ವಾಜಪೇಯಿಯೊಂದಿಗೆ ಕೈ ಕುಲುಕುವುದಕ್ಕೆ ಹಿಂಜರಿದರಾ? ಪರೀಕ್ಷಿಸಿ ನೋಡಿ. ಈ ನಾಯಕರು ನೂರೈವತ್ತು ಮಾತು ಆಡಬಹುದು. ಆದರೆ ಅಕಾರ ಅನ್ನೋದು ಕೈನಿಲುಕಿನ ಸಂಗತಿಯಾದಾಗ ಮುಸ್ಲಿಮರನ್ನೂ ಕೈಬಿಡುತ್ತಾರೆ, ದಲಿತರನ್ನೂ ಕೈಬಿಡುತ್ತಾರೆ, ತಮ್ಮ ಗೆಲುವಿಗೆ ಕಾರಣರಾದ ಯಾವ ಚಿಕ್ಕ ವರ್ಗವನ್ನು ಬೇಕಾದರೂ ಕೈಬಿಡುತ್ತಾರೆ. ಇದಕ್ಕೆ ಮಾಯಾವತಿಗಿಂತ ಬೇರೆ ಉದಾಹರಣೆ ಬೇಕಿಲ್ಲ . ಅಷ್ಟೇಕೆ: ಮೈ ತುಂಬ ಕಾಂಗ್ರೆಸ್ ಮೆತ್ತಿಕೊಂಡಿರುವ ಶರದ್ ಪವಾರ್‌ನಂಥ ರಾಜಕಾರಣಿಯೇ, `ಸೋನಿಯಾ ಗಾಂ ವಿದೇಶಿ ಮಹಿಳೆಯಾಗಿರುವಾಗ ಆಕೆಯನ್ನು ನಾಯಕಿಯಾಗಿ ಸ್ವೀಕರಿಸುವುದು ಹೇಗೆ ?' ಎಂಬ ಮಾತನ್ನಾಡುತ್ತಿದ್ದಾರೆ. ಅಂದಮೇಲೆ ಈ ಕಾಂಗ್ರೆಸ್ಸಿಗರನ್ನು , ಸೆಕ್ಯುಲರಿಸ್ಟ್ ಮುಖವಾಡಿಗಳನ್ನು ನಂಬಿಕೊಂಡು ಮುಸಲ್ಮಾನರು ಬದುಕುವುದಾದರೂ ಹೇಗೆ ?

ಉಳಿದೆಲ್ಲರಿಗಿಂತ ಮುಂಚೆ ಈ ಢೋಂಗಿಗಳನ್ನು ಅರ್ಥ ಮಾಡಿಕೊಂಡವರೇ ಮುಸ್ಲಿಮರು. ಕೇವಲ ಭಾರತದ ಮಟ್ಟದಲ್ಲಲ್ಲ : ಜಾಗತಿಕ ಮಟ್ಟದಲ್ಲೂ ಮುಸ್ಲಿಂ ಸಮುದಾಯ ಪ್ರತ್ಯೇಕಗೊಳ್ಳುತ್ತಿದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ತೀರ ಕಟ್ಟರ್ ಮುಸ್ಲಿಂ ದೇಶಗಳನ್ನು ಅಮೆರಿಕ ಕೂಡ ಮೊದಲಿನಂತೆ ಪಕ್ಕಕ್ಕೆ ಕೂಡಿಸಿಕೊಂಡು ಪ್ರೀತಿಸುತ್ತಿಲ್ಲ . ಮುಸ್ಲಿ ಂ ಉಗ್ರವಾದದಿಂದಾಗಿ ರಷ್ಯದಂತಹ ದೇಶ ಹೈರಾಣಾಗಿ ಹೋಗಿದೆ. ಫ್ರಾನ್ಸ್ ಮತ್ತು ಇಂಗ್ಲೆಂಡ್‌ಗಳು ಪಾಕಿಸ್ತಾನವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ . ಜಗತ್ತಿನ ಅತ್ಯಂತ ಪ್ರಬಲ ಶಕ್ತಿಯಾಗಿ ಬೆಳೆಯುತ್ತಿರುವ ಚೀನಾ, ವ್ಯಾಪಾರೀಕರಣದ ಪ್ರವಾಹದಲ್ಲಿ ತೇಲಿ ಹೋಗುತ್ತಿದೆಯೇ ಹೊರತು, ಪಾಕಿಸ್ತಾನಕ್ಕೆ ಬೆಂಬಲ ಕೊಟ್ಟು ಭಾರತದ ಮೇಲೆ ದಂಡೆತ್ತಿ ಕಳಿಸುವ ಉತ್ಸಾಹ ತೋರುತ್ತಿಲ್ಲ .

ಪರಿಸ್ಥಿತಿ ಹೀಗಿರುವಾಗ, ಯಾವತ್ತಾದರೊಂದು ದಿನ ಭಾರತದಲ್ಲಿರುವ ತಮಗೆ ತೊಂದರೆಯಾದರೆ ಪಕ್ಕದ ಪಾಕಿಸ್ತಾನದಿಂದ ಅಥವಾ ಬಾಂಗ್ಲಾದೇಶದಿಂದ ತಮಗೆ ನೆರವು ಸಿಗಬಹುದು ಎಂಬ ಮೂಢನಂಬಿಕೆಯಿದ್ದ ಚಿಕ್ಕದೊಂದು ಮುಸ್ಲಿಂ ಸಮೂಹವಿತ್ತಲ್ಲ ? ಈ ಚಿಕ್ಕ ಸಮೂಹಕ್ಕೂ ಈಗ ಮನವರಿಕೆಯಾಗಿ ಹೋಗಿದೆ. ಪಕ್ಕದ ದೇಶಗಳಿಂದ ನೆರವು ಬರುವುದಿಲ್ಲ . ಸೌದಿ, ದುಬೈ ಮತ್ತು ಇತರೆ ಕೊಲ್ಲಿ ರಾಷ್ಟ್ರಗಳಲ್ಲೂ ಭಾರತೀಯ ಮುಸ್ಲಿಮರು ಬೇಡವಾಗುತ್ತಿದ್ದಾರೆ. ಮೊದಲಿನ ಹಾಗೆ ಗಲ್ ಮನಿ ಇನ್ನು ಹರಿದು ಬರುವುದಿಲ್ಲ . ಈ ಪರಿಸ್ಥಿತಿಯಲ್ಲಿ ಭಾರತೀಯ ಮುಸಲ್ಮಾನರಿಗೆ ಉಳಿದಿರುವ ಮತ್ತು ಅವರು ಈಗಾಗಲೇ ಆಯ್ದುಕೊಂಡೂ ಉಳಿದಿರುವ ಒಂದು ಸರಳ ದಾರಿಯೆಂದರೆ- ಬಹುಸಂಖ್ಯಾತರೊಂದಿಗೆ ಕೂಡಿ, ನೆಮ್ಮದಿಯಾಗಿ ಬಾಳುವುದು.

ಇದನ್ನೇ ಮುಸ್ಲಿಮರು ೧೯೪೭ರಿಂದಲೂ ಬಯಸಿದ್ದರು. ಆವತ್ತು ಭಜರಂಗಿಗಳೂ ಇರಲಿಲ್ಲ . ಇದ್ದವರು ಬೆರಳೆಣಿಕೆಯಷ್ಟು ಆರೆಸ್ಸಿಸ್ಸಿಗರು ಮತ್ತು ದೇಶ ವಿಭಜನೆಯ ಸಮಯದಲ್ಲಿ ಪಾಕಿಸ್ತಾನಿ ಮುಸ್ಲಿಮರ ಕೈಗಳಲ್ಲಿ ನೊಂದವರು. ಕಾಲಾಂತರದಲ್ಲಿ ಇವರೂ ಸುಮ್ಮನಾಗಿ ಹೋಗುತ್ತಿದ್ದರೇನೋ? ಆದರೆ ಈ ಕಾಂಗ್ರೆಸ್ಸಿಗರು `ಮುಸ್ಲಿಂ ಮನವೊಲಿಸುವಿಕೆ' ಎಂಬುದನ್ನು ಅದ್ಯಾವ ಮಟ್ಟದ ಕ್ಲೀಷೆಯನ್ನಾಗಿ, ಪೀಡೆಯನ್ನಾಗಿ ಬೆಳೆಸುತ್ತ ಹೋದರೆಂದರೆ, ಐವತ್ತು ವರ್ಷಗಳ ಅವಯಲ್ಲಿ ಹಿಂದೂ ಸಂಕುಲ, ಇವರ ಮುಸ್ಲಿಂ ಓಲೈಸುವಿಕೆಯಿಂದಾಗಿಯೇ ಬೇಸತ್ತು ಬಿಜೆಪಿಯ ಕಡೆಗೆ ಜಮೆಯಾಗಿ ಹೋಯಿತು. ಅದಕ್ಕೆ ಸರಿಯಾಗಿ ತಿಥಿಯೂಟದ ಕಾಂಗ್ರೆಸ್ಸಿಗರು ರಾಜಕಾರಣದ ಎಡಬಲ ಗೊತ್ತಿಲ್ಲದ ಸೋನಿಯಾರನ್ನು ತಂದು ತಮ್ಮ ಅನಾಯಕಿಯನ್ನಾಗಿ ಕೂರಿಸಿಕೊಂಡರು. ಆಕೆಯ ಅಪಕ್ವತೆ ಒಂದು ಐಬಾದರೆ, ಆಕೆಯ ವಿದೇಶಿ ಮೂಲವೇ ಇನ್ನೊಂದು ಐಬಾಯಿತು. ಮುಸ್ಲಿಮರು, ಕ್ರಿಶ್ಚಿಯನ್ನರು ಆಕೆಯನ್ನು ವಿದೇಶಿಯಳಾಗಿದ್ದರೂ ಪರವಾಗಿಲ್ಲ ಅಂತ ಒಪ್ಪಿಕೊಂಡರೆಂದು ಗೊತ್ತಾದ ಘಳಿಗೆಯಲ್ಲೇ ಉಳಿದ ಅಷ್ಟೂ ಹಿಂದೂ ಸಂಕುಲ ಬಿಜೆಪಿಯ ಪರವಾಗಿ ನಿಂತು ಬಿಟ್ಟಿತು.

ಈಗ ಕಾಂಗ್ರೆಸ್ಸಿಗರ ಮುಖಗಳಲ್ಲಿ ಕೇವಲ ದಿಗಿಲು ಕಾಣಿಸುತ್ತಿದೆ. ಮೊನ್ನೆ ನಡೆದ ವಿರಾಟ ಸಭೆಗೆ ಬಂದಿದ್ದ ಕೇಸರಿ ಜನ ಕೃಷ್ಣರ ಹಣೆಯಲ್ಲಿ ಬೆವರೆಬ್ಬಿಸಿ ಹೋಗಿದ್ದಾರೆ. ಬಂದವರೆಲ್ಲರ ಮತಗಳೂ ಬಿಜೆಪಿ ಜೋಳಿಗೆಗೆ ಬೀಳುತ್ತವೋ ಇಲ್ಲವೋ, ಆ ಮಾತು ಬೇರೆ. ಬಂದವರಿಗೂ, ಇಲ್ಲೇ ಇದ್ದವರಿಗೂ ಮನವರಿಕೆಯಾಗಿರುವ ಒಂದು ಸತ್ಯವೆಂದರೆ, ಕಾಂಗ್ರೆಸ್ಸಿಗರು ಇನ್ನು ಹಿಂದೂಗಳನ್ನು ಎದುರುಹಾಕಿಕೊಳ್ಳುವುದಿಲ್ಲ .

ನೀವೇ ನೋಡುತ್ತಿರಿ: ಕಾಂಗ್ರೆಸ್ಸು ಇನ್ನೂ ಬದಲಾಗುತ್ತದೆ. ಸೋನಿಯಾ ಜಾಗಕ್ಕೆ ಪ್ರಿಯಾಂಕಾ ಬರಬೇಕಾಗುತ್ತದೆ. ಹೊಸ ಭಜನೆ ಆರಂಭವಾಗುತ್ತದೆ. ಈ ದೇಶ ಇನ್ನೂ ಅದೆಷ್ಟೋ ಮನ್ವಂತರಗಳನ್ನು ಕಣ್ಣಾರೆ ನೋಡಬೇಕಾಗುತ್ತದೆ.

ಈ ಮತ ಪ್ರಚಾರಕ ಪಾಪಿಗಳನ್ನು ಯಾರು ಕ್ಷಮಿಸಬೇಕು ?

ರವಿ ಬೆಳಗೆರೆ


ಒಳ್ಳೆ ಸುದ್ದಿ ಬಂದಿದೆ. ಆಸ್ಟ್ರೇಲಿಯಾದ ಕ್ರೈಸ್ತ ಮತ ಪ್ರಚಾರಕ ಸ್ಟಿವರ್ಟ್ ಗ್ರಹಾಂ ಸ್ಟೇನ್ಸ್‌ನನ್ನು ಅವನ ಮಕ್ಕಳಾದ ಫಿಲಿಪ್ ಮತ್ತು ಟಿಮೂತಿ ಸಮೇತ ೧೯೯೯ರ ಜನವರಿ ೨೨ರಂದು ಒರಿಸ್ಸಾದ ಮನೋಹರ್ ಪುರದಲ್ಲಿ ದಾರಾ ಸಿಂಗ್ ಮತ್ತು ಇತರೆ ಒಂದಷ್ಟು ಜನ ಸೇರಿಕೊಂಡು, ವ್ಯಾನ್‌ನಲ್ಲಿ ಮಲಗಿದ್ದಂತೆಯೇ ಸುಟ್ಟು ಹಾಕಿದ್ದರಲ್ಲ ? ಅವರ ಪೈಕಿ ದಾರಾ ಸಿಂಗ್ ಸೇರಿದಂತೆ ಹದಿಮೂರು ಜನ ತಪ್ಪಿತಸ್ಥರೆಂದು ಒರಿಸ್ಸಾದ ನ್ಯಾಯಾಲಯ ಘೋಷಿಸಿದೆ. ಅವರಿಗೆ ಯಾವ ಶಿಕ್ಷೆ ನೀಡಬೇಕೆಂಬುದನ್ನು ನಾಳೆ ಸೆಪ್ಟೆಂಬರ್ ೨೨ರಂದು ನ್ಯಾಯಾಲಯವು ತಿಳಿಸಲಿದೆ.

`ದೇವರೇ, ಅವರನ್ನು ಕ್ಷಮಿಸು. ನನ್ನ ಗಂಡ ಹಾಗೂ ಇಬ್ಬರು ಮಕ್ಕಳನ್ನು ಜೀವಂತ ಸುಟ್ಟವರನ್ನು ನಾನು ಆವತ್ತೇ ಕ್ಷಮಿಸಿದ್ದೇನೆ. ಈಗ ಭಾರತೀಯ ನ್ಯಾಯಾಲಯ ತಾನು ಮಾಡಬೇಕಾಗಿದ್ದ ಕರ್ತವ್ಯವನ್ನು ದಕ್ಷತೆಯಿಂದ ಮಾಡಿದೆ. ಆದರೆ ಕ್ರೈಸ್ತ ಧರ್ಮದ ಮೂಲ ಮಂತ್ರವೇ ಪ್ರೀತಿ, ಕರುಣೆ, ಕ್ಷಮೆ ! ತಾವೇನು ಮಾಡುತ್ತಿದ್ದೇವೆಂದು ಗೊತ್ತಿಲ್ಲದೆಯೇ ತಪ್ಪು ಮಾಡಿದ ಆ ಜನರನ್ನು ಮರಣ ದಂಡನೆಗೆ ಮಾತ್ರ ಈಡು ಮಾಡಬಾರದು. ದೇವರೇ, ಅವರನ್ನು ಕ್ಷಮಿಸು...ಆಮೆನ್'ಅಂದಿದ್ದಾಳೆ ಗ್ರಹಾಂನ ಪತ್ನಿ ಗ್ಲಾಡಿಸ್ ಜೂನ್ ಸ್ಟೇನ್ಸ್.

ಪಾಪ, ದೊಡ್ಡ ಮನಸ್ಸಿನ ಹೆಣ್ಣು ಮಗಳು. ಗಂಡನನ್ನು ಕೊಂದ ಕಡು ಪಾಪಿಗಳನ್ನೇ ಕ್ಷಮಿಸು ಎಂದು ದೇವರಲ್ಲಿ ಮೊರೆಯಿಟ್ಟಿದ್ದಾಳೆ. ಆಕೆಯ ದೊಡ್ಡತನವನ್ನು ನಾವು ಮೆಚ್ಚಬೇಕು.ಅಂತೆಯೇ ಧರ್ಮ ಪ್ರಚಾರಕ ಗ್ರಹಾಂನನ್ನೂ ಅವನ ಇಬ್ಬರು ಅಪ್ರಾಪ್ತ ಮಕ್ಕಳನ್ನೂ ವ್ಯಾನಿನಲ್ಲಿ ಮಲಗಿರುವಾಗ ಜೀವಂತ ಸುಟ್ಟ ದಾರಾ ಸಿಂಗ್ ಮತ್ತು ಅವನ ಹಿಂದೂ ಮತಾಂಧ ಬೆಂಬಲಿಗರಿಗೆ ಕಟುವಾದ ಶಿಕ್ಷೆ ಆಗಲೇಬೇಕು. ಆದರೆ ನನ್ನದೊಂದು ಸಣ್ಣ ಪ್ರಶ್ನೆಯಿದೆ. ನಿಮಗದು ವಿಚಿತ್ರ ಎನಿಸಬಹುದು. ಗ್ರಹಾಂ ಸ್ಟೇನ್ಸ್‌ನನ್ನು ಸುಟ್ಟು ಕೊಂದವರಿಗೆ ಕೋರ್ಟು ಶಿಕ್ಷೆ ಕೊಡಲಿದೆ. ಗಂಡನನ್ನು ಸುಟ್ಟು ಕೊಂದರೂ ಆ ಪಾಪಿಗಳನ್ನು ಕ್ಷಮಿಸು ಎಂದು ಸ್ಟೇನ್ಸ್ ಪತ್ನಿ ಏಸುವಿನಲ್ಲಿ ಮೊರೆಯಿಟ್ಟಿದ್ದಾಳೆ. ಆದರೆ ಭಾರತಕ್ಕೆ ಎಲ್ಲೆಲ್ಲಿಂದಲೋ ಬಂದು ಮತ ಪ್ರಚಾರ ಮಾಡುತ್ತಿದ್ದಾರಲ್ಲ ?

ಈ ಮತ ಪ್ರಚಾರಕ ಪಾಪಿಗಳನ್ನು ಯಾರು ಕ್ಷಮಿಸಬೇಕು ? ಅಥವಾ ಇವರನ್ನು ಯಾರು ದಂಡಿಸಬೇಕು ?

ನನ್ನ ಪ್ರಶ್ನೆ ಅಲ್ಲಿಗೇ ನಿಲ್ಲುವುದಿಲ್ಲ. ಗೋ ಹತ್ಯೆಗೆ, ಗೋ ಮಾಂಸ ತಿನ್ನುವುದಕ್ಕೆ ಸಂಬಂಸಿದಂತೆ ದೇವೇಗೌಡರು ಆಡಿದರೆನ್ನಲಾದ ಮಾತುಗಳನ್ನು ಕೇಳಿಸಿಕೊಳ್ಳಿ. `ಅಯ್ಯೋ ಬಿಡ್ರೀ, ದನದ ಮಾಂಸ ತಿನ್ನೋರು ಎಲ್ಲಾ ಜಾತೀಲೂ ಇದ್ದಾರೆ. ಒಕ್ಕಲಿಗರು ತಿನ್ನಲ್ವಾ ? ಲಿಂಗಾಯತರು ತಿನ್ನಲ್ವಾ ?' ಎಂಬ ಧಾಟಿಯ ಅತ್ಯಂತ ಬೇಜವಾಬ್ದಾರಿಯುತ ಮಾತುಗಳಿವು. ಅವುಗಳನ್ನು ಗೌಡರು ತೀರ ಉದ್ದೇಶ ಪೂರ್ವಕವಾಗಿ ಆಡಿಲ್ಲ. ಲಿಂಗಾಯತರನ್ನಾಗಲೀ ವಕ್ಕಲಿಗರನ್ನಾಗಲೀ of course ಯಾವುದೇ ಜಾತಿಯವರನ್ನಾಗಲೀ ಒಬ್ಬ ರಾಜಕಾರಣಿ ತೀರ ಚುನಾವಣೆಗಳ ಸಮಯದಲ್ಲಿ ಹೀಗೆ ಎದುರು ಹಾಕಿಕೊಳ್ಳುವ ಧೈರ್‍ಯ ಮಾಡುವುದಿಲ್ಲ. ಆದರೆ ಮಾತನಾಡುವ ಭರದಲ್ಲಿ ಪಕ್ಕದಲ್ಲಿ ಕುಳಿತ ಮುಸ್ಲಿಮರಿಗೋ ಕ್ರೈಸ್ತರಿಗೋ ಖುಷಿಯಾಗಲೀ ಅಂತ `ಅಯ್ಯೋ ತಿನ್ನದೆ ಏನು ನಮ್ಮೋರೂ ತಿಂತಾರೆ ಬಿಡಿ !' ಅಂದಿರುತ್ತಾರೆ.

ನೀವು ಗಮನಿಸಿ ನೋಡಿ. ಹೀಗೆ ಮಾತನಾಡುವುದು ಭಾರತದ ಎಲ್ಲ ಜಾತಿಗಳ ಎಲ್ಲ ರಾಜಕೀಯ ಪಕ್ಷಗಳ ಕೆಲವೊಮ್ಮೆ ಎಲ್ಲ ಪತ್ರಕರ್ತ- ಬುದ್ಧಿಜೀವಿಗಳ ಅಭ್ಯಾಸ. ಅದು ಚಟ. ಅದು ಬಾಯಿ ತುರಿಕೆ. ಅದು ಮುಸ್ಲಿಂ- ಕ್ರಿಶ್ಚಿಯನ್ ಜಾತಿಗಳವರ ಓಟು ಸೆಳೆದುಕೊಳ್ಳುವ ಕ್ಷುದ್ರ ವಿಧಾನ. ಭಾರತದಂತಹ ದೇಶದಲ್ಲಿ ಮುಸ್ಲಿಮರ, ಕ್ರೈಸ್ತರ ಹತ್ಯೆಗಳಾದಾಗ ಅದನ್ನು ಲಬ್ಬಗುಟ್ಟಿ ಬಾಯಿ ಬಡಿದುಕೊಂಡು ಖಂಡಿಸಿದರೆ ಅದು ಸೆಕ್ಯುಲರಿಸಂ. ಉಳಿದಂತೆ ಪಂಜಾಬರ, ಸಿಖ್ಖರ, ಕಾಶ್ಮೀರಿ ಪಂಡಿತರ ನರಮೇಧಗಳು ನಡೆದು ಹೋದಾಗ ಆ ಬಗ್ಗೆ ದಿವ್ಯ ಮೌನ ಧರಿಸಿದರೆ, ಆಹಾ ಅದು ಕಣ್ರೀ ಜನಪ್ರಿಯತೆ. ಅದು ಕಣ್ರೀ ಮಾನವೀಯತೆ. ನಿಜವಾದ ಸೆಕ್ಯುಲರಿಸಂ ಅಂದರೆ ಅದಲ್ಲವೇ ? ಹೀಗಾಗಿ ನೀವು ಹೆಗಡೆ ಬೊಮ್ಮಾಯಿ- ದೇವೇಗೌಡ- ಕೃಷ್ಣ - ಕಾಗೋಡು ತಿಮ್ಮಪ್ಪ ಮುಂತಾದ ಯಾರೂ ಒಂದೇ ಒಂದು ಸಲ ಕಾಶ್ಮೀರದ ಹಿಂದೂ ಮತ್ತು ಸಿಖ್ ಹತ್ಯೆಗಳ್ನು ಖಂಡಿಸಿ ಒಂದೇ ಒಂದು ಹೇಳಿಕೆ ಕೊಡುವುದಿಲ್ಲ. ಶಹಬಾಸ್ ಸೆಕ್ಯುಲರಿಸಂ !

ಅದು ಒತ್ತಟ್ಟಿಗಿರಲಿ. ಗ್ರಹಾಂ ಸ್ಟೇನ್ಸ್ ಹತ್ಯೆಯನ್ನು ಮೈ ತುಂಬ ಬಾಯಿ ಮಾಡಿಕೊಂಡು ಖಂಡಿಸಿದ ರಾಜಕಾರಣಿಗಳ ಪಟ್ಟಿ ತೆಗೆದುನೋಡಿ. ಅದರಲ್ಲಿ ಸೋನಿಯಾ ಗಾಂಯಿಂದ ಹಿಡಿದು ಬಾಬುರಾವ್ ಚಿಂಚನಸೂರ್ ತನಕ ಎಲ್ಲ ತರಹದ ಅವಿವೇಕಿಗಳೂ ಇದ್ದಾರೆ. ನಡೆದು ಹೋದ ಮೂರು ಬರ್ಬರ ಹತ್ಯೆಗಳಿಗಾಗಿ ಅವರು ಕಣ್ಣೀರು ಸುರಿಸಿದ್ದಾರೆ.

ಆದರೆ ಭಾರತ ದೇಶದ ಇಡೀ ಈಶಾನ್ಯ ಭಾಗದಲ್ಲಿ ಪ್ರತಿನಿತ್ಯ ಸ್ಥಳೀಯ ಧರ್ಮದ ಕೊಲೆಯಾಗುತ್ತಿದೆ. ಕೊರಳಲ್ಲಿ ರುದ್ರಾಕ್ಷಿ, ಹಣೆಗೆ ನಾಮ, ರಾಮಮಂದಿರ, ಭಗವಾ ಧ್ವಜ, ಕೈಲಿ ತ್ರಿಶೂಲ ಇದ್ಯಾವುದೂ ಧರಿಸದೆ ತಮ್ಮ ಪಾಡಿಗೆ ತಾವು ಬದುಕುತ್ತಿದ್ದ ಬುಡಕಟ್ಟು ಜನ ಇವತ್ತು ಏನಾಗಿ ಹೋಗಿದ್ದಾರೆ ಎಂಬುದನ್ನು ಯಾರಾದರೂ ಗಮನಿಸಿದ್ದಾರಾ ? ಅವರು ಹಿಂದೂಗಳಾಗಿರಲಿಲ್ಲ. ಅವರು ರಾಮನ ಪೂಜೆಯವರಲ್ಲ. ಆರೆಸ್ಸೆಸಿಗರಲ್ಲ. ನಾನು ಅಂಥವರ ಪರವಾಗಿ ಮಾತನಾಡುತ್ತಿಲ್ಲ. ಅವರೆಲ್ಲ ಬುಡಕಟ್ಟಿನವರಾಗಿದ್ದರು. ಅವರಿಗೆ ತಮ್ಮದೇ ಆದ ದೇವ ದೇವತೆಗಳಿದ್ದವು. ಹಾಡಿದ್ದವು. ನೃತ್ಯಗಳಿದ್ದವು. ಅವರದೊಂದು ಸಂಸ್ಕೃತಿ ಅಂತ ಇತ್ತು. ಅದೆಲ್ಲದರ ನಡುವೆಯೂ ಅವರಿಗೆ ಭಾರತದ ಮೇಲೆ ಪ್ರೀತಿಯಿತ್ತು. ಚೀಣದಂತಹ ಚೀಣ ಮೈಮೇಲೇರಿ ಬಂದಾಗ ಅವರು ಭಾರತದ ಪರವಾಗಿ ನಿಂತು ಬಡಿದಾಡಿದ್ದರು. ಭಾರತದ ನೌಕರಿ- ಚಾಕರಿ ಮಾಡಿದ್ದರು. ಪ್ರತೀ ಜನವರಿ ೨೬ಕ್ಕೆ ದಿಲ್ಲಿಗೆ ಬಂದು ಪರೇಡಿನಲ್ಲಿ ಕುಣಿದು ಜೈ ಹಿಂದ್ ಅಂದು ತಂತಮ್ಮ ಬೆಟ್ಟಗಳ ತಪ್ಪಲುಗಳಿಗೆ ವಾಪಸು ಹೋಗಿದ್ದರು. ಈಶಾನ್ಯ ಭಾರತದ ಬುಡಕಟ್ಟಿನ ಜನ ನಮ್ಮ ಲಮಾಣಿಗರಂತೆ, ಹಕ್ಕಿ ಪಿಕ್ಕಿಗಳಂತೆ, ಸಿದ್ದಿಗಳಂತೆ ತಮ್ಮ ಪಾಡಿಗೆ ತಾವಿದ್ದರು. ಅವರ್‍ಯಾರನ್ನೂ `ನೀವು ಹಿಂದೂಗಳಾಗಿ' ಎಂದು ಭಾರತೀಯರು ಒತ್ತಾಯಿಸಿರಲಿಲ್ಲ. ರಥಯಾತ್ರೆಗೆ ಕರೆದಿರಲಿಲ್ಲ. ಇಟ್ಟಿಗೆ ಹೊರೆಸಿ ತಿಲಕ ಹಚ್ಚಿರಲಿಲ್ಲ.

ಆದರೆ ಅಂಥ ಲಕ್ಷಾಂತರ ಜನರ ಕೊರಳಿಗೆ ಇಂದು ಶಿಲುಬೆ ಹಾಕಿದವರ್‍ಯಾರು ಸ್ವಾಮಿ ? ನಿಮಗೂ ಗೊತ್ತಿರಬಹುದು. ಬುಡಕಟ್ಟು ಜನಾಂಗದವರು ಎಲ್ಲೆಲ್ಲಿರುತ್ತಾರೋ ಅಲ್ಲೆಲ್ಲ ಕ್ರೈಸ್ತ ಮತ ಪ್ರಚಾರಕರು ಕೆಲಸ ಮಾಡುತ್ತಾರೆ. ಅಲ್ಲಿಗೆ ಏಸುವು ಬರುವುದಿಲ್ಲ . ಕೋಟ್ಯಂತರ ಡಾಲರುಗಳು ಬರುತ್ತವೆ. ಪೆಪ್ಸಿ ಬರುತ್ತದೆ. ಅಮೆರಿಕದ ಅಪತ್ಯ ಮತ್ತು ಕ್ರೈಸ್ತ ಧರ್ಮ ಹೇಗೆ ಜೊತೆ ಜೊತೆಯಾಗಿ ಬಿಡುತ್ತವೋ ಗಮನಿಸಿ. ಇವತ್ತು ನಾಗಾಲ್ಯಾಂಡ್‌ನ ೯೦ ಪರ್ಸೆಂಟ್ ಜನ ಕ್ರೈಸ್ತರು. ಮಿಜೋರಾಂನಲ್ಲಿ ಅವರು ೮೫ ಪರ್ಸೆಂಟಿನಷ್ಟಿದ್ದಾರೆ. ಮೇಘಾಲಯದಲ್ಲಿ ಅರವತ್ತೈದು ಪರ್ಸೆಂಟು ! ತೀರ ಅರುಣಾಚಲ ಪ್ರದೇಶದಂತಹ ಗುಡ್ಡ ಮೋಡಗಳ ಸೀಮೆಯಲ್ಲಿ ೧೯೬೧ರಲ್ಲಿ ಬರೀ ೧೭೫೦ ಜನ ಕ್ರೈಸ್ತರಿದ್ದರು. ಅವರಿವತ್ತು ಒಂದು ಲಕ್ಷ ಹದಿನೈದು ಸಾವಿರದಷ್ಟಾಗಿದ್ದಾರೆ. ಅಲ್ಲಿ ಮೊದಲು ಒಂದೇ ಒಂದು ಗುಡಿಯಿರಲಿಲ್ಲ. ಇವತ್ತು ೭೦೦ ಚರ್ಚುಗಳಿವೆ. ಇದೂ ಸಂತೋಷವೇ. ಪ್ರೇಮ- ಕರುಣೆ-ಕ್ಷಮೆಯನ್ನು ಬೋಸುವ ಏಸುವಿನ ಧರ್ಮ ನಮ್ಮಲ್ಲಿಗೆ ಬಂದರೆ ಅದನ್ನು ಸ್ವೀಕರಿಸೋಣ. ಆದರೆ ತೀರ ಹಿರಿಯೂರಿನಂಥ ಚಿಕ್ಕ ಊರಿನಲ್ಲಿ, ಕರ್ನಾಟಕದ ನಟ್ಟ ನಡುವೆ ಪಾದ್ರಿಯೊಬ್ಬ ಬರೀ ಒಂದು ಸೈಕಲ್ ಕೊಡಿಸಿದುದಕ್ಕಾಗಿ ಇಡೀ ಒಂದು ಕುಟುಂಬದಷ್ಟು ಲಮಾಣಿಗರು ಕ್ರೈಸ್ತರಾಗಿ ಪರಿವರ್ತಿತರಾಗಿ ಹೋದರಲ್ಲ ? ಅಂಥ ಪಾತಕವನ್ನು ಹೇಗೆ ಸಹಿಸಿಕೊಳ್ಳೋಣ. ನೆನಪಿರಲಿ, ನಮ್ಮದು ಸಾವಿರ ದೇವರುಗಳ, ದೈವಗಳ ಬಗ್ಗೆ ಬಹುಮುಖೀ ನಂಬಿಕೆಗಳ ಬಣ್ಣ ಬಣ್ಣ ಸಮಾಜ. ಇದರ ಕೊರಳಿಗೆ ಒಂದೇ ಒಂದು ಶಿಲುಬೆ ಹಾಕಿ ಇಡೀ ಬಣ್ಣಗಳ ಸಮೂಹವನ್ನೇ ಬಿಳೀ ನಿಲುವಂಗಿಯಲ್ಲಿ ಮುಚ್ಚಿ ಹಾಕುವುದು ಗ್ರಹಾಂ ಸ್ಟೇನ್ಸ್‌ನ ಹತ್ಯೆಗಿಂತ ದೊಡ್ಡ ಅಪರಾಧ.

ಹೋಗಲಿ, ಬುಡಕಟ್ಟಿನ ಜನ ಏಸು ಸಿದ್ಧಾಂತಗಳೆಡೆಗೆ ಹೃತ್ಪೂರ್ವಕವಾಗಿ ಆಕರ್ಷಿತರಾಗಿ ಕನ್ವರ್ಟ್ ಆಗುತ್ತಾರಾ ? ಆದರೆ ಸಂತೋಷವೇ. ಆದರೆ ಬುಡಕಟ್ಟಿನವರಿರುವ ಹಳ್ಳಿಗಳಲ್ಲಿ ಕ್ರೈಸ್ತ ಪಾದರಿಗಳು ಮೊದಲು ಎಲ್ಲರನ್ನೂ ಪ್ರಾರ್ಥನೆಗೆ ಕರೆಯುತ್ತಾರೆ. ಅಲ್ಲಿ ಒಂದು ಮಿರ್‍ಯಾಕಲ್ ಬಾಕ್ಸ್ ಎಂಬ ಹೆಸರಿನ ಪವಾಡ ಪೆಟ್ಟಿಗೆ ಇಟ್ಟಿರುತ್ತಾರೆ. ಶಾಲೆಯ ಫೀಜಿಗೆ ನಂಗೆ ಹಣವಿಲ್ಲ. ಖಾಯಿಲೆಯ ಖರ್ಚಿಗೆ ಹಣವಿಲ್ಲ. ನಂಗೊಂದು ಹಸು ಬೇಕು. ಗಂಡನಿಗೆ ಸೈಕಲ್ ಬೇಕು- ಇಂಥ ವಿನಂತಿಗಳನ್ನು ಚೀಟಿಯಲ್ಲಿ ಬರೆದು ಹಾಕಿಬಿಟ್ಟರೆ ಸಾಕು. ಒಂದೇ ವಾರದಲ್ಲಿ ಪವಾಡ ಸಂಭವಿಸುತ್ತದೆ. ಫೀಜು, ಹಸು, ಸೈಕಲ್ಲು, ಔಷ - ಎಲ್ಲವೂ ಅವರವರ ಮನೆಗೆ ತಲುಪಿ ಪವಾಡ ಸಂಭವಿಸಿಬಿಟ್ಟಿರುತ್ತದೆ. ಅದರ ಮುಂದಿನ ವಾರ ಅವೆಲ್ಲ ಕುಟುಂಬಗಳ ಕೊರಳಿಗೆ ಶಿಲುಬೆ ನೇತಾಡುತ್ತಿರುತ್ತದೆ. ನಿಜವಾದ ಪವಾಡ ಅದು.

ಒರಿಸ್ಸಾದ ದಾರಾ ಸಿಂಗ್ ಮಾಡಿದ್ದು ಹೇಯ ಕೃತ್ಯ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು. ಖಂಡಿಸಬೇಕು. ಆದರೆ ಬದುಕಿದ್ದಷ್ಟು ದಿನ ಒರಿಸ್ಸಾದಲ್ಲಿ ಗ್ರಹಾಂ ಸ್ಟೇನ್ಸ್ ಮಾಡಿದ್ದು ಇದೇ ಪವಾಡಗಳನ್ನ. ಅದನ್ನು ಮಾತ್ರ ಯಾರೂ ಖಂಡಿಸುವುದಿಲ್ಲ. ಏಕೆಂದರೆ ಕ್ರೈಸ್ತರ, ಮುಸಲ್ಮಾನರ ಓಟುಗಳು ಎಣಿಕೆಗೆ ಸಿಗುತ್ತವೆ. ಕಾಶ್ಮೀರಿ ಪಂಡಿತರು, ಸಿಖ್ಖರು ಯಾವ ಗಿಡದ ತೊಪ್ಪಲು ?
ಇಷ್ಟಾಗಿ, ನಾನು ಹಿಂದೂ ಧರ್ಮ ಸಂರಕ್ಷಣೆಯಾಗಬೇಕು ಎಂದು ಬೊಬ್ಬಿರಿಯುತ್ತಿಲ್ಲ. ಅಸಲು ದೇವರನ್ನೇ ನಂಬದ ನನಗೆ ಎಲ್ಲ ಧರ್ಮಗಳೂ ಒಂದೇ. ಆದರೆ ನಮ್ಮ ದೇಶದ ಸಂಸ್ಕೃತಿ, ಅದರ ವೈವಿಧ್ಯತೆ, ಅದರ ಐಡೆಂಟಿಟಿಗಳಿಗೆ ಆಪತ್ತು ಬಂದಾಗ ಪ್ರತಿಭಟಿಸದೇ ಇದ್ದರೆ ಅದನ್ನು ನಾನು ಸೆಕ್ಯುಲರಿಸಂ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಒಮ್ಮೆ ಫ್ರಾನ್ಸ್ ಕಡೆಗೆ ತಿರುಗಿ ನೋಡಿ. ಅಲ್ಲಿ ಪಂಥ (Sect) ಗಳನ್ನು ನಿಯಂತ್ರಿಸಲೆಂದೇ ಒಂದು ಇಲಾಖೆಯಿದೆ. ಒಬ್ಬ ಮಂತ್ರಿಯಿದ್ದಾನೆ. ಫ್ರಾನ್ಸ್‌ನಲ್ಲಿ ಇತ್ತೀಚೆಗೆ ಬ್ರಹ್ಮಕುಮಾರಿ ಸಿದ್ಧಾಂತದ ಕುರಿತು ಪಾಠ ಮಾಡಿದ ಇಬ್ಬರು ಮೇಷ್ಟ್ರುಗಳನ್ನು ಫ್ರೆಂಚ್ ಪೊಲೀಸರು ಜೈಲಿಗೆ ಹಾಕಿದ್ದರು. ( ಟೈಮ್ಸ್ ಆಫ್ ಇಂಡಿಯಾ ೧೭.೧೦.೦೩). ಜಪಾನದಲ್ಲಿ ಸಾಯಿಬಾಬಾ ನಿಷಿದ್ಧ. ಅಮೆರಿಕದಿಂದ ರಜನೀಶರನ್ನು ಓಡಿಸಿದ್ದೇ, ಆತ ಕ್ರಿಸ್ತನ ವಿರುದ್ಧ ಮಾತನಾಡಿದ್ದಕ್ಕಾಗಿ. ಚೀನದಲ್ಲಿ ಮುಸ್ಲಿಮರನ್ನು ಸಂಘಟಿತರಾಗಲು ಬಿಡುವುದಿಲ್ಲ. ಇದನ್ನೆಲ್ಲ `ಸರಿ' ಅಂತ ನಾನು ವಾದಿಸುತ್ತಿಲ್ಲ. ನಮ್ಮದು ಪ್ರಜಾಪ್ರಭುತ್ವ. ಎಲ್ಲವುದಕ್ಕೂ ಇಲ್ಲಿ ಸ್ವಾಗತವಿದೆ. ಆದರೆ ಪ್ರಜೆಗಳ ಬದುಕಿನ ವೈವಿಧ್ಯತೆಯನ್ನೇ ದೋಚಿ ಇಡೀ ದೇಶದ ಕೊರಳಿಗೆ ಯಾರಾದರೂ ಶಿಲುಬೆ ಹಾಕುತ್ತಿದ್ದರೆ ಸುಮ್ಮನಿರಬೇಕಾ ? ಹಾಗೆ ಸುಮ್ಮನಿರುವವನ್ನು ಏನನ್ನಬೇಕು.

ದೇವೇಗೌಡ ? ಕೃಷ್ಣ ? ಸೆಕ್ಯುಲರಿಸಂ ? ಅಥವಾ ಓಟುಗಳಿಗಾಗಿ ಏನನ್ನು ಬೇಕಾದರೂ ಮಾರಿಕೊಳ್ಳುವ ದೇಶನಾಶಕರು ?
ಹೆಸರು ನೀವೇ ಇಡಿ.