Thursday, August 24, 2006

ವಂದೇ ಮಾತರಂಗೆ ಕಡೆವಂದೇ ಹೇಳಹೊರಟವರ ಕುರಿತು

ವಿಶ್ವೇಶ್ವರ ಭಟ್
ವಿಶ್ವೇಶ್ವರ ಭಟ್:


ಪತ್ರಕರ್ತ ಚೋ.ರಾಮಸ್ವಾಮಿ ಹೇಳುತ್ತಿದ್ದರು, `ನಮ್ಮ ರಾಜಕಾರಣಿಗಳು ಎಂಥ ನೀಚ ಮಟ್ಟಕ್ಕೆ ಬೇಕಾದರೂ ಹೋಗಲೂ ಹೇಸದವರು. ಅದಕ್ಕೆ ಭಾರತದ ರಾಜಕಾರಣದಲ್ಲಿ ಅಸಂಖ್ಯ‌ಉದಾಹರಣೆಗಳು ಸಿಗುತ್ತವೆ. ಗಡಿಯಲ್ಲಿನ ನಮ್ಮ ಬೇಹುಗಾರನ ಸುಳಿವನ್ನು ಶತ್ರು ದೇಶದ ಸೈನಿಕರಿಗೆ ಹೇಳುವುದರಿಂದ ಹಿಡಿದು ರಕ್ಷಣೆ, ಬಾಹ್ಯಾಕಾಶ, ಅಣುಸ್ಥಾವರ, ದೇಶದ ಭದ್ರತೆಗೆ ಸಂಬಂಸಿದ ಅಮೂಲ್ಯ, ಸೂಕ್ಷ್ಮ ಮಾಹಿತಿಯನ್ನು ಸಹಾ ಮಾರಾಟಕ್ಕಿಡಬಲ್ಲರು. ತಮ್ಮ ಸ್ವಾರ್ಥಕ್ಕಾಗಿ ದೇಶವನ್ನೇ ಮಾರಾಟ ಮಾಡುವ ಸಂದರ್ಭ ಬಂದರೆ, ಚೌಕಾಶಿ ಮಾತುಕತೆಗೆ ಕುಳಿತುಕೊಳ್ಳಬಲ್ಲರು'. ಚೋ ಏರಿದ ದನಿಯಲ್ಲಿ ಪಟಾಕಿಸರಕ್ಕೆ ಬೆಂಕಿಯಿಟ್ಟವರಂತೆ ಸಡಸಡ ಮಾತಾಡುವಾಗ ವಿಷಯವನ್ನು ಉತ್ಪ್ರೇಕ್ಷಿಸಬಹುದೇನೋ ಎಂದೆನಿಸುತ್ತದೆ. ಆಗ ಅವರು ಹೇಳುತ್ತಿದ್ದರು -ನಾನು ಹೀಗೆ ಮಾತಾಡಿದರೆ ನಿಮಗೆ ಅನಿಸುತ್ತದೆ ಈ ಚೋ.ರಾಮಸ್ವಾಮಿಗೆ ಬುದ್ಧಿಯಿಲ್ಲ. ಬಾಯಿಗೆ ಬಂದಿದ್ದನ್ನೆಲ್ಲ ಹೇಳುತ್ತಾನೆ. ರಾಜಕಾರಣಿಗಳನ್ನು ಹೀನಾಯಮಾನವಾಗಿ ಬೈಯುತ್ತಾನೆ ಅಂತ ಒಳಗೊಳಗೆ ಅಂದುಕೊಳ್ಳುತ್ತಾರೆ. ನನ್ನ ಮಾತಿನ ಮರ್ಮ ತಕ್ಷಣ ಅವರಿಗೆ ಅರ್ಥವಾಗದಿರಬಹುದು. ಆದರೆ ನನ್ನ ಮಾತು ಅವರಿಗೆ ಅರ್ಥವಾಗಲು ಹೆಚ್ಚು ದಿನ ಬೇಕಾಗುವುದಿಲ್ಲ.

ಯಾಕೋ ಎಂದೋ ಹೇಳಿದ ಚೋ ಮಾತು ಮನಸ್ಸಿನ ಮುಂದೆ ಹಾದು ಹೋಯಿತು.

`ವಂದೇ ಮಾತಾರಂ' ಕುರಿತು ಎದ್ದಿರುವ ವಿವಾದವನ್ನೇ ನೋಡಿ. ನಮ್ಮ ಸ್ವಾರ್ಥ ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲರೆಂಬುದಕ್ಕೆ ನಿದರ್ಶನ. ವೋಟ್‌ಬ್ಯಾಂಕ್ ರಾಜಕಾರಣದ ಮುಂದೆ ನಮ್ಮ ದೇಶ, ದೇಶಗೀತೆ, ಧ್ಯೇಯ, ಮೌಲ್ಯ, ದೇಶಹಿತ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಧ್ಯೇಯದೀವಿಗೆಯಾಗಿ ಅಸಂಖ್ಯ ಭಾರತೀಯರ ಅಪದಮನಿ, ಅಭಿದಮನಿಗಳಲ್ಲಿ ಸೂರ್ತಿ ಕಾರಂಜಿ ಸೃಜಿಸಿದ ಗೀತೆ -`ವಂದೇ ಮಾತರಂ' ಸಹ ರಾಜಕಾರಣಿಗಳ ಕೈಯಲ್ಲಿ ಹೇಗೆ ದಾಳವಾಗುತ್ತದೆ ನೋಡಿ.

`ವಂದೇ ಮಾತರಂ' ವಿವಾದ ಆರಂಭವಾಗುವುದು ಹೀಗೆ.

ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್ ದೇಶದ ಎಲ್ಲ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆಯುತ್ತಾರೆ. ವಿಷಯ ಏನಂದ್ರೆ -`ಸೆಪ್ಟೆಂಬರ್ ೭ರಂದು ವಂದೇ ಮಾತರಂ ಶತಮಾನೋತ್ಸವ ನಿಮಿತ್ತ, ಅಂದು ಬೆಳಗ್ಗೆ ೧೧ಕ್ಕೆ ದೇಶಾದ್ಯಂತ ಎಲ್ಲ ಶಾಲೆಗಳಲ್ಲಿ ಈ ರಾಷ್ಟ್ರಗೀತೆ(ವಂದೇ ಮಾತರಂ)ಯ ಮೊದಲ ಎರಡು ಪಲ್ಲವಿಗಳನ್ನು ಕಡ್ಡಾಯವಾಗಿ ಹಾಡಬೇಕು. ' ಈ ಪತ್ರ ಬರುತ್ತಿದ್ದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ರಾಜ್ಯದ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಿದರು. `ವಂದೇ ಮಾತರಂ'ನ್ನು ಹಾಡುವಂತೆ ಅದರಲ್ಲಿ ಸೂಚಿಸಲಾಗಿತ್ತು. ಮುಲಾಯಂ ಸಿಂಗ್‌ರು ಅಜುನ್‌ಸಿಂಗ್ ಅವರ ಪತ್ರವನ್ನು ಅನುಮೋದಿಸಿದ್ದರು.

ಯಾವಾಗ ಮುಲಾಯಂ ಸಿಂಗ್ ಯಾದವ್‌ರ ಸುತ್ತೋಲೆ ಹೊರಬಿತ್ತೋ, ಉತ್ತರ ಪ್ರದೇಶದ ಮುಸ್ಲಿಂ ಸಮುದಾಯದ ಹಿರಿಯರು, ಧರ್ಮಗುರುಗಳು, ಮೌಲ್ವಿಗಳು ರಾತ್ರೋ ರಾತ್ರಿ ಸಭೆ ಸೇರಿದರು. ವಂದೇ ಮಾತರಂ ವಿರುದ್ಧ ದನಿ‌ಎತ್ತಲು ನಿರ್ಧರಿಸಿದರು. ಪ್ರಮುಖ ಇಸ್ಲಾಮಿಕ್ ಸಂಘಟನೆಗಳ ಪೈಕಿ ಒಂದಾದ ಫಿರಂಗಿ ಮಹಲ್ ಅಧ್ಯಕ್ಷ ಮೌಲಾನ ಖಲೀದ್ ರಶೀದ್ ಹೇಳಿದರು -`ಮುಸ್ಲಿಂ ವಿದ್ಯಾರ್ಥಿಗಳು ವಂದೇಮಾತರಂ ಹಾಡುವುದು ಇಸ್ಲಾಂ ವಿರೋ. ನಮ್ಮ ಸಮುದಾಯದವರ್‍ಯಾರೂ ಇದನ್ನು ಹಾಡಬಾರದು. ವಂದೇಮಾತರಂ ಹಾಡಿದರೆ ಇಸ್ಲಾಮ್‌ಗೆ ಅವಹೇಳನ ಮಾಡಿದ ಹಾಗೆ. ಸೆಪ್ಟೆಂಬರ್ ೭ರಂದು ಮುಸ್ಲಿಂ ವಿದ್ಯಾರ್ಥಿಗಳು ಇದನ್ನು ಹಾಡಕೂಡದೆಂದು ನಾನು ಕರೆ ಕೊಡುತ್ತೇನೆ.'

ದಿಲ್ಲಿಯ ಜಮಾ ಮಸೀದಿ ಶಾಹಿ ಇಮಾಮ್ ಸಯ್ಯದ್ ಅಹಮದ್ ಬುಖಾರಿ ಮಿಂಚಿನಂತೆ ಕಾರ್ಯಪ್ರವೃತ್ತರಾದರು. ತಕ್ಷಣ ತಮ್ಮ ಬೆಂಬಲಿಗರೊಂದಿಗೆ ಮುಸ್ಲಿಂ ಸಮುದಾಯದ ಹಿರಿಯರೊಂದಿಗೆ ಸಭೆ ಸೇರಿ ಅನಂತರ ಕರೆ ಕೊಟ್ಟರು -`ವಂದೇಮಾತರಂನ್ನು ಯಾವ ಕಾರಣಕ್ಕೂ ಹಾಡಕೂಡದು. ಅದು ಇಸ್ಲಾಮಿನ ನಂಬಿಕೆಗಳಿಗೆ ವಿರುದ್ಧವಾಗಿದೆ. ಒಂದು ವೇಳೆ ವಂದೇ ಮಾತರಂನ್ನು ಹಾಡಲೇ ಬೇಕೆಂಬ ಒತ್ತಡ ಹೇರುವುದೆಂದರೆ ನಮ್ಮ ಸಮುದಾಯವನ್ನು ತುಳಿದಂತೆ. ಇಸ್ಲಾಂ ಪ್ರಕಾರ ಒಬ್ಬನು ತನ್ನ ದೇಶವನ್ನು ಪ್ರೀತಿಸುವುದು, ಗೌರವಿಸುವುದು ತಪ್ಪಲ್ಲ. ಅಷ್ಟೇ ಅಲ್ಲ ಸಂದರ್ಭ ಬಂದರೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಬಹುದು. ಆದರೆ ಯಾರನ್ನಾದರೂ ಪೂಜಿಸುವ ಪ್ರಶ್ನೆ ಎದುರಾದರೆ, ಅಲ್ಲಾಹನನ್ನು ಮಾತ್ರ ಪೂಜಿಸಬೇಕು. ಮುಸ್ಲಿಮನಾದವನು ತನ್ನ ತಂದೆ, ತಾಯಿ, ಮಾತೃಭೂಮಿ ಹಾಗೂ ಪ್ರವಾದಿಯನ್ನು ಉನ್ನತ ಸ್ಥಾನದಲ್ಲಿರಿಸಿ ಗೌರವಿಸಿದರೂ, ಇವರೆಲ್ಲರನ್ನೂ ಪೂಜಿಸುವಂತಿಲ್ಲ. ಸ್ವಾತಂತ್ರ್ಯ ನಂತರದಿಂದ ಕೇಂದ್ರದ ಹಾಗೂ ರಾಜ್ಯಗಳ ಎಲ್ಲ ಸರ್ಕಾರಗಳು ಮುಸ್ಲಿಮರನ್ನು ತುಳಿಯುತ್ತಿವೆ. ವಂದೇಮಾತರಂ ಹಾಡಬೇಕೆಂಬ ಸುತ್ತೋಲೆ ಈ ದಿಸೆಯಲ್ಲಿ ಮುಸ್ಲಿಂ ಸಮುದಾಯದ ಮೇಲೆ ಎಸಗಿದ ಮತ್ತೊಂದು ಗದಾಪ್ರಹಾರ. ಸ್ವಯಂಪ್ರೇರಿತರಾಗಿ ಯಾರಾದರೂ ಹಾಡುವುದಾದರೆ ನನ್ನ ಆಕ್ಷೇಪವಿಲ್ಲ. ಆದರೆ ಹಾಡಲೇ ಬೇಕೆಂಬ Pಕ್ಷಿಟ್ಟಳೆ, ಕಟ್ಟುಪಾಡು ವಿಸಿದರೆ, ಅದನ್ನು ಬಲವಾಗಿ ಪ್ರತಿಭಟಿಸಬೇಕಾದೀತಿ. ಇಂಥ ಸುತ್ತೋಲೆ ವಾಪಸ್ ಪಡೆಯುವಂತೆ ಸರಕಾರಕ್ಕೆ ಎಚ್ಚರಿಕೆ ನೀಡಬೇಕಾದೀತು. ದೇಶವನ್ನು ಪೂಜಿಸುವುದು ವಂದೇ ಮಾತರಂ ಉದ್ದೇಶ ಅಲ್ಲ. ಈ ಹಾಡಿನಲ್ಲಿ ದೇಶವನ್ನು ತಾಯಿಗೆ ಹೋಲಿಸಲಾಗಿದೆ ಹಾಗೂ ಜನರನ್ನು ಆಕೆಯ ಮಕ್ಕಳೆಂದು ಚಿತ್ರಿಸಲಾಗಿದೆ. ಈ ವಾದವನ್ನು ನಾವು ಒಪ್ಪುವುದಿಲ್ಲ. ಇದು ನಮ್ಮ ಧರ್ಮಕ್ಕೆ ವಿರೋಧವಾದುದು. '

ಅರ್ಜುನ್ ಸಿಂಗ್ ಸುತ್ತೋಲೆ ಕೇವಲ ೨೪ ಗಂಟೆಗಳಲ್ಲಿ ಮುಸ್ಲಿಂ ಸಮುದಾಯದಲ್ಲಿ ಅದೆಂಥ ಸಂಚಲನವನ್ನುಂಟು ಮಾಡಿತೆಂದರೆ, ದೇಶದೆಲ್ಲೆಡೆಯಿರುವ ಮುಸ್ಲಿಂ ಸಮುದಾಯದ ಮುಖಂಡರು ತಮ್ಮ ತಮ್ಮ ಊರುಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ, ವಂದೇ ಮಾತರಂನ್ನು ಹಾಡಬೇಕೆಂಬ ಪ್ರಸ್ತಾಪವನ್ನು ವಿರೋಸಿದರು.

ಅರ್ಜುನ್ ಸಿಂಗ್ ಮುಸ್ಲಿಂ ಸಮುದಾಯದ ಅಂತರಂಗ ತುಮುಲವೇನೆಂಬುದು ತಟ್ಟನೆ ಅರ್ಥವಾಯಿತು. ತಮ್ಮ ಮೊದಲಿನ ಆದೇಶದಿಂದ ದೇಶಾದ್ಯಂತವಿರುವ ಮುಸ್ಲಿಮರಿಗೆ ಅಸಮಾಧಾನವಾಗಿದೆಯೆಂದು ಮನವರಿಕೆಯಾಯಿತು. ಅದು ರಾಷ್ಟ್ರಗೀತೆಯ ವಿಚಾರವಾಗಿರಬಹುದು ಅಥವಾ ಇನ್ನಿತರ ಯಾವುದೇ ವಿಷಯವಾಗಿರಬಹುದು, ಅಲ್ಪಸಂಖ್ಯಾತರನ್ನು ಎದುರು ಹಾಕಿಕೊಳ್ಳುವುದುಂಟಾ? ಅರ್ಜುನ್ ಸಿಂಗ್ ಮತ್ತೊಂದು ಸುತ್ತೋಲೆ ಕಳಿಸಿದರು. ಅಂದು ಭಾನುವಾರ ಸರಕಾರಿ ಕಚೇರಿಗೆ ರಜೆಯಿದ್ದರೂ ತಮ್ಮ ಸಿಬ್ಬಂದಿಯನ್ನು ಕರೆದು ಆದೇಶ ಹೊರಡಿಸಿದರು. ವಾರಣಸಿಯಲ್ಲಿ ಪತ್ರಿಕಾಗೋಷ್ಠಿಯನ್ನೂ ಕರೆದರು -`ವಂದೇಮಾತರಂನ್ನು ಹಾಡಲೇಬೇಕೆಂಬ ಕಡ್ಡಾಯವಿಲ್ಲ. ಹಾಡಬಹುದು ಅಥವಾ ಬಿಡಬಹುದು' ಎಂದು ಬಿಟ್ಟರು.

ಆಗಲೇ ಮುಸ್ಲಿಂ ಸಮುದಾಯ ನಿಟ್ಟುಸಿರುಬಿಟ್ಟಿದ್ದು. ಅರ್ಜುನ್‌ಸಿಂಗ್ ಹೇಳಿದ್ದಕ್ಕೆ ಕಾಂಗ್ರೆಸ್ ಠಸ್ಸೆ ಒತ್ತಿತ್ತು. ಆ ಪಕ್ಷದ ವಕ್ತಾ ಅಭಿಷೇಕ್ ಮನು ಸಿಂಘ್ವಿ ಹೇಳಿದರು -`ನಮ್ಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರೇರಣೆ ಮೂಡಿಸಿದ, ದೇಶಕ್ಕಾಗಿ ಬಲಿದಾನಗೈದ ಅಸಂಖ್ಯ ಜನರಿಗೆ ಸೂರ್ತಿಯಾದ ವಂದೇಮಾತರಂ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಈ ರಾಷ್ಟ್ರಕ್ಕೆ ಅಪಾರ ಗೌರವವಿದೆ. ಆದರೂ ಯಾವುದೋ ಒಂದು ಸಮುದಾಯ ಅಥವಾ ಗುಂಪು ವಂದೇ ಮಾತರಂ ಹಾಡುವುದರ ಬಗ್ಗೆ ಬೇರೆ ರೀತಿ ಯೋಚಿಸಿದರೆ ಅವರು ಹಾಡಬಹುದು, ಇಲ್ಲವೇ ಬಿಡಬಹುದು. ಅದು ಅವರಿಗೆ ಬಿಟ್ಟ ವಿಚಾರ. ಈ ವಿಷಯದಲ್ಲಿ ಕೇಂದ್ರ ಮಂತ್ರಿ ಅರ್ಜುನ್ ಸಿಂಗ್ ನಿರ್ಧಾರವನ್ನು ಕಾಂಗ್ರೆಸ್ ಸಮ್ಮತಿಸುತ್ತದೆ. ವಂದೇ ಮಾತರಂನ್ನು ಹಾಡಲೇಬೇಕೆಂಬ ನಿಯಮ ಕಡ್ಡಾಯವೇನಿಲ್ಲ. ಅದು ಐಚ್ಛಿಕ. '

ಯಾವ ವಾರಾಣಸಿ ಅಖಿಲ ಭಾರತ ಕಾಂಗ್ರೆಸ್ ಅವೇಶನದಲ್ಲಿ ೧೯೦೫ರಲ್ಲಿ ವಂದೇ ಮಾತರಂನ್ನು ಹಾಡಲಾಗಿದ್ದೋ ಹಾಗೂ ರಾಷ್ಟ್ರೀಯ ಹಾಡು ಎಂದು ಮಾನ್ಯ ಮಾಡಿ ಸ್ವೀಕರಿಸಲಾಗಿತ್ತೋ, ಅದೇ ವಾರಾಣಸಿಯಲ್ಲಿ ಅರ್ಜುನ್ ಸಿಂಗ್ `ವಂದೇ ಮಾತರಂನ್ನು ಹಾಡಿದರೆ ಹಾಡಿ ಬಿಟ್ಟರೆ ಬಿಡಿ' ಎಂದು ಅಪ್ಪಣೆ ಕೊಡಿಸಿದ್ದರು.

೧೮೭೬ರಲ್ಲಿ ಬಂಕಿಮ್‌ಚಂದ್ರ ಚಟರ್ಜಿ ವಂದೇ ಮಾತರಂ ಬರೆದಾಗ ಅದು ಸ್ವಾತಂತ್ರ್ಯದ ರಣಕಹಳೆಯಂತೆ ಎಲ್ಲ ದೇಶಭಕ್ತರ ಬಾಯಲ್ಲಿ ಮೊಳಗತೊಡಗಿತು. `ವಂದೇ ಮಾತರಂ' ಘೋಷಣೆಯಿಲ್ಲದೇ ಯಾವ ಕಾರ್ಯಕ್ರಮವೂ ಆರಂಭವಾಗುತ್ತಿರಲಿಲ್ಲ. ಕೊನೆಗೊಳ್ಳುತ್ತಿರಲಿಲ್ಲ. ವಂದೇ ಮಾತರಂ ಅಂದರೆ ಪ್ರಖರ ದೇಶಪ್ರೇಮ, ದೇಶಭಕ್ತಿಯ ಸಂಕೇತ. ಈ ಘೋಷಣೆಗೆ ಇಡೀ ದೇಶವಾಸಿಗಳನ್ನು ಬಡಿದೆಬ್ಬಿಸುವ ಃಶಕ್ತಿಯಿತ್ತು. ಒಂದು ಹಂತದಲ್ಲಿ ವಂದೇಮಾತರಂ ಘೋಷಣೆಯನ್ನು ಬ್ರಿಟಿಷರು ನಿಷೇಸಿದ್ದರು. ಇದನ್ನು ಪ್ರತಿಭಟಿಸಿ ಘೋಷಣೆ ಕೂಗಿದರೆಂಬ ಕಾರಣಕ್ಕೆ ಸಹಸ್ರಾರು ಜನರನ್ನು ಅವರು ಜೈಲಿಗೆ ಹಾಕಿದ್ದರು. ವಂದೇ ಮಾತರಂ ಅಂದ್ರೆ ಭಾರತವನ್ನು ಪ್ರೀತಿಸುವವರೆಲ್ಲರ ರಾಷ್ಟ್ರೀಯ ಮಂತ್ರ. ೧೮೯೬ರಲ್ಲಿ ಕೋಲ್ಕತಾ ಕಾಂಗ್ರೆಸ್ ಅವೇಶನದಲ್ಲಿ ಸ್ವತಃ ರವೀಂದ್ರ ನಾಥ ಟಾಗೋರ್‌ರು ವಂದೇ ಮಾತರಂ ಹಾಡಿದ್ದರು. ಲಾಲಾ ಲಜಪತರಾಯ್ ಲಾಹೋರ್‌ನಿಂದ ವಂದೇ ಮಾತರಂ ಹೆಸರಿನ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಬ್ರಿಟಿಷ್ ಗುಂಡಿಗೆ ಬಲಿಯಾದ, ನೇಣಿಗೆ ಶರಣಾದ ಅದೆಷ್ಟೋ ದೇಶಪ್ರೇಮಿಗಳ ಕೊನೆಯ ಉದ್ಗಾರ -ವಂದೇ ಮಾತರಂ!

ಅನೇಕ ವರ್ಷಗಳ ಕಾಲ ವಂದೇ ಮಾತರಂ ನಮ್ಮ ರಾಷ್ಟ್ರಗೀತೆಯೂ ಆಗಿತ್ತು. ಅನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಗ `ಜನಗಣಮನ' ರಾಷ್ಟ್ರಗೀತೆಯಾಯಿತು. ಇದರ ಹಿಂದಿನ ರಾಜಕೀಯ, ಉದ್ದೇಶ ಅದೇನೇ ಇರಲಿ, ಜನಗಣಮನಕ್ಕಿಂತ ವಂದೇಮಾತರಂನಲ್ಲೇ ರಾಷ್ಟ್ರಭಕ್ತಿಯ ಅದಮ್ಯ ಸುರಣವಿದೆಯೆಂಬ ಅಭಿಪ್ರಾಯವಿದೆ. ಅಂತಿಮವಾಗಿ ವಂದೇಮಾತರಂ ಬದಲಿಗೆ `ಜನಗಣಮನ'ವನ್ನೇ ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಲಾಯಿತು. ೧೯೫೦ರ ಜನವರಿ ೨೪ರಂದು ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಕಾನ್‌ಸ್ಟಿಟುಯೆಂಟ್ ಅಸೆಂಬ್ಲಿ ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದು ಉಲ್ಲೇಖಾರ್ಹ -`ಜನಗಣಮನ ಪದಗಳುಳ್ಳ ಹಾಡನ್ನು ಭಾರತದ ರಾಷ್ಟ್ರಗೀತೆ(anthem)ಯಾಗಿ ವಂದೇ ಮಾತರಂನ್ನು ರಾಷ್ಟ್ರೀಯ ಹಾಡಾಗಿ(national song) ಸ್ವೀಕರಿಸಲಾಗಿದೆ. ಆದರೂ ವಂದೇ ಮಾತರಂ ಹಾಡಿಗೆ ಜನಗಣಮನದಷ್ಟೇ ಸಮನಾದ ಗೌರವ ಮತ್ತು ಸ್ಥಾನಮಾನವಿದೆ' ರಾಷ್ಟ್ರಪತಿಯವರ ಈ ಘೋಷಣೆಯನ್ನು ಇಡೀ ಅಸೆಂಬ್ಲಿ ಮೇಜುಕುಟ್ಟಿ ಸ್ವಾಗತಿಸಿತ್ತು. ಆನಂತರ ನಮ್ಮ ಸಂವಿಧಾನದಲ್ಲೂ ಸಹ ವಂದೇ ಮಾತರಂನ್ನು ಸಂಸತ್ತಿನಲ್ಲೂ ಹಾಡುವ ಸಂಪ್ರದಾಯವಿದೆ.

ಹೀಗಿರುವಾಗ ಒಂದು ಕೋಮಿನ ಕೆಲ ನಾಯಕರು ಆಕ್ಷೇಪಿಸಿದರೆಂಬ ಕಾರಣಕ್ಕೆ, ವೋಟ್‌ಬ್ಯಾಂಕ್ ರಾಜಕಾರಣಕ್ಕೆ ವಂದೇ ಮಾತರಂ ಬಗ್ಗೆ ಸರಕಾರ ಹಾಗೂ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ನಿರ್ಧಾರ ದುಗ್ಭ್ರಮೆ ಮೂಡಿಸುವಂಥದ್ದು. ಜಗತ್ತಿನ ಬೇರಾವ ದೇಶದಲ್ಲೂ ಘಟಿಸದ, ಊಹಿಸಲೂ ಆಗದಂಥ ಘಟನೆಗೆ ನಾವೆಲ್ಲ ಸಾಕ್ಷಿಯಾಗಬೇಕಿರುವುದು ದುರ್ದೈವ. ಇದು ರಾಷ್ಟ್ರಕ್ಕೆಸಗಲಾದ ಅವಮಾನವಲ್ಲದೇ ಮತ್ತೇನು? ಈ ದೇಶದಲ್ಲಿ ನೆಲೆಸುವ ಪ್ರತಿಯೊಬ್ಬರೂ ರಾಷ್ಟ್ರ, ರಾಷ್ಟ್ರೀಯತೆಯನ್ನು ಪ್ರತಿನಿಸುವ ಸಂಕೇತಗಳಿಗೆ ತಲೆಬಾಗಲೇಬೇಕು. ಇಂದು ರಾಷ್ಟ್ರೀಯ ಹಾಡಿಗೆ ಆಕ್ಷೇಪಿಸುವವರು ನಾಳೆ ರಾಷ್ಟ್ರಧ್ವಜದ ಬಗ್ಗೆ ತಕರಾರು ತೆಗೆಯಬಹುದು. ಅವರನ್ನು ಓಲೈಸಲು ಸರಕಾರ ಮಣಿಯುವುದಿಲ್ಲವೆನ್ನುವ ಗ್ಯಾರಂಟಿಯೇನು? ರಾಷ್ಟ್ರಗೀತೆಗೂ ಇದೇ ಒತ್ತಡ ಬಂದರೆ? ಆಗಲೂ ನಮ್ಮ ಮಾನಗೆಟ್ಟ ಸರಕಾರಗಳು ಮಣಿಯಲಾರವೆಂಬ ಗ್ಯಾರಂಟಿಯೇನು?

ಈ ದೇಶದ ಘೋಷವಾಕ್ಯಕ್ಕೇ ಅದರ ಶತಮಾನೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಈ ಗತಿ ಬಂದರೂ ಯಾರೂ ಕ್ಕಾರದ ಘೋಷಣೆ ಹಾಕುತ್ತಿಲ್ಲ. ಏನೆನ್ನೋಣ?

Thursday, August 10, 2006

ತಿರುಪತಿಯಲ್ಲಿ ಮತಾಂತರ

ತಿರುಮಲ ತಿರುಪತಿ ಸಂರಕ್ಷಣಾ ಸಮಿತಿ (ಕರ್ನಾಟಕ)
ನಂ. ೫೫, ಯಾದವ ಸ್ಮೃತಿ, ಶೇಷಾದ್ರಿಪುರ, ೧ನೇ ಮುಖ್ಯ ರಸ್ತೆ, ಬೆಂಗಳೂರು - ೫೬೦೦೨೦
(ಪ್ರಕಟಣೆಯ ಕೃಪೆಗಾಗಿ)

ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಪರಮ ಪವಿತ್ರ ಕ್ಷೇತ್ರ ಭೂವೈಕುಂಠವೆನಿಸಿರುವ ತಿರುಮಲ ತಿರುಪತಿ ಪರಿಸರದಲ್ಲಿ ಅನೇಕ ರೀತಿಯ ಕ್ರಿಸ್ತೀಕರಣ ಚಟುವಟಿಕೆಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ.

ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು, ಪೇಜಾವರ ಮಠ, ಉಡುಪಿ ಇವರ ಆದೇಶದಂತೆ ಸತ್ಯ ಶೋಧನಾ ಸಮಿತಿಯೊಂದು ಎರಡು ದಿನಗಳ ಕಾಲ ತನಿಖೆ ನಡೆಸಿದೆ. ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಶ್ರೀ ಬಿಕ್ಷಾಪತಿಯವರ ನೇತೃತ್ವದ ಈ ಸಮಿತಿ ತನ್ನ ವರದಿಯಲ್ಲಿ ತಿರುಮಲ ತಿರುಪತಿ ಶ್ರೀ ಕ್ಷೇತ್ರದಲ್ಲಿ ತೀವ್ರವಾಗಿ ನಡೆಯುತ್ತಿರುವ ಕ್ರಿಸ್ತೀಕರಣದ ಚಟುವಟಿಕೆಗಳನ್ನು ಬಹಿರಂಗಗೊಳಿಸಿದೆ.

ಸತ್ಯ ಶೋಧನಾ ಸಮಿತಿಯು ಬಹಿರಂಗಗೊಳಿಸಿರುವ ವರದಿಯ ಸಂಕ್ಷಿಪ್ತ ರೂಪ

ಸಮಿತಿಯು ದಿನಾಂಕ ೨೧, ೨೨ ಜೂನ್ ೨೦೦೬ರಂದು ತಿರುಪತಿ-ತಿರುಮಲಕ್ಕೆ ಭೇಟಿ ನೀಡಿದಾಗ ೫೦ಕ್ಕೂ ಹೆಚ್ಚು ಸಾರ್ವಜನಿಕರು ಸಮಿತಿಯ ಸದಸ್ಯರನ್ನು ಭೇಟಿ ಮಾಡಿ ತಮ್ಮ ಗಮನಕ್ಕೆ ಬಂದ ಚಟುವಟಿಕೆಗಳನ್ನು ವಿವರಿಸಿದ್ದಾರೆ.

ಅಲ್ಲದೆ ಸಮಿತಿಯು TTDಯ ನಿರ್ವಾಹಕ ಮುಖ್ಯಸ್ಥ ಶ್ರೀ APVN ಶರ್ಮಾ, IAS ರವರನ್ನು ದಿನಾಂಕ ೨೨-೬-೦೬ರಂದು ಭೇಟಿ ಮಾಡಿತು. ಅದೇ ಸಂದರ್ಭದಲ್ಲಿ ಶ್ರೀ ಧರ್ಮಾ ರೆಡ್ಡಿ, ವಿಶೇಷಾಧಿಕಾರಿಗಳು, ಶ್ರೀ ಅರವಿಂದ ಕುಮಾರ್, IPS, ಮುಖ್ಯ ಸುರಕ್ಷಾ ಅಧಿಕಾರಿ, ಶ್ರೀ ರಾಮಚಂದ್ರ ರೆಡ್ಡಿ, ಕಾನೂನು ಅಧಿಕಾರಿ ಇವರೂ ಉಪಸ್ಥಿತರಿದ್ದರು. ಈ ಎಲ್ಲರೂ ನೀಡಿದ ಮಾಹಿತಿಯ ವಿಶ್ಲೇಷಣೆಯಿಂದ ಹೊರಬಂದ ಸತ್ಯಾಂಶಗಳು:

೧. ಕ್ರೈಸ್ತಮತ ಪ್ರಚಾರ ಮತ್ತು ಮತಾಂತರ ಪ್ರಯತ್ನದ ಚಟುವಟಿಕೆಗಳು
ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಗಳು ಹಾಗೂ ಮಿಶನರಿಗಳು ತಿರುಪತಿ-ತಿರುಮಲದಲ್ಲಿ ತಮ್ಮ ಮತಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಕಾಲೇಜುಗಳಲ್ಲಿ ಪರೀಕ್ಷೆ ನಡೆಯುವಾಗ ವಿದ್ಯಾರ್ಥಿಗಳಿಗೆ, ತಿರುಮಲದಿಂದ ತಿರುಪತಿಗೆ ಬಸ್‌ನಲ್ಲಿ ಬರುವಾಗ ಯಾತ್ರಾರ್ಥಿಗಳಿಗೆ, ಧರ್ಮದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತ ಭಕ್ತಾದಿಗಳಿಗೆ ಬೈಬಲ್ ಹಂಚುವ ಪ್ರಕರಣಗಳ ಬಗ್ಗೆ ದೂರುಗಳು ದಾಖಲಾಗಿವೆ.

೨. TTDಯ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೈಸ್ತಮತ ಪ್ರಚಾರ
* ಶ್ರೀ ವೇಂಕಟೇಶ್ವರ ವಿಶ್ವವಿದ್ಯಾಲಯದ (SV University) ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದೇವಸಂಗೀತಂ ವಿದ್ಯಾರ್ಥಿಗಳಿಗೆ ಕ್ರೈಸ್ತಮತ ಪ್ರಚಾರ ಮಾಡುವುದಲ್ಲದೆ ಚರ್ಚ್‌ಗೆ ಹೋಗಲು ಬಲವಂತ ಮಾಡಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ.
* ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀಮತಿ ವೀಣಾ ನೋಬಲ್ ದಾಸ್ ವಿಶ್ವವಿದ್ಯಾಲಯದ ಕಾಲೇಜುಗಳಿಂದ ವೇಂಕಟೇಶ್ವರ ಮತ್ತು ಪದ್ಮಾವತಿಯರ ಭಾವಚಿತ್ರಗಳನ್ನು ತೆಗೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಯೇಸುಕ್ರಿಸ್ತನ ಭಾವಚಿತ್ರ ಮತ್ತು ಶಿಲುಬೆಗಳನ್ನು ಸ್ಥಾಪಿಸಿದ್ದಾರೆ. ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಣೆಗೆ ತಿಲಕ ಇಡುವುದನ್ನು ನಿಷೇಧಿಸಿದ್ದಾರೆ.

೩. TTDಯಲ್ಲಿ ಉದ್ಯೋಗ
* TTDಯ ಕೆಲವು ಹುದ್ದೆಗಳಿಗೆ ಕ್ರೈಸ್ತರು ಮತ್ತು ಮುಸಲ್ಮಾನರನ್ನು ಕಾನೂನು ಮೀರಿ ನೇಮಿಸಿಕೊಳ್ಳಲಾಗಿದೆ. ಹೀಗಾಗಿ ತಿರುಮಲದಲ್ಲಿ ನೆಲೆಸಿರುವ ೪೦ ಕ್ರೈಸ್ತ ಕುಟುಂಬಗಳು ಪ್ರಾರ್ಥನಾಕೂಟ, ಸಭೆಗಳನ್ನು ನಡೆಸುತ್ತಿದ್ದಾರೆ. ತೋಟಗಾರಿಕೆ ಮೇಲ್ವಿಚಾರಕರಾಗಿರುವ ಕ್ರೈಸ್ತಮತಸ್ಥರಾದ ಗೋಪೀನಾಥ್ ``ಆ ಕಪ್ಪು ಶಿಲೆಗೆ ಹೂವಿನ ಹಾರ ಏಕೆ ಹಾಕುತ್ತೀರಿ?'' ಎಂದು ಶ್ರೀ ವೇಂಕಟೇಶ್ವರನ ಮೂರ್ತಿಯನ್ನು ಭಕ್ತಾದಿಗಳ ಎದುರೇ ನಿಂದಿಸುತ್ತಾರೆ.

ಗುತ್ತಿಗೆ ಕೆಲಸಗಾರರನ್ನು (Contract employees) ತೆಗೆದುಕೊಳ್ಳುವಾಗಲೂ ಹಿಂದುಗಳಲ್ಲದವರನ್ನು ಕಾನೂನಿನ ವಿರುದ್ಧವಾಗಿ ತೆಗೆದುಕೊಳ್ಳಲಾಗುತ್ತಿದೆ. ಸುಮಾರು ೪೦ ಮುಸ್ಲಿಂ ಕುಟುಂಬಗಳು ಅಂಗಡಿ ಮುಂಗಟ್ಟು ತೆರೆದು ತಿರುಮಲದಲ್ಲಿ ನೆಲೆಸಿವೆ.

೪. ತಿರುಮಲದಲ್ಲಿ ನಡೆಯುತ್ತಿರುವ ಇತರ ಕಾನೂನುಬಾಹಿರ ಚಟುವಟಿಕೆಗಳು
* TTD ಅಧಿಕಾರಿಯ ಬೇಜವಾಬ್ದಾರಿ ಹಾಗೂ ಅಶ್ರದ್ಧೆಯ ಫಲವಾಗಿ ತಿರುಮಲ-ತಿರುಪತಿಯಲ್ಲಿ ಮದ್ಯಮಾರಾಟ, ಮಾಂಸಮಾರಾಟ, ಜೂಜು, ಗೋಹತ್ಯೆಯಂತಹ ಘೋರಕೃತ್ಯಗಳು ನಡೆಯುತ್ತಿವೆ.
* ನಾಗಲಾಪುರದ TTD ಕಲ್ಯಾಣಮಂಟಪವನ್ನೇ ಕ್ರೈಸ್ತ ಪಾದ್ರಿಗಳು ತಮ್ಮ ಪ್ರಾರ್ಥನಾಸಭೆಗಳಿಗೆ ಉಪಯೋಗಿಸುತ್ತಿದ್ದಾರೆ.
* ಹೊಸದಾಗಿ ರಚನೆಯಾಗಿರುವ TTDಯ ಮಂಡಳಿಗೆ ಮತಾಂತರಿತ ವ್ಯಕ್ತಿ ಶ್ರೀ ರೋಸಯ್ಯ, IAS ರವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ತಿರುಮಲದಲ್ಲಿ ಭಕ್ತಾದಿಗಳ ಇಚ್ಛೆಗೆ ವಿರುದ್ಧವಾಗಿ mallಗಳು, food courtಗಳು ಮುಂತಾದ ಮನರಂಜನಾ ಚಟುವಟಿಕೆಗಳನ್ನು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಪ್ರಾರಂಭಿಸಲು ಮುಂದಾಗಿದೆ.

೫. ಪವಿತ್ರ ಸಪ್ತಗಿರಿ
`ತಿರುಮಲದ ಎಲ್ಲ ಏಳು ಬೆಟ್ಟಗಳೂ ಶ್ರೀ ವೇಂಕಟೇಶ್ವರನ ಅಧೀನ, ಅವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ' ಎಂದು ಆಂಧ್ರಪ್ರದೇಶದ ಉಚ್ಚನ್ಯಾಯಾಲಯದ ವಿಭಾಗೀಯ ಪೀಠವು ತನ್ನ ತೀರ್ಪೊಂದರಲ್ಲಿ ಆದೇಶ ಹೊರಡಿಸಿದೆ. ಈ ತೀರ್ಪನ್ನು ಮತ್ತು

ಕೋಟ್ಯಂತರ ಭಕ್ತಾದಿಗಳ ಭಾವನೆಗಳನ್ನು ತಿರಸ್ಕರಿಸಿ ತಿರುಮಲದ ಎರಡೇ ಬೆಟ್ಟಗಳನ್ನೊಳಗೊಂಡ ಸುಮಾರು ೨೭ ಚದರ ಕಿ. ಮೀ. ಕ್ಷೇತ್ರವನ್ನು ಮಾತ್ರ ತಿರುಮಲದ ಅಧೀನಕ್ಕೆ ಬಿಟ್ಟು ಉಳಿದ ಕ್ಷೇತ್ರವನ್ನು ಅದರ ವ್ಯಾಪ್ತಿಯಿಂದ ಹೊರತೆಗೆದು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಯೋಚನೆ ನಡೆದಿದೆ.

೬. TTDಯ ಸಂಪನ್ಮೂಲ
`ಹಿಂದು ಧರ್ಮ ಪರಿರಕ್ಷಣಾ ಸಮಿತಿ'ಯ `ಹಿಂದು' ಪದ ಕೈಬಿಟ್ಟು ಅದನ್ನು `ಧರ್ಮ ಪ್ರಚಾರ ಪರಿಷತ್' ಎಂದು ಮರುನಾಮಕರಣ ಮಾಡಲಾಗಿದೆ. ತಿರುಮಲದಲ್ಲಿ ಭಕ್ತಾದಿಗಳ ಕೊಡುಗೆಯಿಂದ ಸಂಗ್ರಹವಾಗುವ ಧನರಾಶಿಯು ಹಿಂದುಧರ್ಮದ ಪ್ರಚಾರಕ್ಕಾಗಿ, ತತ್ಸಂಬಂಧಿತ ಉಪನ್ಯಾಸಗಳು, ಹರಿಕಥೆ, ಪ್ರವಚನ, ಗಾಯನಸಭೆ ಇತ್ಯಾದಿಗಳಿಗೆ, ಹಿಂದು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ವಿನಿಯೋಗವಾಗಬೇಕಿತ್ತು. ಆದರೆ, ಇಂತಹ ಕಾರ್ಯಗಳನ್ನು ಗಣನೀಯ ಪ್ರಮಾಣದಲ್ಲಿ ಮಾಡುತ್ತಲೇ ಇಲ್ಲ. ಬದಲಾಗಿ ಇತರ ಚಟುವಟಿಕೆಗಳಿಗೆ ಹಣವನ್ನು ವಿನಿಯೋಗಿಸಲಾಗುತ್ತಿದೆ. ಬಹುದೊಡ್ಡ ಜಾಗವನ್ನು ಮಸೀದಿ ಕಟ್ಟಲು ದಾನ ಮಾಡಲಾಗಿದೆ.

ಸಮಿತಿಯ ಸದಸ್ಯರು:

ಶ್ರೀ ಜಸ್ಟಿಸ್ ಜಿ. ಬಿಕ್ಷಾಪತಿ, ನಿವೃತ್ತ ನ್ಯಾಯಾಧೀಶರು, ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ
ಶ್ರೀ ಟಿ. ಎಸ್. ರಾವ್, IPS, ನಿವೃತ್ತ ಪೋಲೀಸ್ ಮಹಾ ನಿರ್ದೇಶಕರು, ಆಂಧ್ರಪ್ರದೇಶ ಸರಕಾರ
ಶ್ರೀಮತಿ ಡಾ ಪಿ. ಗೀರ್ವಾಣಿ, ನಿವೃತ್ತ ಉಪಕುಲಪತಿ, ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯ, ತಿರುಪತಿ
ಶ್ರೀ ಡಾ ಆರ್. ಶ್ರೀಹರಿ, ನಿವೃತ್ತ ಉಪಕುಲಪತಿ, ದ್ರವಿಡ ವಿಶ್ವವಿದ್ಯಾಲಯ, ಕುಪ್ಪಂ

Thursday, August 03, 2006

ಇಂಡಿಯಾ, ನಿನ್ನನ್ನು ಆಳಲು ಒಬ್ಬ ಶುದ್ಧ ಇಂಡಿಯನ್ ಇಲ್ಲವಾ ?

ರವಿ ಬೆಳಗೆರೆ
ರವಿ ಬೆಳಗೆರೆ


ಇನ್ನು ಮೇಲೆ ಜಗತ್ತಿನ ಯಾವುದೇ ದೇಶದ ಯಾವುದೇ ಪತ್ರಿಕೆ ಸುದ್ದಿ ಬರೆದರೂ, `ಇಟಲಿ ಮೂಲದ ಭಾರತದ ಪ್ರಧಾನಿ ಸೋನಿಯಾಗಾಂ ಏನೆಂದರೆಂದರೆ... ' ಅಂತಲೇ ಬರೆಯುತ್ತದೆ.

ಇತಿಹಾಸ ರಿಪೀಟಾಗಿದೆ. ಭಾರತ ಇನ್ನೊಂದು ಸಲ ವಿದೇಶದವರ ಆಳ್ವಿಕೆಗೆ ಒಳಪಟ್ಟಿದೆ. ನೂರು ಕೋಟಿ ಜನರಿರುವ ದೇಶಕ್ಕೆ ಒಬ್ಬೇ ಒಬ್ಬ ಭಾರತೀಯ ಪ್ರಧಾನಿಯನ್ನು ಹುಡುಕಲಾಗಲಿಲ್ಲ. ಇದಲ್ಲವೇ ದುರಂತ? ಇದು ನಾಚಿಕೆಗೇಡು. ವಂದೇ ಮಾತ ರೋಮ್!' ಅಂತ ಬಿಜೆಪಿಯವರು ಒಬ್ಬರಾದ ಮೇಲೊಬ್ಬರಂತೆ ಮೊಬೈಲುಗಳಿಗೆ ಮೆಸೇಜು ಕಳಿಸಿ ನಿಡುಸುಯ್ಯುತ್ತಿದ್ದಾರೆ. ಮತ್ತೆ ನೆಹರೂ ಕುಟುಂಬದ ಕೂಸು ಕೆಂಪುಕೋಟೆಯ ಬುರುಜಿನ ಮೇಲೆ ನಿಂತು ಆಗಸ್ಟ್ ಪಂದ್ರಾದ ಪತಾಕೆ ಹಾರಿಸುವ ಕಾಲ ಬಂದಿದೆ.

ಇಲ್ಲಿ ಎಸ್ಸೆಂ ಕೃಷ್ಣ, ಪಕ್ಕದಲ್ಲಿ ನಾಯುಡು ಕೆತ್ತಾ ಪತ್ತಾ ಒದೆ ತಿಂದಿದ್ದಾರೆ. ಕೃಷ್ಣ ಒಬ್ಬರೇ ಅಲ್ಲ: ಅವರೊಂದಿಗೆ ಅನೈತಿಕ ಸಂಧಾನಗಳನ್ನು ಮಾಡಿಕೊಂಡ ಮಾದೇಗೌಡ, ರೈತ ಸಂಘದ ಪುಟ್ಟಣ್ಣನಯ್ಯನಂಥವರು ಕೂಡಾ ತಪರಾಕಿ ತಿಂದಿದ್ದಾರೆ. ಮೋಟಮ್ಮ, ಸಗೀರ್, ವಿಶ್ವನಾಥ್, ಮಲಕರೆಡ್ಡಿ ಮುಂತಾದ ಸಜ್ಜನ ಮಂತ್ರಿಗಳನ್ನು ಸೋಲಿಸಿದ ಕೈಯಲ್ಲೇ ಜಯಚಂದ್ರ, ದಿವಾಕರ ಬಾಬು, ಬೆಂಕಿ ಮಹದೇವ, ಚಂದ್ರೇಗೌಡ, ಉಸ್ತಾದ್, ರಮನಾಥ ರೈ, ಚಿಂಚನಸೂರ, ಶ್ರಿಕಂಠಯ್ಯ, ಕಮರುಲ್ಲ ಇಸ್ಲಾಂರಂತಹದ ನೀಚ ಮಂತ್ರಿಗಳನ್ನೂ ಮತದಾರ ಕೆನ್ನೆಗೆ ಬಾರಿಸಿ ಮನೆಗೆ ಕಳಿಸಿದ್ದಾನೆ. ಈ ಸೋಲು, ಅವಮಾನ, ಹೀನಾಯ ಸ್ಥಿತಿಯ ಅಷ್ಟೂ ಜವಾಬ್ದಾರಿ ಕೃಷ್ಣರದು ಮತ್ತು ಅವರ ಮೂರ್ಖತನದ್ದು.

ಎಸ್ಸೆಂ ಕೃಷ್ಣ ಕೆಲವು ಎಚ್ಚರಿಕೆಗಳನ್ನು ಸಾರಾಸಗಟಾಗಿ ignore ಮಾಡಿದರು. ಆರಂಭದಿಂದಲೂ ಅವರು ಜನರ ಕಣ್ಣಿಗೆ ಮಿತ್ರನಾಗಿ ಕಾಣಲಿಲ್ಲ. ಅವರ ಮಿತ್ರರ್‍ಯಾರೂ ಜನಸಾಮಾನ್ಯರ ದೃಷ್ಟಿಯಲ್ಲಿ ಗೌರವವಂತರಾಗಿರಲಿಲ್ಲ. ಪಂಚತಾರಾ ಹೊಟೇಲುಗಳಲ್ಲಿ ಸಣ್ಣ ಪ್ರಾಯದ ಹುಡುಗಿಯರ ಜೀವ ಹಿಸುಕುತ್ತ ಕೂತಿರುತ್ತಿದ್ದ ನಾರಾಯಣ-ಕೃಷ್ಣರ ಅರ್ಧಕಾಲದ ಆಡಳಿತ ನುಂಗಿದರು. ಇನ್ನರ್ಧ ನುಂಗಿದವನು yellow pages ನ ರಾಘವೇಂದ್ರ ಶಾಸ್ತ್ರಿ . ಅವನೇನು ರಾಜಕಾರಣಿಯೇ? ಅಕಾರಿಯೇ? ಆಡಳಿತ ಬಲ್ಲವನೇ? ಬುದ್ಧಿಜೀವಿಯೇ? ಇದ್ಯಾವುದೂ ಅಲ್ಲ. ಅಂಥವನನ್ನು ಸದಾ ಬೆನ್ನಿಗೆ ಶನಿಯನ್ನು ಕಟ್ಟಿಕೊಂಡಂತೆ ಕಟ್ಟಿಕೊಂಡು ತಿರುಗಿದ ಕೃಷ್ಣರಿಗೆ ತಾವು ಆಳುವ ಜನರ ಮನಸ್ಸೇನು ಎಂಬುದೂ ಕಡೆಗೂ ಗೊತ್ತಾಗಲಿಲ್ಲ. ಆತ ಒಬ್ಬೇ ಒಬ್ಬ ರೈತನನ್ನು ಹತ್ತಿರಕ್ಕೆಳೆದು ತಬ್ಬಿಕೊಳ್ಳಲಿಲ್ಲ. ಕೈ ಕುಲುಕಲಿಲ್ಲ, ಒಬ್ಬ ಊರಾಚಿನ ಅಸ್ಪ್ರಶ್ಯನ ಮನೆಯಲ್ಲಿ ನೀರುಕೇಳಿ ಕುಡಿಯಲಿಲ್ಲ.

ಎಸ್ಸೆ ಂ ಕೃಷ್ಣ ಮತ್ತು ನಾಯುಡು ಬೀಗತನ ಮಾಡಿದ್ದೇ ಐ.ಟಿ.-ಬಿ.ಟಿ.ಯವರೊಂದಿಗೆ. ಈ ನೆಲದ ರೈತ ಸಗಾಟಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ. ಅವರೆಡೆಗೆ ತಿರುಗಿ ಕೂಡಾ ನೋಡದ ಕೃಷ್ಣ ಜಿಲ್ಲಾಕಾರಿಗಳೊಂದಿಗೆ ವಿಡಿಯೋ ಕಾನರೆನ್ಸಿಂಗ್ ಮಾಡಿಕೊಂಡು ಕೂತರು. ಅವರ ಮೇಲೆ ರೈತರಿಗಿದ್ದ ವಿಶ್ವಾಸ ಎಕ್ಕುಟ್ಟಿ ಹೋಯಿತು. ಇಂಗ್ಲೀಷ್ ಪತ್ರಿಕೆಗಳವರು, ಟೀವಿ ಛಾನಲ್ಲುಗಳವರು ಕೈತುಂಬ ಸೈಟು ಪಡೆದು ಕೃಷ್ಣರನ್ನು ಬೆಸ್ಟು ಚೀಫ್ ಮಿನಿಸ್ಟರು ಅಂತ ಹೊಗಳಿ ಮರ್ಯಾದೆ ಕಳೆದು ಕೊಂಡರೇ ಹೊರತು ಅದನ್ನು ಮತದಾರ ನಯಾ ಪೈಸೆಯಸ್ಟು ವಿಶ್ವಾಸದಿಂದ ನೋಡಲಿಲ್ಲ, ಓದಲಿಲ್ಲ. ಪ್ರತೀ ವಾರ ಒಂದಲ್ಲ ಒಂದು ರೀತಿಯಲ್ಲಿ ಕೃಷ್ಣರನ್ನು ಎಚ್ಟರಿಸಿ, ಅವರ ಸುತ್ತಲಿನ ಭ್ರಷ್ಟರ ಬಗ್ಗೆ ವಿವರ ನೀಡಿ ಇಂಥವರನ್ನು ದೂರವಿಡಿ ಅಂತ ಬರೆಯಿತು `ಪತ್ರಿಕೆ'. ಆದರೆ ಎಸ್ಸೆಂ ಕೃಷ್ಣ ಪರಿಮಳ ನಾಗಪ್ಪನವರ ಮನೆಬಾಗಿಲಲ್ಲಿ ನಿಂತು ಅದನ್ಯಾಕೆ ಓದ್ತೀರಿ? ಪುಂಡ ಪೋಕುರಿಗಳ ಪತ್ರಿಕೆಯನ್ನ? ಅಂದರು. ಅದೇ ಪರಿಮಳ ನಾಗಪ್ಪ ಇವತ್ತು ಕೃಷ್ಣರ ಪುಂಡು ಪೋಕರಿ ಶಿಷ್ಯರ ಮುಖಕ್ಕೆ ಎಕ್ಕಡದಲ್ಲಿ ಹೊಡೆದಂತೆ ಗೆದ್ದಿದ್ದಾರೆ. ಶುದ್ಧ ಅರ್ಬನ್ ಮತದಾರರನ್ನು ಓಲೈಸಿಕೊಂಡೇ ನಾಲ್ಕೂವರೆ ವರ್ಷ ಕಳೆದ ಕೃಷ್ಣ ಚಾಮರಾಜಪೇಟೆಯಲ್ಲಿ ಪಡೆದ ಓಟುಗಳಾದರೂ ಎಷ್ಟು? ಒಬ್ಬ ಬೆಸ್ಟು ಚೀಫ್ ಮಿನಿಸ್ಟರು ಪಡೆಯಬೇಕಾದ ಲೀಡಾ ಅದು?

ಇನ್ನು ರಾಜ್ಯದ ರಾಜಕಾರಣದಲ್ಲಿ ಕೃಷ್ಣರಿಗೆ ಕವಡೆ ಕಾಸಿನ ಕಿಮ್ಮತ್ತೂ ಉಳಿದಿಲ್ಲ. ಅವರು ಸೈಟು ಕೊಟ್ಟು ಬೆನ್ನು ಕೆರೆಸಿಕೊಂಡ ಪತ್ರಕರ್ತರೇ ಕೃಷ್ಣರ ಮನೆ ಕಂಪೌಡಿನ ಬಳಿ ಸುಳಿಯುತ್ತಿಲ್ಲ.

ಆದರೆ ರಾಜ್ಯದ ರಾಜಕೀಯ ಭವಿಷ್ಯ ಅತಂತ್ರಕ್ಕೆ ಬಿದ್ದಂತಾಗಿದೆ. ದೇವೇಗೌಡ ಕಾಂಗ್ರೆಸ್ ಸೇರಿ ಸರಕಾರ ರಚಿಸುತ್ತಾರೆ. ಅಂದರೆ ಬರಲಿರುವ ದಿನಗಳಲ್ಲಿ ರಾಜ್ಯಾದ್ಯಂತ ಕದನ ಕುತೂಹಲ ರಾಗದ ಮ್ಯಾಳವೇ! ದೇವೇಗೌಡರನ್ನು ಖುದ್ದು ಅವರ ಮಕ್ಕಳು ಸಹಿಸಿಕೊಳ್ಳುವುದು ಕಷ್ಟ. ಈಗಾಗಲೇ ಸಿದ್ರಾಮಯ್ಯ ಮುಖ್ಯಮಂತ್ರಿಯಾಗ ಕೂಡದು ಎಂಬ ರಾಗ ಆರಂಭವಾಗಿದೆ. ಮುಂದೆ ಏನನ್ನು ಕಾಣಲಿಕ್ಕಿದೆಯೋ? ಒಂದೇ ಸಂತೋಷವೆಂದರೆ ಮೂರು ಪಕ್ಷಗಳ ಪೈಕಿ ಯಾವ ಪಕ್ಷ ಒಪೋಸಿಷನ್‌ನಲ್ಲಿ ಕುಳಿತರೂ, ರಾಜ್ಯದಲ್ಲಿ ಒಂದು ಪ್ರಬಲ ಮತ್ತು vibrant ಆದ ವಿರೋಧ ಪಕ್ಷವಾಗಿ ವರ್ತಿಸಬೇಕಾಗುತ್ತದೆ. ಕೆಲವರ ಗೆಲುವುಗಳು ನಿಜಕ್ಕೂ ಈ ಸಲದ ಅಸೆಂಬ್ಲಿ ಹಾಲಿಗೆ ಚುರುಕು, ರಂಗು ಮತ್ತು ಕಳೆ ತಂದಿತ್ತಿವೆ. ಶಿರಾದ ಸತ್ಯನಾರಾಯಣ, ರಮೇಶ್ ಕುಮಾರ್, ಕೆ.ಆರ್.ಪೇಟೆ ಕೃಷ್ಣ , ವಾಟಾಳ್ ನಾಗರಾಜ್, ಎವಿ ರಾಮಸ್ವಾಮಿ, ಮಹಿಮಾ ಪಟೇಲ್, ಕುಮಾರ್ ಬಂಗಾರಪ್ಪ ಮುಂತಾದವರ ಗೆಲುವು ನಿಜಕ್ಕೂ ಸ್ವಾಗತಾರ್ಹ. ಆ ಮಟ್ಟಿಗೆ `ಪತ್ರಿಕೆ' ಯಾರ್‍ಯಾರು ಗೆಲ್ಲ ಬೇಕು ಅಂತ ಬಯಸಿತ್ತೋ, ಯಾರ್‍ಯಾರು ಗೆಲ್ಲುತ್ತಾರೆ ಅಂತ ಅಂದುಕೊಂಡಿತ್ತೋ, ಆ ಪಟ್ಟಿಯಲ್ಲಿ ೯೦% ನಷ್ಟು ನಿರೀಕ್ಷೆಗಳು ನಿಜವಾಗಿವೆ. ಕಳೆದ ಎಂಟು ವರ್ಷಗಳಿಂದ ಶತಾಯಗತಾಯ ವಿರೋಸಿಕೊಂಡು ಬಂದಿದ್ದ ಮಾಲಿಕಯ್ಯ ಗುತ್ತೇದಾರ ಮತ್ತು ಸುಭಾಷ್ ಗುತ್ತೇದಾರ ಎಂಬ ಹಂತಕರಿಬ್ಬರೂ ಸೋತು ಸರ್ವನಾಶವಾಗಿದ್ದಾರೆ. ಶಿವರಾಮೇಗೌಡನ ಸೋಲಿದೆಯಲ್ಲ ? ಅದನ್ನೇನು ನಾನು `ಪತ್ರಿಕೆ'ಯ ದಿಗ್ವಿಜಯ ಅಂತ ಭಾವಿಸಿಲ್ಲ. ಒಂದು ಹುಳು ಸೋಲಬೇಕಿತ್ತು ; ಸೋತಿದೆ. ಅದೇ ರೀತಿಯ ಮರ್ಡರಸ್ ರಾಜಕಾರಣಿ ಬಚ್ಚೇಗೌಡ, ಕೆ.ಆರ್.ಪೇಟೆಯ ಚಂದ್ರ ಶೇಖರ, ಕೆರೆಗೋಡು ಶಿವಕುಮಾರ, ಗಾಂ ನಗರದ ಬಾಂಬ್ ನಾಗ, ಸಾಗರದ ಕಾಗೋಡು ತಿಮ್ಮಪ್ಪ ಮುಂತಾದವರು ಸೋತಿದ್ದಾರೆ.

ಹಂಗ್ ಅಸೆಂಬ್ಲಿ ಆಗುತ್ತಿರುವುದು ಬೇಸರದ ಸಂಗತಿಯೇ ಆದರೂ, ಕರ್ನಾಟಕದ ಮಟ್ಟಿಗೆ ಪ್ರಜಾಪ್ರಭುತ್ವವಾದಿ ಮೌಲ್ಯಗಳನ್ನು ಇನ್ನೂ ಒಂದಿಷ್ಟು ಉಳಿಸಿಕೊಂಡು ಬಂದಿರುವ ಜಾತ್ಯತೀತ ಜನತಾದಳ ಈ ಬಾರಿ ಪ್ರಖರಗೊಂಡಿರುವುದು ಸಮಾಧಾನದ ಸಂಗತಿ. ಹಡಗಲಿಯಿಂದ ಪ್ರಕಾಶ್, ಕನಕಪುರದಿಂದ ಸಿಂಧ್ಯಾ, ನಂಜನಗೂಡಿನಿಂದ ಜಯಕುಮಾರ್ ಮುಂತಾದವರು ಗೆದ್ದು ಬಂದಿರುವುದು ಆರೋಗ್ಯವಂತ ಲಕ್ಷಣವೇ. ಒಂದು ಕಡೆಯಿಂದ ಲೆಕ್ಕ ಹಾಕಿ ನೋಡಿದರೆ, ನನಗೆ ವೈಯುಕ್ತಿಕವಾಗಿ ಪರಿಚಯವಿರುವ ಸುಮಾರು ಇಪ್ಪತ್ತು ಶಾಸಕರು ಸಾಲಿಟ್ಟು ಗೆದ್ದು ಬಂದಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಅವರ ಪೈಕಿ ಎಷ್ಟು ಜನ ಶತ್ರುಗಳಾಗುತ್ತಾರೋ? ಆ ಮಾತು ಬೇರೆ. ಆದರೆ ಹೊಸ ಸರಕಾರ , ಹೊಸ ಕಾಂಬಿನೇಷನ್ನು, ಹೊಸ ಮುಖಗಳು ಎಲ್ಲ ಸೇರಿ ಒಂದು ಹೊಸ ವಾತಾವರಣ ಮತ್ತು ಒಂದು ಹೊಸ hope ಸೃಷ್ಟಿಸಿದರೆ ಅದಕ್ಕಿಂತ ಸಂತೋಷ ಇನ್ನೊಂದಿರಲಾರದು. ಬಸವನಗುಡಿಯಿಂದ ಗೆದ್ದು ಬಂದಿರುವ ಚಂದ್ರಶೇಖರ್‌ರಂತಹ ಮಿತ್ರರೂ ಕಾಂಗ್ರೆಸ್‌ನಲ್ಲೇ ಇದ್ದರೂ, ನನ್ನಂಥವರಲ್ಲಿ ಒಂದು ಆಸೆ ಮೂಡಿಸುತ್ತಾರೆ. ಅಷ್ಟರಮಟ್ಟಿಗೆ ಆ ಚುನಾವಣೆಗಳು ತೃಪ್ತಿಕರವೇ.

ಆದರೆ ಪ್ರಧಾನಿಯಾಗಿ ಸೋನಿಯಾ ಗತಿ ಮತ್ತು ಭಾರತದ ಗತಿ ಏನಾಗಲಿದೆಯೋ ಎಂಬ ಕಳವಳಕ್ಕೆ ನಿಮ್ಮಂತೆಯೇ ನಾನೂ ಬಿದ್ದಿದ್ದೇನೆ. ಆಕೆ ವಿದೇಶಿಯಳು ಎಂಬುದು ಸುಲಭಕ್ಕೆ ಮರೆಯುವಂಥ ಮಾತಲ್ಲ. ನಮ್ಮ ಇಂದಿರಮ್ಮನ ಸೊಸೆಯಲ್ವಾ? ಇಷ್ಟು ವರ್ಷ ಇದ್ದ ಮೇಲೆ ನಮ್ಮ ಮನೆಯ ಹೆಣ್ಣು ಮಗಳೇ ಬಿಡು ಅಂತಾ ಅಂದುಕೊಳ್ಳುತ್ತೇವಾದರೂ, ಈ ದೇಶದ ಪ್ರಧಾನಿಯಾಗಿ ಆಕೆ ಇನ್ನೊಂದು ದೇಶದೊಂದಿಗೆ ವ್ಯವಹರಿಸುವಾಗ ಇಡೀ ದೇಶ ಒಂದು ಆತಂಕಕ್ಕೆ, ಅನುಮಾನಕ್ಕೆ ಬೀಳುವುದು ಸಹಜ. ಈ ಹಿಂದೆ ಹೊರಗಿನಿಂದ ಆಪತ್ತುಗಳು ಬಂದಾಗ ನಮ್ಮ ನೆಹರೂ, ನಮ್ಮ ಶಾಸ್ತ್ರೀಜಿ, ನಮ್ಮ ರಾಜೀವ್, ನಮ್ಮ ವಾಜಪೇಯಿ- ಇವರೆಲ್ಲ `ನೋಡ್ಕೋತಾರೆ ಬಿಡು'ಎಂಬಂಥ ಅನಿಸಿಕೆಯೊಂದು ಮನಸ್ಸಿನಲ್ಲಿರುತ್ತಿತ್ತು. ಆದರೆ ಸ್ವತಃ ಸೋನಿಯಾ ವಿದೇಶಿ ಮೂಲದವರಾಗಿರುವಾಗ ಆಕೆಯ ನಿಲುವು ಅದೆಷ್ಟರ ಮಟ್ಟಿಗೆ ಭಾರತದ ಆಸಕ್ತಿಗಳನ್ನು protect ಮಾಡುತ್ತದೋ ಎಂಬ ಆತಂಕ ಎಂಥವರನ್ನೂ ಕಾಡಿಯೇ ಕಾಡುತ್ತದೆ. ತನ್ನ ಅತ್ತೆ ಕೊಲೆಯಾಗಿ, ಆಕೆಯ ಶವದೆದುರೇ ರಾಜೀವ್ ಗಾಂ ಭಾರತದ ಪ್ರಧಾನಿಯಾಗಲು ಅಣಿಯಾದಾಗ ಇದೇ ಸೋನಿಯಾ ದೊಡ್ಡ ದನಿಯಲ್ಲಿ ಹಟ ತೆಗೆದಿದ್ದರು. ಈ ರಾಜಕೀಯ, ಈ ದೇಶ ನಮಗೆ ಹೇಳಿ ಮಾಡಿಸಿದ್ದುದಲ್ಲ ಅಂದಿದ್ದರು. ಈಗ ಅದೇ ಸೋನಿಯಾ ಪ್ರಧಾನಿಯಾಗುತ್ತಿದ್ದಾರೆ. ಅವರನ್ನು ಮುಲಾಯಂ, ಶರದ್‌ಪವಾರ್, ಲಾಲೂ, ದೇವೇಗೌಡ, ಜ್ಯೋತಿ ಬಸು, ಸುರ್ಜಿತ್- ಹೀಗೇ ಘಟಾನುಘಟಿಗಳು ಒಪ್ಪಿಕೊಂಡಾಗಿದೆ. ವಿದೇಶಿ ಮೂಲದ issue ಈಗ ದೊಡ್ಡ ಸಂಗತಿಯಾಗಿ ಉಳಿದಿಲ್ಲ. ಸುಪ್ರಿಂ ಕೋರ್ಟ್ ಕೂಡಾ ಆಕೆಯನ್ನು ಶುದ್ಧ ಭಾರತೀಯಳೆಂದು ಘೋಷಿಸಿಯಾಗಿದೆ. ಆ ಮಾತು ಅಲ್ಲಿಗೆ ಬಿಡೋಣ.

ಆದರೆ ಇವತ್ತಿನ ಭಾರತದ ರಾಜಕೀಯ ಸ್ಥಿತಿ ನೋಡಿ? ಇಡೀ ದೇಶ ನಾನಾ ನಮೂನೆಯ ಪಾಳೆಯಗಾರರ ಕೈಗೆ ಸಿಕ್ಕುಹೋಗಿದೆ. ಆ ರಾಜ್ಯಕ್ಕೆ ಅವನೇ ನಾಯಕ! ಅಂಥವರನ್ನೆಲ್ಲ ಒಟ್ಟುಗೂಡಿಸಿ ಒಂದು ಸರ್ಕಾರ ಅಂತ ರಚಿಸಿ ಹೇಗೋ ರಾಜ್ಯಭಾರ ತೂಗಿಸಿಕೊಂಡು ಹೋಗಬಹುದು ಮತ್ತು ಹೋಗಲೇ ಬೇಕು ಎಂಬುದನ್ನು ತೋರಿಸಿಕೊಟ್ಟದ್ದು ವಾಜಪೇಯಿ. ಆ ತಾಕತ್ತು ಆತನಿಗಿತ್ತು. ಆದರೆ ಸೋನಿಯಾಗೆ ಅಂಥ vision, ಅಂಥ ನಾಯಕತ್ವ, ಅಂಥಾ ಮುತ್ಸದ್ದಿತನ ಇದೆಯಾ ಎಂಬುದೇ ಪ್ರಶ್ನೆ. ರಾಜಕಾರಣದ ಪಾಠಗಳನ್ನು ಸೋನಿಯಾ ತನ್ನ ಅತ್ತೆಯಂತೆ ರಾತ್ರೋರಾತ್ರಿ ಕಲಿತ ಬುದ್ಧಿವಂತೆಯಲ್ಲ. ಆಕೆ ಚದುರಂಗದಲ್ಲಿ ಪಳಗಲಿಕ್ಕೆ ವರ್ಷಗಳೇ ಬೇಕಾದವು. ಇವತ್ತಿಗೂ ಆಕೆಯ ಮುಖದಲ್ಲಿ ಒಬ್ಬ ಆಡಳಿತಗಾರ್ತಿ ಕಾಣುವುದಿಲ್ಲ. ಈ ತೆರನಾದ ಪ್ರಾದೇಶಿಕ, ಪಾಳೇಗಾರಿ ಪಕ್ಷಗಳು, ಅನನುಭವಿ ನಾಯಕಿ, ಆಕೆಯ ಸುತ್ತಲಿನ ಭಟ್ಟಂಗಿ ಕೂಟಗಳು ಇವೆಲ್ಲ form ಆದಾಗಲೇ ದೇಶ ಆಪತ್ತಿಗೆ ಬೀಳುವ ಅಪಾಯವಿರುತ್ತದೆ.

ಅಲ್ಲದೆ, ಇಂದಿರಾಗಾಂ ಆಳಿದ ಕಾಲಕ್ಕೂ ಸೋನಿಯಾ ಆಳಲಿರುವ ಕಾಲಕ್ಕೂ ಹೋಲಿಸಿಕೊಂಡರೆ ದೇಶದ ಸಮಸ್ಯೆಗಳು ಅಗಾಧ ಮತ್ತು ಆತಂಕಕಾರಿ ಸ್ಥಿತಿ ತಲುಪಿವೆ. ಜಾಗತೀಕರಣ ನಮ್ಮ ವ್ಯಾಪಾರಿಗಳನ್ನ, ಉದ್ದಿಮೆದಾರರನ್ನ ತಿಂದು ಹಾಕಿ ಬಿಟ್ಟಿದೆ. ಕುಡಿಯುವ ನೀರಿನ ಸಮಸ್ಯೆ ಹಳ್ಳಿಹಳ್ಳಿಯನ್ನೂ ಕಂಗೆಡಿಸಿದೆ. ವಾಜಪೇಯಿ ಕಾಲದ ವಿತ್ತ ನೀತಿ ಷೇರು ಮಾರುಕಟ್ಟೆಯನ್ನು ನಾಶ ಮಾಡಿ ಹಾಕಿದೆ. ಇವರು ಪ್ರತಿಯೊಂದನ್ನು disinvestment ಮಾಡಿ, ಸರ್ಕಾರಿ ಉದ್ದಿಮೆಗಳನ್ನು ಮಾರಿ ಕಾರ್ಮಿಕ ವಲಯದಲ್ಲಿ ದುರ್ಭರವಾದ ಹತಾಶ ಸ್ಥಿತಿ ಉಂಟುಮಾಡಿದ್ದಾರೆ. ಕೋಟ್ಯಂತರ ಜನಕ್ಕೆ ಉದ್ಯೋಗ ಬೇಕು, ನೀರು ಬೇಕು, ರಸ್ತೆಗಳು ಬೇಕು, ಮುಂದೆ ಬದುಕು ಹಸನಾದಿತೆಂಬ hope ಬೇಕು. ಸೋನಿಯಾ ಕೈಯಲ್ಲಿ ಅದನ್ನೆಲ್ಲ ಕೊಡಮಾಡಲು ಸಾಧ್ಯವಾದೀತೇ?

ಸಾಧ್ಯವಾಗಲೀ ಅಂತಲೇ ಇಟ್ಟುಕೊಳ್ಳೋಣ. ಆದರೂ ನೂರು ಕೋಟಿ ಜನ ಸಂಖ್ಯೆಯಿರುವ ಈ ರಾಷ್ಟ್ರಕ್ಕೆ, ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ಸಿಗೆ ಒಬ್ಬ ಭಾರತೀಯ ಪ್ರಜೆಯನ್ನು ಪ್ರಧಾನಿಯನ್ನಾಗಿ ಆಯ್ಕೆಮಾಡಿಕೊಳ್ಳಲು ಸಾಧ್ಯವಾಗಲಿಲ್ಲವಲ್ಲ? ಅದು ನಿಜಕ್ಕೂ ನೋವೇ.

ಏಕೆಂದರೆ ಪ್ರಜಾಪ್ರಭುತ್ವ ಇಸ್ಲಾಂನಷ್ಟು ಪ್ರಭಾವಶಾಲಿಯಲ್ಲ !

ರವಿ ಬೆಳಗೆರೆ
ರವಿ ಬೆಳಗೆರೆ


ಈ ಹೆಂಗಸು ಸೋನಿಯಾ ಬೆಂಗಳೂರಿನ ಕೊರಳಿಗೆ ಶಿಲುಬೆ ಕಟ್ಟಿ, ಇಲ್ಲಿನ ಲಕ್ಷಾಂತರ ಜನರನ್ನು ಅಂತಾರಾಷ್ಟ್ರೀಯ ವಂಚಕನೊಬ್ಬನ ಕೈಗೆ ಕೊಡಲು ತೀರ್ಮಾನಿಸಿದ್ದಾಳೆ. ಅಕಾರಕ್ಕೆ ಬಂದಾಗಿನಿಂದ ಸೊಂಟದ ಎಲುಬೇ ಸ್ಥಿರವಾಗಿ ನಿಲ್ಲದಿರುವ ಧರಂಸಿಂಗ್ ಸರ್ಕಾರ ಸೋನಿಯಾ ಅಪ್ಪಣೆಯ ಮೇರೆಗೆ ಕೊರಳಿಗೆ ಶಿಲುಬೆ ಕಟ್ಟಿಕೊಂಡು ಬೆನ್ನಿಹಿನ್ ಎಂಬ ಶತಸಿದ್ಧ ವಂಚಕನ ಬೂಟು ನೆಕ್ಕಲು ನಿಂತುಬಿಟ್ಟಿದೆ.

ಬೆನ್ನಿಹಿನ್ ಎಂಬ ಕ್ರಿಶ್ಚಿಯನ್ ವಾಮಾಚಾರಿಗೆ ಕೋಟ್ಯಂತರ ರೂಪಾಯಿ ದೋಚುವ ಇರಾದೆ ಇದೆ. ಮತಾಂತರ ಕೂಡ ಅವನ ಅಜೆಂಡಾಗಳಲ್ಲೊಂದು. ಇವೆರಡೇ ಆಗಿದ್ದಿದ್ದರೆ, ಬೆನ್ನಿಹಿನ್ ಬಂದು ಭಾಷಣ ಮಾಡಿಕೊಂಡು ಹೋಗಲಿ ಅನ್ನಬಹುದಿತ್ತು. ಆದರೆ ಬೆನ್ನಿಹಿನ್ ನಮ್ಮ ದೇಶದ ಸಂಸ್ಕೃತಿ fabricಗೇನೇ ಕೊಳ್ಳಿಯಿಡುತ್ತಿರುವ ಮಲ್ಟಿ ನ್ಯಾಷನಲ್ ಕಂಪನಿಯಂಥವನು. ನಮ್ಮ ಬದುಕು, ದುಡಿಮೆ, ನಮ್ಮ ಔಷ, ಚಿಕಿತ್ಸಾ ಪದ್ಧತಿ, ಕಡೆಗೆ ಮಾನವ ಪ್ರಯತ್ನದ ಮೇಲೆಯೇ ವಿಶ್ವಾಸ ಹೋಗಿಬಿಡುವಂತೆ ಮಾಡಿಬಿಡಬಲ್ಲ ವಿನಾಶಕಾರಿ ಮಲ್ಟಿ ನ್ಯಾಷನಲ್ ಕಂಪೆನಿಯಂಥವನು ಆತ.


ಕಳೆದ ಹತ್ತು ವರ್ಷಗಳ ಇತಿಹಾಸ ತೆಗೆದು ನೋಡಿದರೆ, ಭಾರತವೆಂಬ ದೇಶ ಮಲ್ಟಿ ನ್ಯಾಷನಲ್ ಕಂಪನಿಗಳನ್ನು resist ಮಾಡಲು ಸಂಪೂರ್ಣವಾಗಿ ವಿಫಲಗೊಂಡಿರುವುದು ನಿಮಗೆ ಮನವರಿಕೆಯಾಗುತ್ತದೆ. ಬೆಂಗಳೂರಿನಲ್ಲಿ ಕೆಂಟುಕಿ ಚಿಕನ್ ಮಳಿಗೆ ತೆರೆದರೆ ಊರಿಗೇ ಬೆಂಕಿ ಹಚ್ಚುತ್ತೇವೆ ಅಂದರು ರೈತ ಸಂಘದವರು. ಈಗ ಜಾಗತೀಕರಣದ ಹೆಸರಿನಲ್ಲಿ ಬರಬಾರದ ಔಷಗಳೆಲ್ಲ ನಮ್ಮ ಮೆಡಿಕಲ್ ಸ್ಟೋರ್‌ಗಳಿಗೆ ಬಂದವು. ಯಾರೂ ಉಸಿರೆತ್ತಲಿಲ್ಲ. ಸ್ವದೇಶಿ ಆಂದೋಲನವೆಂಬ ರಾಜೀವ್ ದೀಕ್ಷಿತರ ಕೂಗು ನಿಷಲ ಆರ್ತನಾದವಾಯಿತು. ಇಡೀ ದೇಶ ಮಲ್ಟಿ ನ್ಯಾಷನಲ್‌ಗಳ ಕೈಗೆ ಸಿಕ್ಕುಹೋಯಿತು.

ಹೀಗೆ ಭಾರತವೆಂಬ ದೇಶ ಮಲ್ಟಿ ನ್ಯಾಷನಲ್ ಕಂಪನಿಗಳ ಮುಂದೆ ಮೊಳಕಾಲೂರಿ ಕೂತು ಸೋಲೊಪ್ಪಿಕೊಂಡಿರುವಾಗ, ಪಕ್ಕದ ದೇಶದಲ್ಲೇ ಇಸ್ಲಾಂ ಧರ್ಮ ಬೃಹತ್ ಮಲ್ಟಿ ನ್ಯಾಷನಲ್ ಕಂಪೆನಿಯೊಂದರ ವಿರುದ್ಧ ಜಯ ಗಳಿಸಿವೆ. ಇಸ್ಲಾಂನ ತಾಕತ್ತೇ ಅಂತಹುದಿರಬೇಕು. ಅಸಲಿಗೆ ಆಗಿದ್ದೇನು ಅಂದರೆ, ಪಾಕಿಸ್ತಾನದ ಕರಾಚಿಯ ಬಳಿ ದೇಹ್‌ಚುಹಾರ್ ಅಂತ ಒಂದು ಪಟ್ಟಣವಿದೆ. ಇದನ್ನ ಇತ್ತೀಚಿನ ವರ್ಷಗಳಲ್ಲಿ Education City ಅಂತ ಕರೆಯುತ್ತಾರೆ. ಅಲ್ಲಿ ಸಿಂಧ್ ಇನ್ಸ್‌ಟಿಟ್ಯೂಟ್ ಆಫ್ ಯುರಾಲಜಿ ಅಂಡ್ ಟ್ರಾನ್ಸ್‌ಪ್ಲಾಂಟೇಷನ್, ದಿ ಆಗಾಖಾನ್ ಹಾಸ್ಪಿಟಲ್ ಅಂಡ್ ಮೆಡಿಕಲ್ ಕಾಲೇಜ್ ಫೌಂಡೇಷನ್, ದಿ ಆಗಾಖಾನ್ ಯೂನಿವರ್ಸಿಟಿ, ಷಹೀದ್ ಜುಲೀಕರ್ ಅಲಿ ಭುಟ್ಟೋ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ- ಮುಂತಾದ ಬೃಹತ್ ಶೈಕ್ಷಣಿಕ ಸಂಸ್ಥೆಗಳಿವೆ. ಇಂಥ `ವಿದ್ಯಾನಗರಿ'ಯ ಹತ್ತಿರದಲ್ಲೊಂದು ಬಾಟ್ಲಿ ನೀರಿನ ಪ್ಲಾಂಟ್ ಹಾಕುತ್ತೇನೆ ಅಂತ ಹೊರಟಿತು ಬಹುರಾಷ್ಟ್ರೀಯ NESTLE ಕಂಪೆನಿ.

ಬೆಂಗಳೂರಿನಲ್ಲೇನಾದರೂ ಬಾಟ್ಲಿ ನೀರಿನ ಪ್ಲಾಂಟ್ ಹಾಕ್ತೀವಿ ಅಂತ ಬಂದಿದ್ದಿದ್ದರೆ, ಈ ಧರಂ ಸಿಂಗು, ಆರ್.ವಿ. ದೇಶ ಪಾಂಡೆ ಮುಂತಾದವರು ಹೆಗಲ ಮೇಲೆ ಮಡಿನೀರು ಹೊತ್ತುಕೊಂಡು ಹೋಗಿ ಕಂಪೆನಿಯವರ ಪಾದ ತೊಳೆದು ಕರೆತರುತ್ತಿದ್ದರು. ಆದರೆ ಪಾಕಿಸ್ತಾನದ ಪ್ರeವಂತ ಮುಸಲ್ಮಾನರು ಏನು ಮಾಡಿದರೋ ನೋಡಿ.

ನೆಸ್ಲೆ ಕಂಪನಿಯವರ ಪ್ರಕಾ ಕರಾಚಿ ಸಮೀಪದಲ್ಲಿ ಆದು ಹಾಕಲಿದ್ದ ಬಾಟ್ಲಿ ನೀರಿನ ಘಟಕದ ಉದ್ದೇಶ, ಅಫಘನಿಸ್ತಾನದಲ್ಲಿ ಯುದ್ಧ ಮಾಡುತ್ತಿರುವ ಅಮೇರಿಕನ್ ಸೈನಿಕರಿಗೆ ಕುಡಿಯುವ ನೀರು ಒದಗಿಸುವುದು. ಈ ಪ್ರದೇಶದ ಭೂಮಿಯಾಳದಲ್ಲಿ ಸಿಗುವ ನೀರು ಕುಡಿಯಲು ಶುದ್ಧವಲ್ಲವಾದ್ದರಿಂದ ಅದನ್ನು ಶುದ್ಧಕರಿಸಿ, ಕುಡಿಯಲು ಯೋಗ್ಯವನ್ನಾಗಿ ಮಾಡಿಕೊಡುತ್ತೇವೆ ಎಂಬುದು ಅವರ ಸಮರ್ಥನೆ. ನೆಸ್ಲೆಯವರಿಗೆ ಈ ಕಾಂಟ್ರಾಕ್ಟು ಕೊಡಿಸಿದ್ದು ದುಬೈನ ಒಂದು ಶ್ರೀಮಂತ ಸಂಸ್ಥೆ. ಅಲ್ಲಿ ನೀರು ತೆಗೆಯಲು ಬಿಟ್ಟದ್ದೇ ಆದರೆ, ಪ್ರದೇಶದ ಅಭಿವೃದ್ಧಿಗಾಗಿ ಹತ್ತು ಮಿಲಿಯನ್ ಡಾಲರುಗಳ ಬಂಡವಾಳ ಹಾಕಲು ತಾನು ಸಿದ್ಧ ಎಂಬುದಾಗಿ ನೆಸ್ಲೆ ಹೇಳಿತ್ತು.

ಆದರೆ ಪಾಕಿಸ್ತಾನದ ಮುಸಲ್ಮಾನ ಭಾರತೀಯ ಬಾಯಿಬಡುಕ ಹೋರಾಟಗಾರರಿಗಿಂತ ಬುದ್ಧಿವಂತ. ಅವನೇನು ಮಾಡಿದನೋ ನೋಡಿ. ಕರಾಚಿ ಪಕ್ಕದಲ್ಲಿ ಎಂಟು ಹೆಕ್ಟೇರುಗಳ ವಿಸ್ತಾರದಲ್ಲಿ ಈ ಪ್ಲಾಂಟ್ ಹಾಕಲಿರುವ ನೆಸ್ಲೆ ವರ್ಷಕ್ಕೆ ೩೦೬ ಮಿಲಿಯನ್ ಲೀಟರುಗಳಷ್ಟು ನೀರನ್ನು ನೆಲದಿಂದ ಬಸಿಯುತ್ತದೆ.

ಈಗಾಗಲೇ ಪಾಕಿಸ್ತಾನದಲ್ಲಿ AVA ಹೆಸರಿನಲ್ಲಿ bottled ನೀರು ಮಾರುತ್ತಿರುವ ನೆಸ್ಲೆ, ದೊಡ್ಡ ಮಟ್ಟದ ಲಾಭ ಮಾಡುತ್ತಿದೆ. ಅದರ `ಮಿಲ್ಕ್‌ಪ್ಯಾಕ್' ಕೂಡ ತುಂಬ ಪ್ರಸಿದ್ಧ, ತುಂಬ ದುಬಾರಿ. ಇಂಥ ನೆಸ್ಲೆಗೆ ಈಗ ಕರಾಚಿ ಸಮೀಪದಲ್ಲಿ ನೆಲಕ್ಕೆ ತೂತು ಹಾಕಲು ಅವಕಾಶ ಕೊಟ್ಟು ಬಿಟ್ಟರೆ, ಪಕ್ಕದಲ್ಲಿರುವ `ವಿದ್ಯಾನಗರಿ'ಗೆ ತಿಕ ತೊಳೆಯಲಿಕ್ಕೂ ನೀರಿಲ್ಲದಂತಾದೀತು. ನೀರಿನ ಅಂತರ್ಜಲ ಕಡಿಮೆಯಾಗಿ ಹೋಗುವುದರಿಂದ ಪಾಕಿ ರೈತ ಕಂಗಾಲಾಗಿ ಕಂಗಾಲಾಗಿ ಬಿಡುತ್ತಾನೆ. ಈ ಪ್ರಾಂತ್ಯಕ್ಕೆ ವರ್ಷದಲ್ಲಿ ಬೀಳುವುದೇ ಐದಿಂಚು ಮಳೆ. ಆ ಮಳೆಯಲ್ಲಿ ೭೦% ನಷ್ಟು ಆವಿಯಾಗಿ ಹೋಗುತ್ತದೆ. ಉಳಿದ ೧೫% ನೀರು ಮಾತ್ರ ಜನಜಳಕೆಗೆ ಲಭ್ಯ. ನೆಸ್ಲೆ ಕಂಪೆನಿ ಆ ನೀರನ್ನೂ ಗುನ್ನ ಹೊಡೆದು ತೆಗೆದುಬಿಟ್ಟರೆ ಗತಿಯೇನು?

ಹಾಗಂತ ಕೇಳಿದರೆ, ಅಮೆರಿಕದ ಮೊಳಕೈ ಕೆಳಗೆ ನೀರು ಕುಡಿಯುತ್ತಿರುವ ಮುಷರ್ರಫ್ ಸರ್ಕಾರ ಹೇಗಾದರೂ ಬಾಯಿ ಮುಚ್ಚಿಸಿ ನೆಸ್ಲೆ ಕಂಪೆನಿಗೆ ಅನುಮತಿ ಕೊಟ್ಟು ಬಿಟ್ಟೀತು. ಕೇವಲ ಜನರ ಬವಣೆ ಹೇಳಿಕೊಂಡರೆ, ನ್ಯಾಯಾಲಯವೂ ವಾದವನ್ನು ಮನ್ನಿಸುವುದಿಲ್ಲ. ಹಾಗಂದುಕೊಂಡು ಪಾಕಿಸ್ತಾನಿ ಮುಸಲ್ಮಾನ ಎಂಥ ತಂತ್ರ ಹೂಡಿದ ಗೊತ್ತೆ ?

`ಈ ನೆಲದಲ್ಲಿ ಬಾಟ್ಲಿ ನೀರಿನ ಪ್ಲಾಂಟ್ ಹಾಕುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದು!' ಅಂದುಬಿಟ್ಟ.

ತಕ್ಷಣ ನ್ಯಾಯಾಲಯ ನೆಸ್ಲೆ ವಿರುದ್ಧ ತಡೆಯಾಜ್ಞೆ ನೀಡಿತು. ಅಷ್ಟೇ‌ಅಲ್ಲ : ಕರಾಚಿ ಪಕ್ಕದ ಈ ಪ್ರಾಂತ್ಯದಲ್ಲಿ ಯಾವತ್ತಿಗೂ ನೀರಿನ ಪ್ಲಾಂಟು ಹಾಕಲೇಕೂಡದೆಂದು ಶಾಶ್ವತವಾಗಿ ಸಿಂಧ್ ಹೈಕೋರ್ಟು ಆಜ್ಞೆ ಹೊರಡಿಸಿತು. ಇದಕ್ಕೋಸ್ಕರ ಇಸ್ಲಾಮಿಕ್ ಶಕ್ತಿಗಳು ಹೂಡಿದ ವಾದವೇನು ಗೊತ್ತೆ ?

`ಇಸ್ಲಾಂ ಧರ್ಮದ ಪ್ರಕಾರ ನೀರು ಅಲ್ಲಾಹುವಿನ ಸೃಷ್ಟಿ. ಎಲ್ಲರದೂ ಆಗಿರುವ ನೀರಿನ ಮೇಲೆ ಎಲ್ಲರಿಗೂ ಹಕ್ಕು ಇರತಕ್ಕದ್ದು. ಅದನ್ನು ಎಲ್ಲರೂ ಸಮನಾಗಿ ಉಪಯೋಗಿಸತಕ್ಕದ್ದು. ಅದನ್ನು ಎಲ್ಲರೂ ಸಮನಾಗಿ ಉಪಯೋಗಿಸ ತಕ್ಕದ್ದು. ಉಳಿದವರಿಗೆ ಉಪಯೋಗಿಸಲು ಆಗದಂತಹ ರೀತಿಯಲ್ಲಿ ಆ ನೀರನ್ನು ಯಾರೂ ನೆಲದಿಂದ ತೆಗೆಯಕೂಡದು. ಅದು ಇಸ್ಲಾಂ ವಿರೋ ಪ್ರಯತ್ನವಾದೀತು!' ಅಂದರು. ಆ ಮೇಲೆ ನೆಸ್ಲೆ ಕಂಪೆನಿ ಅಮೆರಿಕದ ವಕೀಲರನ್ನೆಲ್ಲ ಕರೆತಂದು ಬುದ್ಧಿ ಖರ್ಚು ಮಾಡಿಸಿದೆ. ಆದರೂ ಉಪಯೋಗವಾಗಿಲ್ಲ. ಕಡೆಗೆ ನೆಸ್ಲೆ ಗಂಟು ಮೂಟೆ ಕಟ್ಟಿಕೊಂಡು ಅಲ್ಲಿಂದ ಹಿಂತಿರುಗಿದೆ.

ಇದನ್ನು ನೀವು ಮತೀಯವಾದಿಗಳ ಕೆಲಸ ಅಂತೀರೇನೋ? ಅನ್ನಿ. ಅವರ ನೀರು ಅವರು ಉಳಿಸಿಕೊಂಡರು. ಇಲ್ಲಿ ಅಮೆರಿಕಕ್ಕೇ ನೇರವಾಗಿ ಹುಟ್ಟಿದವರಂತಾಡುವ ನಮ್ಮ ಬುದ್ಧಿ ಜೀವಿಗಳು, ಕಣ್ಣೆದುರಿನಲ್ಲೇ ನಮ್ಮ ಬೇವಿನ ಮರದ ಬೀಜದಿಂದ ಹಿಡಿದು ಹಪ್ಪಳ ಸಂಡಿಗೆಯ ತನಕ ಎಲ್ಲದರದ್ದೂ ಪೇಟೆಂಟ್ ಆಗಿಹೋದರೂ ಖಿಮಕ್ಕೆನ್ನಲಿಲ್ಲ. ಬಾಬಾ ಬುಡನ್‌ಗಿರಿಯ ತುದಿಯಲ್ಲಿನ ಸಮಾ ಹಿಂದೂಗಳದಾ, ಮುಸಲ್ಮಾನರದಾ ಎಂಬ issue ಇಟ್ಟುಕೊಂಡು ಈ ಬುದ್ಧಿಜೀವಿ ಅನಂತಮೂರ್ತಿ ತಲೆಯೆಲ್ಲ ಮಾತನಾಡುತ್ತಾರೆ. ಸರ್ಕಾರ ಕೊಡುವ ಯಾವ ಸವಲತ್ತೂ ಬಿಡದೆ ಜನಿವಾರಕ್ಕೆ ಗಂಟು ಕಟ್ಟಿಕೊಳ್ಳುವ ಬುದ್ಧಿಜೀವಿ ಅನಂತ ಮೂರ್ತಿ, ಬೆನ್ನಿಹಿನ್‌ನಂಥ ವಂಚಕ ಬಂದು ಊರು ಕೊಳ್ಳೆ ಹೊಡೆಯಲಿದ್ದಾನೆ ಅಂದರೆ ಅದನ್ನು ವಿರೋಸಿ ಚಿಕ್ಕದೊಂದು ಮಾತೂ ಆಡುವುದಿಲ್ಲ. `ಹಣೆಗೆ ಕುಂಕುಮವಿಟ್ಟುಕೊಳ್ಳುವವರೆಲ್ಲ ಭಜರಂಗಿಗಳು' ಎಂಬಂತೆ ಮಾತಾಡುವ ಜಿ.ಕೆ.ಗೋವಿಂದರಾಯರು, ಇಡೀ ವಿಧಾನಸೌಧಕ್ಕೇ ಶಿಲುಬೆ ಕಟ್ಟಲಾಗುತ್ತಿದ್ದರೂ ಕಿವಿಗೆ ಮೇಣ ಬಿದ್ದವರಂತೆ ಸುಮ್ಮನಿರುತ್ತಾರೆ. ಏಕೆಂದರೆ ಕ್ರಿಶ್ಚಿಯನ್ನರನ್ನು hurt ಮಾಡಲಿಕ್ಕೆಯಾರಿಗೂ ಇಷ್ಟವಿಲ್ಲ. ಮುಸ್ಲಿಮರ ವಿರುದ್ಧ ಮಾತನಾಡಿದರೆ ಒದ್ದಾರೆಂಬ ಭಯ. ಕ್ರಿಶ್ಚಿಯನ್ನರ ವಿರುದ್ಧ ಮಾತನಾಡಿದರೆ, ಅವರು hurt ಆದಾರೆಂಬ ಆತಂಕ. ಏನು ಮಾತನಾಡಿದರೂ, ಯಾವ ಹೇಳಿಕೆ ಕೊಟ್ಟರೂ, ಎಷ್ಟು ಕೆಟ್ಟದಾಗಿ ಬರೆದರೂ ಸುಮ್ಮನಿರುವ, ಸಹಿಸಿಕೊಳ್ಳುವ crowd ಒಂದಿದೆಯಲ್ಲ, ಹಿಂದೂಗಳದು ? ಅದರೆಡೆಗೆ ಅನಂತಮೂರ್ತಿ ಕಲ್ಲೆ ಸೆಯುತ್ತಲೇ ಬಂದಿದ್ದಾರೆ.

ಸಂತೋಷದ ಸಂಗತಿಯೆಂದರೆ Benny Hynn ನಂತಹ ವಂಚಕ ಮತ ಪ್ರಚಾರಕನನ್ನು ಬೆಂಗಳೂರಿನ ಕ್ರಿಶ್ಚಿಯನ್ನರೇ ವಿರೋಸಿದ್ದಾರೆ. ಅವನನ್ನು ಊರೊಳಕ್ಕೆ ಬಿಡಬೇಡಿ ಅಂದಿದ್ದಾರೆ. ನಾನಾ ದೇಶಗಳ ಕ್ರಿಶ್ಚಿಯನ್ ಸಂಘಟನೆಗಳು ಅವನನ್ನು ಛೀಮಾರಿಗೀಡುಮಾಡಿದೆ. ಬೆನ್ನಿ ಹಿನ್ ಕೇವಲ ಮತಪ್ರಚಾರಕನಲ್ಲ : ಅವನೊಬ್ಬ ಬೃಹತ್‌ವಂಚಕ ಎಂಬುದು ನೂರಾರು ದೇಶಗಳ ಸರ್ಕಾರಗಳಿಗೇ ಮನವರಿಕೆಯಾಗಿದೆ. ಆದರೆ ಸೋನಿಯಾ ಗಾಂಯಂಥ ಅವಿವೇಕಿ, ಅವನಿಗೆ ವೀಸಾ ಕಲ್ಪಿಸಿಕೊಡುತ್ತಾಳೆ. ಅವನ ಖಾಸಗಿ ವಿಮಾನ ಭಾರತದ air spaceನಲ್ಲಿ ಓಡಾಡಲು ಬಿಡುತ್ತಾಳೆ. ಅವನ ಕಾರ್ಯಕ್ರಮಕ್ಕೆ ಅತ್ಯಂತ ಆಯಕಟ್ಟಿನ ಜಾಗವಾದ ಜಕ್ಕೂರು ವಿಮಾನ ಆಶ್ರಯದ ಬಯಲನ್ನೇ ಕೊಡಿಸುತ್ತಾಳೆ. ತನ್ನ ಪಕ್ಷದ ಮುಖ್ಯಮಂತ್ರಿಗೆ `ಬೆನ್ನಿಹಿನ್‌ನ ಕಾರ್ಯಕ್ರಮ ಅಬಾತವಾಗಿ ಸಾಗುವಂತೆ ನೋಡಿಕೊಳ್ಳಿ' ಎಂಬ ಸಂದೇಶ ಕಳಿಸುತ್ತಾಳೆ.

ಇದನ್ನು ನಮ್ಮ ದೇಶ ಪ್ರತಿಭಟಿಸುವುದೂ ಇಲ್ಲ! ಏಕೆಂದರೆ, ಪ್ರಜಾಪ್ರಭುತ್ವ ಇಸ್ಲಾಂನಷ್ಟು ಪ್ರಭಾವಶಾಲಿಯಲ್ಲ.

ಮೇರಾ ಭಾರತ್ ಮಹಾನ್!

ಬುದ್ಧಿಜೀವಿಗಳೇ ನಿಮಗೇನಾಗಿದೆ?

ರವಿ ಬೆಳಗೆರೆ
ರವಿ ಬೆಳಗೆರೆ


ಕರ್ನಾಟಕದ ಬುದ್ಧಿ ಜೀವಿಗಳಿಗೆ ಏನಾಗಿದೆ?

ಏನಿಲ್ಲ, ಸ್ವಲ್ಪ ಮಾತು ಜಾಸ್ತಿಯಾಗಿದೆ. ಬರವಣಿಗೆ, ಯೋಚನೆ ಎರಡೂ ಕಡಿಮೆ ಆಗಿದೆ.ರಾಜಕೀಯ ಮಾಡೋ ಚಪಲ ಶುರುವಾಗಿದೆ. ತಪ್ಪು ಯಾವುದು, ಸರಿ ಯಾವುದು ಅನ್ನೋ ವಿವೇಚನೆ ಕಳೆದುಕೊಂಡಾಗಿದೆ. ಹಾಗಂತ ಸಂಘ ಪರಿವಾರದವರಲ್ಲ, ಜನ ಸಾಮಾನ್ಯರೂ ಮಾತನಾಡತೊಡಗಿದ್ದಾರೆ. ಅದಕ್ಕೆ ಕಾರಣವೂ ಇದೆ.

ಕರ್ನಾಟಕಕ್ಕೆ ಸಂಬಂಧವೇ ಇಲ್ಲದ, ಹತ್ತು ಹನ್ನೊಂದು ವರ್ಷಗಳ ಹಿಂದಿನ ಒಂದು issue ನಿಮಗೆ ನೆನಪು ಮಾಡಿ ಕೊಡುತ್ತಿದ್ದೇನೆ. ಕಲಾವಿದ ಎಂ.ಎಫ್.ಹುಸೇನ್ ಬೆತ್ತಲೆ ಸರಸ್ವತಿಯ ಒಂದು ಚಿತ್ರ ಬರೆದಿದ್ದರು. ಅವರು ಚಪಲ ಹತ್ತಿಕೊಂಡಂವರಂತೆ ಮಾಧುರಿ ದೀಕ್ಷಿತಳ ಚಿತ್ರ ಬರೆದಾಗ ಯಾರೂ ತಕರಾರು ಮಾಡಿರಲಿಲ್ಲ. ಆದರೆ ದಿನನಿತ್ಯ ಮನೆಗಳಲ್ಲಿ ಮಕ್ಕಳೂ ಪೂಜೆ ಮಾಡುವ ಸರಸ್ವತಿಯನ್ನು ಬೆತ್ತಲೆ ಹೆಣ್ಣಾಗಿ ಚಿತ್ರಿಸಿ ತೋರಿಸಿದಾಗ ಕೆಲವರು ಸಿಟ್ಟಿ ಗೆದ್ದಿದ್ದರು. ಹುಸೇನ್‌ರ ಚಿತ್ರಗಳನ್ನು ಸುಡಲಾಯಿತು. ಅದನ್ನು ಯಥಾಪ್ರಕಾರ ಬುದ್ಧಿಜೀವಿ ವರ್ಗ ನಾಡಿನಾದ್ಯಂತ ಖಂಡಿಸಿದ್ದೂ ಆಯಿತು. ಕರ್ನಾಟಕದಲ್ಲಿ ಅದನ್ನು ತುಂಬ ತೀವ್ರವಾಗಿ ಖಂಡಿಸಿದ್ದು -ಪೀಠಿ ಗಿರೀಶ್ ಕಾರ್ನಾಡ್.

ಅಲ್ಲಿಂದಲೇ... : ಆನಂತರ ಕಾರ್ನಾಡರು ಮತ್ತೆ ದನಿಯೆತ್ತಿದ್ದು, ಬಾಬಾ ಬುಡನ್‌ಗಿರಿ ವಿವಾದದ ಸಂದರ್ಭದಲ್ಲಿ. ಅಲ್ಲಿ ಅವರು ಮುಸಲ್ಮಾನರ ಪರವಾಗಿ ನಿಂತರು. ದತ್ತಪೀಠ ವಾದಿಗಳನ್ನು ಪ್ರತಿಭಟಿಸಿ ಸಭೆ ನಡೆಸುತ್ತೇವೆಂದು ಹೊರಟರು. ಹಾಸನ ದಾಟುವುದೂ ಅವರಿಂದ ಆಗಲಿಲ್ಲ. ಅಲ್ಲಿನ ಹೊಟೇಲ್ ಅಶೋಕದಲ್ಲಿ ಚಾ ಕುಡಿದು, ಮೂತ್ರ ಮುಗಿಸಿ, ಮುಖ ತೊಳೆದುಕೊಂಡು ಅಲ್ಲಿಂದಲ್ಲೇ ಅಂತರ್ಧಾನರಾದರು. ಅರೆಸ್ಟಾಗಿ ಜೈಲಿಗೆ ಹೋದದ್ದು ಗೌರಿ ಲಂಕೇಶ್. ಮತ್ತೆ ಕಾರ್ನಾಡರು ಹೋರಾಟ ಗೀರಾಟದ ಮಾತು ಆಡಲೇ ಇಲ್ಲ.

ಪುಕ್ಕಟೆ ಸಿಕ್ಕಿತ್ತು : ಆಯ್ತು , ಕೆಲವು ಜಾತಿಯವರಿಗೆ ಅಥವಾ ಧರ್ಮದವರಿಗೆ ಅನ್ಯಾಯವಾದಾಗಲೆಲ್ಲ ಪೀಠಿ ಕಾರ್ನಾಡರು ನೊಂದವರ ಪರವಾಗಿ ನಿಲ್ಲುತ್ತಾರೆ. ಅದು ನಿಜವಾದ ಬುದ್ಧಿಜೀವಿಯ ಲಕ್ಷಣ ಎಂದೇ ಕೆಲವು ಜನ ಕಾರ್ನಾಡ್ ಅಭಿಮಾನಿಗಳು ಭಾವಿಸಿದ್ದರಲ್ಲ ? ಕಾರ್ನಾಡರು ಹಾಸನದಲ್ಲೇ ಹೋರಾಟವನ್ನು ಮತ್ತೊಂದನ್ನೂ ವಿಸರ್ಜಿಸಿ ಹೊರಟು ಹೋದ ನಂತರವೂ ಅವರಿಗೆ ಮೂರ್ತಿ ಭಂಜಕ ಬುದ್ಧಿಜೀವಿಯ ಇಮೇಜೊಂದು ಪುಕ್ಕಟೆಯಾಗಿ ಸಿಕ್ಕಿತ್ತು. ಆದರೆ ಮುಂದೆ ಕಾರ್ನಾಡರು ಏನು ಮಾಡಿದರು?

ಬೆನ್ನಿ ಬಂದಾಗ? : ಬೆಂಗಳೂರಿಗೆ ಬೆನ್ನಿಹಿನ್ ಬಂದ. ಅದನ್ನು ಪ್ರಜ್ಞಾವಂತರೆಲ್ಲ ವಿರೋಸಿದರು. ಅದರಲ್ಲಿ ಧರಂ ಸಿಂಗ್ ಸಂಪುಟ ಭಾಗವಹಿಸಿದ್ದನ್ನು ತೀವ್ರವಾಗಿ ಖಂಡಿಸಿದರು. ಜನ ಸಾಮಾನ್ಯರಿಗೂ ಕೂಡ ಬೆನ್ನಿಹಿನ್‌ನ ಸಭೆಗಳು ಅಸಹ್ಯ, ತಿರಸ್ಕಾರ ತರಿಸಿದ್ದವು. ಆದರೆ ಪೀಠಿ ಕಾರ್ನಾಡರು ನೆಪಮಾತ್ರಕ್ಕೂ ಪಿಟ್ಟೆನ್ನಲಿಲ್ಲ. ಹಾಸನದ ಮೂತ್ರಿಯಿಂದ ಹೊರಬರಲಿಲ್ಲ. ಒಂದು ರಾಜ್ಯ, ಅದರ ಅಕ್ಷರಸ್ಥ ಜನ ತಮ್ಮ ನಾಡಿನ ಒಬ್ಬ ಜ್ಞಾನಪೀಠ ಪ್ರಶಸ್ತಿ ವಿಜೇತ ಇಂಥ ವಿಷಯಗಳಲ್ಲಿ ಏನು ಪ್ರತಿಕ್ರಿಯಿಸುತ್ತಾನೋ ಎಂದು ನಿರೀಕ್ಷಿಸುವುದು ಸಹಜ. ಮುಸ್ಲಿಮರಾದ ಎಂ.ಎಫ್.ಹುಸೇನರ ಮೇಲೆ ದಾಳಿ ನಡೆದಾಗ ಲಾದರೆ; ಸರಸ್ವತಿಯನ್ನು ಬೆತ್ತಲೆಯಾಗಿ ತೋರಿಸಿದ್ದೇ ಸರಿ ಎಂಬಂತೆ ಮಾತನಾಡಿದ ನೀವು, ಬೆನ್ನಿಹಿನ್‌ನಂಥ ವಂಚಕನನ್ನು ಖಂಡಿಸುವುದೂ ಇಲ್ಲ ಅಂದರೆ -ನೀವು ಮುಸ್ಲಿಂ ಮತ್ತು ಕ್ರೈಸ್ತ ಪಕ್ಷಪಾತಿ ಅಂತ ತೀರ್ಮಾನ ಮಾಡಬೇಕಾಗುತ್ತದಲ್ಲವೆ? ಒಂದು ಸಮಾಜಿಕ ಪಿಡುಗನ್ನ ಖಂಡಿಸುವುದಕ್ಕೇಕೆ ಹಿಂಜರಿಕೆ? ನಿಮ್ಮದು double standard ಅಲ್ಲವೇ?

ಈ ಪ್ರಶ್ನೆಗಳನ್ನು ಭಜರಂಗ ದಳದವರೇ ಕೇಳಬೇಕೆಂದಿಲ್ಲ. ಬಲಪಂಥೀಯನಲ್ಲದ ನಾನಾದರೂ ಕೇಳುವುದು ಸಹಜ. ಆದರೆ ಪೀಠಿ ಮೌನವಾಗಿರುತ್ತದೆ. ಇದೇ ತರಹದ ದ್ವಂದ್ವ ನಿಲುವುಗಳನ್ನು ನಮ್ಮ ಬುದ್ಧಿಜೀವಿ ವರ್ಗ ಮೊದಲಿಂದಲೂ ಮಾಡಿಕೊಂಡು ಬಂದಿದೆ. ಕಡೇಪಕ್ಷ ಕಾರಂತರಿಗೆ, ಅಡಿಗರಿಗೆ, even ಲಂಕೇಶರಿಗೂ ತಾವು ನಂಬಿಕೊಂಡದ್ದನ್ನ ಪ್ರತಿಪಾದಿಸುವ, ಆ ನಿಲುವಿಗೆ ಬದ್ಧರಾಗಿರುವ ನೇರವಂತಿಕೆ ಇತ್ತು. ಪೀಠಿದ್ವಯರಿಗೆ ಅದೂ ಇಲ್ಲ. ಬೆನ್ನಿಹಿನ್ ಕಾರ್ಯಕ್ರಮವನ್ನು ಕಡೇ ಘಳಿಗೆಯಲ್ಲಿ ಪ್ರತಿಭಟಿಸಿದ ಬುದ್ಧಿಜೀವಿ ವರ್ಗ ಕೂಡ ಸಾಹಿಬಾಬಾ ಹಿಂಗೇ ಮಾಡ್ತಿರಲಿಲ್ವಾ? ಇದೂ ಹಂಗೇನೇ! ಅಂದರೇ ಹೊರತು ಅವತ್ತಿನ issueದ ಕೇಂದ್ರ ಬಿಂದುವಾಗಿದ್ದ ಬೆನ್ನಿಯನ್ನು ಖಡಾಖಂಡಿತವಾಗಿ ಕಪಾಳಕ್ಕೆ ಹೊಡೆಯುವ ಧೈರ್ಯ ಮಾಡಲಿಲ್ಲ.

ನಗರಿ ಬಾಬಯ್ಯ : ಇನ್ನೊಬ್ಬರಿದ್ದಾರೆ, ನಗರಿ ಬಾಬಯ್ಯ. ಹಿರಿಯ ಇಂಗ್ಲಿಷ್ ಮೇಷ್ಟ್ರು. ಸಜ್ಜನರು. ನಕ್ಸಲ್ ಕ್ರಾಂತಿಕಾರಿ ಹೋರಾಟವನ್ನು ಬೆಂಬಲಿಸಿದರು. ಪೊಲೀಸ್ ಟಾರ್ಚರ್ ಮತ್ತು ಜೈಲು ಎರಡರನ್ನೂ ಅನುಭವಿಸಿದವರು. ಅವರನ್ನು ಎಡಪಂಥೀಯವರೆಲ್ಲರೂ ಗೌರವಿಸುತ್ತಾರೆ. ಎಲ್ಲೇ ದೌರ್ಜನ್ಯ, ಪೊಲೀಸರಿಂದ ಅನ್ಯಾಯ, ದಲಿತರ ಹತ್ಯಾಕಾಂಡ ಇತ್ಯಾದಿಗಳಾದಾಗ ಬಾಬಯ್ಯನವರು ಖುದ್ದಾಗಿ ಘಟನೆ ನಡೆದಲ್ಲಿಗೆ ಹೋಗಿ fact finding report ಒಂದು ನಿಷ್ಪಕ್ಷಪಾತದ ವರದಿ ಸಲ್ಲಿಸುತ್ತಾರೆ. ಅಂಥ ಬಾಬಯ್ಯ ಒಂದು ಸಲ ಪ್ರೆಸ್‌ಕ್ಲಬ್‌ನಲ್ಲಿ ರಾ.ಸೋಮನಾಥನ ಪಕ್ಕದಲ್ಲಿ ಕುಳಿತು ಹಾಯ್ ಬೆಂಗಳೂರು! ಕಚೇರಿಯಲ್ಲಿ ನಡೆದಿರುವ ಲೈಂಗಿಕ ಹಗರಣಗಳ ವಿರುದ್ಧ ಕ್ರಮಕೈಗೊಳ್ಳಬೇಕು ಅಂತ ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿಕೆ ಕೊಟ್ಟರು. ನಾನು ಅವರಿಗೆ ತಕ್ಷಣ ಫೋನು ಮಾಡಿ, `ಇದೇನು ಬಾಬಯ್ಯನವರೇ ಹೀಗೆ ಮಾತಾಡ್ತಿದೀರಿ? ನೀವೇ ಖದ್ದಾಗಿ ನಮ್ಮ ಕಚೇರಿಗೆ ಬಂದು fact finding report ಕೊಡಿ. ನನ್ನ ಕಡೆಯಿಂದ ಅನ್ಯಾಯವಾಗಿದ್ದರೆ ನನ್ನ ವಿರುದ್ಧ ಚಳವಳಿ ಮಾಡಿ. ಅದು ಬಿಟ್ಟು,ತೀರ ಸೋಮನಾಥನಂಥವನ ಪಕ್ಕದಲ್ಲಿ ಕೂತು ಏನಂದರೆ ಅದನ್ನೇ ಮಾತಾಡಿದ್ದೀರಲ್ಲ?'ಅಂತ ಕೇಳಿದೆ.

ನಂಗೊತ್ತಾಗಲಿಲ್ಲ ಬೆಳಗೆರೇ, ಆ ಹುಡುಗ ಕರೆದ ಅಂತ ಹೋಗಿಬಿಟ್ಟೆ. ನಿಜಕ್ಕೂ ಏನು ನಡೆದಿದೆ ಅಂತ ನಾನು ವಿಚಾರಿಸ್ತೀನಿ... ಅಂದರು.

ಈತನಕ ಬಾಬಯ್ಯ ಯಾರನ್ನೂ ವಿಚಾರಿಸಿದ ಬಗ್ಗೆ ಮಾಹಿತಿ ಇಲ್ಲ. ಅದೇ ಸೋಮನಾಥ ಮೂವರು ವಿವಾಹಿತ- ವಿಚ್ಛೇದಿತ ಸ್ತ್ರೀಯರಿಗೆ ಮೂರು ಮನೆ ಮಾಡಿ ಕೊಟ್ಟು ಇಟ್ಟುಕೊಂಡ. ಅವರಲ್ಲಿ ಒಬ್ಬಾಕೆ `ಲಂಕೇಶ್ ಪತ್ರಿಕೆ' ಕಚೇರಿಗೇ ಹೋಗಿ ಗೌರಿ ಲಂಕೇಶ್ ಎದುರಿನಲ್ಲೇ ರಾ.ಸೋಮನಾಥನನ್ನು ಚಪ್ಪಲಿಯಲ್ಲಿ ಹೊಡೆದು ಬಂದಳು. ಬಾಬಯ್ಯ fact findinguಇನ್ನೂ ನಡೆಯುತ್ತಲೇ ಇದೆ. ನಮ್ಮ ಬುದ್ಧಿಜೀವಿಗಳು ಎಷ್ಟು ಬಲ ಹೀನರು, ಆತುರ ಗಾರರು, vulnerable and inconsistant fellows ಎಂಬುದಕ್ಕೆ ಈ ಉದಾಹರಣೆ ನೀಡಿದೆ.

ಜೀಸಸ್ ಆಗ್ಬೇಕು! : ನಂತರದ್ದು , ಪೀಠಿ ಅನಂತ ಮೂರ್ತಿಯವರ ನಿಲುವು ಮತ್ತು ದ್ವಂದ್ವಗಳ ಸಂಗತಿ. ಅನಂತಮೂರ್ತಿ ತಮ್ಮ ೬೦ನೇ ಹುಟ್ಟುಹಬ್ಬವನ್ನು ಉಡುಪಿಯ ಸಾರ್ವಜನಿಕ ವೇದಿಕೆಯೊಂದರ ಮೇಲೆ ಪತ್ನಿ ಎಸ್ತರ್ ಅವರ ಸಮೇತ ಅತ್ಯಂತ ಶಾಸ್ತ್ರೋಕ್ತವಾಗಿ ಆಚರಿಸಿಕೊಂಡರು. ವೇದಿಕೆಯ ಮೇಲೆಯೇ ಒಂದೇ ಲೋಟದಲ್ಲಿ ಹಾಲು ಹಂಚಿಕೊಂಡು, ಗಂಡ-ಹೆಂಡತಿ ಕುಡಿದರು. ಅವರ ಬುದ್ಧಿಜೀವಿತನ, ಕ್ರಾಂತಿ,ಬ್ರಾಹ್ಮಣ ವಿರೋಧ, ಜಾತಿನಾಶ ಸಿದ್ಧಾಂತಗಳಿಗಾಗಿ ಅವರನ್ನು ಇಷ್ಟಪಟ್ಟ ಅಭಿಮಾನಿಗಳ ಮುಖಕ್ಕೆ ಆ ಕಾರ್ಯಕ್ರಮ ಕೆರದಲ್ಲಿ ಹೊಡೆದಂತಾಗಿತ್ತು.

ಡಾಲರ್‍ಸ್ ಕಾಲನಿಯಲ್ಲಿ ಸರ್ಕಾರದ ಭಿಕ್ಷೆ ಪಡೆದು ಬಂಗಲೆ ಕಟ್ಟಿಸಿಕೊಂಡ ಅನಂತಮೂರ್ತಿ, ಏನು ಮಾಡೋದು ಬೆಳಗೆರೇ? ಜೀಸಸ್‌ಗೆ ಕೂಡ ಜೀಸಸ್ ಆಗಬೇಕು ಅನ್ನೋ ಆಸೆಯಿತ್ತು. ಗಾಂಜಿ ಕೂಡ ಗಾಂಜಿ ಆಗಬೇಕು ಅಂತ ಬಯಸ್ತಿದ್ರು. ನಾನು ಕೂಡ ಅನಂತಮೂರ್ತಿ ಆಗಬೇಕಿದೆ..! ಅಂತ ವೇದಾಂತ ಮಾತಾಡಿದ್ದರು. ಹೌದ್ದಲೆ ಪೀಠಿ! ಅಂದುಕೊಂಡು ಹಿಂತಿರುಗಿದ್ದೆ. ಅನಂತರದ ದಿನಗಳಲ್ಲಿ ಅನಂತಮೂರ್ತಿಯವರ ಆಷಾಢಭೂತಿತನದ ಬಗ್ಗೆ ನನಗೆ ಅನುಮಾನಗಳುಳಿಯಲಿಲ್ಲ. ಅವರನ್ನು ಟೀಕಿಸಿ ಬರೆದೆ. ನನ್ನ ಮೇಲೆ ಅನಂತ ಮೂರ್ತಿ ಇಹ-ಪರ ಎರಡಕ್ಕೂ ಆಗುವಷ್ಟು ದ್ವೇಷ ಸಾಸಿದರು.

ಅವನೇನಾದ? : ಇವತ್ತಿಗಾದರೂ ಪೀಠಿ ಮೂರ್ತಿ, ತಮ್ಮ ಹಾಗೂ ಪೇಜಾವರ ಮಠದ ಸ್ವಾಮಿಯ ನಡುವಿನ ಸ್ನೇಹ ಚೆದುರಗೊಟ್ಟಿಲ್ಲ. ಆ ಖಾಸಾತನ ಹಾಗೇ ಉಳಿಸಿಕೊಂಡು, ಬಿಜೆಪಿ ವಿರುದ್ಧದ ರ್‍ಹೆಟಾರಿಕ್ ಜಾರಿಯಲ್ಲಿಡುತ್ತಾರೆ. ಬಿಜೆಪಿ ವಿರುದ್ಧ ನೀವಿಬ್ಬರೂ ಬೆಂಬಲಿಸುವುದಾದರೆ ನಾನು ಅನಂತಕುಮಾರ್ ವಿರುದ್ಧ ರ್ಸ್ಪಸುತ್ತೇನೆ ಅಂತ ಪರಮಭ್ರಷ್ಟ ರಾಜಕಾರಣಿ ಎಸ್ಸೆಂ ಕೃಷ್ಣ ಹಾಗೂ ದೇವೇಗೌಡ ಅವರಿಗೆ ಪತ್ರ ಬರೆಯುತ್ತಾರೆ. ಕಡೇ ಪಕ್ಷ ಅಡಿಗರಿಗೆ ಬಲಪಂಥೀಯ ರ ಟಿಕೆಟ್ಟಿನೊಂದಿಗೆ ಚುನಾವಣೆಗೆ ನಿಂತು ಸೋಲುವ ಧೈರ್ಯವಾದರೂ ಇತ್ತು: ಇವರಿಗೆ ಅದೂ ಇಲ್ಲ. ಕಾಲದಿಂದ ಕಾಲಕ್ಕೆ ಹೆಗಡೆ, ಪಟೇಲ್, ಎಸ್ಸೆಂ ಕೃಷ್ಣ -ಹೀಗೆ ಅಕಾರರೂಢರೊಂದಿಗೆ ರಾಕ್ ಅಂಡ್ ರೋಲ್ ಮಾಡಿಕೊಂಡು ಬಂದರೇ ಹೊರತು, ಅನಂತಮೂರ್ತಿ ಯಾವತ್ತೂ ನಿರ್ಗತಿಕರ ಪರ ಹೋರಾಟಕ್ಕಿಳಿಯಲಿಲ್ಲ. ತುಂಗಾ ಮೂಲದ ಮಾತು ಅಲ್ಲಿಗೇಬಿಟ್ಟರು. ಇದರಿಂದಾಗಿಯೇ ದಲಿತ ಚಳವಳಿ ಹೋಳಾಯಿತು ಅಂತ ಇತ್ತಿಗೂ ದ.ಸಂ.ಸ ಕಾರ್ಯಕರ್ತರು ಹಲ್ಲು ಮಸೆಯುತ್ತಾರೆ. ಲಂಕೇಶರು ನೇರವಾಗಿ ಹೋರಾಟಗಳನ್ನು ಕಟ್ಟಿ ಬೆಳೆಸಲಿಲ್ಲ. ಆದರೆ ಸರ್ಕಾರದಿಂದ, ಅವರ ಪ್ರಲೋಭನೆಗಳಿಂದ ಕಡೆತನಕ ದೂರ ಉಳಿದರು. ಈ ಪೀಠಿ ಅದ್ಯಾವುದನ್ನೂ ಉಳಿಸಿಕೊಳ್ಳಲಿಲ್ಲ. ಎಲ್ಲಿಗೆ ಹೋಯಿತು ಇವರ ಮೂರ್ತಿ ಭಂಜಕತೆ?ಎಲ್ಲಿಗೆ ಹೋಯಿತು ಇವರ ಕ್ರಾಂತಿಕಾರಿ, ಜಾತಿ ವಿರೋ, ಶೋಷಿತರ ಪರ ನಿಲುವು ? ಕಡೆಗೆ, ಇವರೊಳಗಿನ ಒಬ್ಬ ಮನುಷ್ಯನಿದ್ದನಲ್ಲ ? ಅವನೇನಾದ ?

ಅಯ್ಯನಿಗೆ ಸನ್ಮಾನ : ನನಗೆ ಜಾಣಗೆರೆ ವೆಂಕಟರಾಮಯ್ಯನವರಂಥ ಅಥವಾ ನಾರಾಯಣ ಗೌಡನಂಥ ವೀರಾಭಿಮಾನಿ ಕನ್ನಡ ಹೋರಾಟಗಾರರು, ಅವರ ಎಲ್ಲ ಒರಟುತನ, ಭೋಳೆತನ, ತಪ್ಪು ಕನ್ನಡಗಳ ಸಮೇತ ಇಷ್ಟವಾಗುತ್ತಾರೆ. ಯಾಕೆಂದರೆ, ಅವರದು ಒಂದು ನಿಲುವು. ಅಚಲ ಬದ್ಧತೆ. ರಾಜ್ ಕುಟುಂಬದ ವಿರುದ್ಧ ದನಿ ತೆಗೆದದ್ದೇ ಜಾಣಗೆರೆ ವೆಂಕಟರಾಮಯ್ಯ. ರಾಜ್‌ಗೆ ಬಂದ ಆಪತ್ತು ಕನ್ನಡಕ್ಕೆ ಬರಬಹುದಾದ ಆಪತ್ತಿಗಿಂತ ದೊಡ್ಡದು ಅಂತ ಅವರಿಗನ್ನಿಸಲಿಲ್ಲ. ಕೆಲವು ಬುದ್ಧಿಜೀವಿ ಮಿತ್ರರು ಮದ್ರಾಸಿಗೆ ಹೋಗಿ ಅಯ್ಯ ನೆಡುಮಾರನ್‌ರನ್ನು ಓಲೈಸಿ, ರಾಜಕುಮಾರ್‌ರನ್ನು ಬಿಡುಗಡೆ ಮಾಡಿಸಿ ತಂದ ನಂತರ ಅವರಿಗೆ ಸನ್ಮಾನ ಮಾಡುತ್ತೇವೆಂದರು. ನಮ್ಮ ರುಂಡ ಕಡಿದರೂ ಸರಿಯೇ, ಸನ್ಮಾನ ಕಾರ್ಯಕ್ರಮ ನಡೆಯಲು ನಾವು ಬಿಡುವುದಿಲ್ಲ ಅಂದವರು ಬುದ್ಧಿಜೀವಿಗಳಲ್ಲ, ಭಾವನಾ ಜೀವಿಗಳಾದ ಹೋರಾಟಗಾರರು! ಮುಂದೆ ಅವೇ ಬುದ್ಧಿಜೀವಿ ಮಿತ್ರರು ಕನ್ನಡ ಸಿನಿಮಾ ಇಂಡಸ್ಟ್ರಿಯ ಸಮಸ್ಯೆಯನ್ನು ಈ ನಾಡಿನ ಸಮಸ್ತ ಕನ್ನಡ, ದಲಿತ, ರೈತ ಸಮಸ್ಯೆಗಳಿಗೆ ಸಮ ಎಂಬಂತೆ project ಮಾಡಿ ಐದು ಲಕ್ಷ ಕನ್ನಡಿಗರನ್ನು ಕರ್‍ಕೊಂಡು ಬರ್‍ತೀವಿ ಅಂತ ಹೂಂಕರಿಸಿದರು. ಎರಡನೇ ದಿನದ ಸಭೆಗೆ ಸಿನೆಮಾದವರೇ ಬರಲಿಲ್ಲ. ಐದು ಲಕ್ಷ ಕನ್ನಡಿಗರು ಹ್ಯಾಗೆ ವಾಪಸು ಹೋದರೋ ?ಗೊತ್ತೇ ಆಗಲಿಲ್ಲ.

ಬಾಬಾ ಬುಡನ್‌ಗಿರಿಯಲ್ಲಿ ಜಿ.ಕೆ.ಗೋವಿಂದರಾವ್ ಥರದ ಬುದ್ಧಿಜೀವಿಗಳು ಮಾಡಿದ್ದೂ ಅದನ್ನೇ. ಮಾತಿಗೆ ನಿಂತರೆ, ಇಡೀ ಜಗತ್ತಿನ್ನೇ ಎದುರು ಹಾಕಿಕೊಂಡು ಬಿಡುವ ತಾಕತ್ತಿರುವವರಂತೆ ಮಾತನಾಡುತ್ತಾರೆ. ಭಜರಂಗ ದಳದವರಂತೆ, ಅರೆಸ್ಸೆಸ್ಸಿನವರಂತೆ, ಬಿಜೆಪಿಯವರಂತೆ, ಕಮ್ಯುನಿಸ್ಟ್ ಟ್ರೇಡ್ ಯೂನಿಯನ್‌ಗಳ ನಾಯಕರಂತೆ - ಇವರು ಯಾವತ್ತೂ ಒಂದು ಚಳವಳಿ ಕಟ್ಟಲಾರರು. ಒಂದೇ ಒಂದು ಸಾಮಾಜಿಕ ಉಪಯೋಗದ ಕೆಲಸ ಮಾಡಲಾರರು. ಒಂದು ಬದುಕು ಕಟ್ಟಿಕೊಡುವ ಕೈಂಕರ್ಯಕ್ಕೆ ಮುಂದಾಗಲಾರರು.

ಯಾವತ್ತು ಮಿಡಿದರು? : ಕಾರ್ಗಿಲ್ ಯುದ್ಧದಲ್ಲಿ ನಮ್ಮದೇ ಅಕ್ಕಪಕ್ಕದ ಮನೆಗಳ ಹುಡುಗರು ಸತ್ತರು. ಇವರು ಮಾಡಿದ್ದೇನು? `ವಾಜಪೇಯಿ ಯುದ್ಧದಾಹಿ ಕಣ್ರೀ!' ಅಂತ ಅಬ್ಬರಿಸಿದರು. ಅದಾಯ್ತು. ನಮ್ಮ ಹುಡುಗರು ಸತ್ತ ರಲ್ಲ?ಅವರ ಕುಟುಂಬಗಳ ಗತಿಯೇನು ಅಂತ ಕೇಳಿದರೆ, ಉತ್ತರ ಕೂಡ ಕೊಡಲಿಲ್ಲ. ಉತ್ತರ ಕೊಟ್ಟವರು ಈ ನೆಲದ ಗಾರೆ ಕೆಲಸದವರು, ರಿಕ್ಷಾ ಡ್ರೈವರುಗಳು, ಸಣ್ಣಗಾತ್ರದ ಸಂಬಳದವರು, ಪ್ರಾಮಾಣಿಕ ದೇಶಭಕ್ತರು. ಈ ಬುದ್ಧಿಜೀವಿಗಳ ಪೈಕಿ ಯಾರೊಬ್ಬರಾದರೂ ಯುದ್ಧ ವೀರರ ಮನೆಗೆ ಅರಪಾವು ಅಕ್ಕಿ ಕಳಿಸಿದ್ದರಾ ? ಕೇಳಿ.

ಗುಜರಾತ್ ಹತ್ಯಾಕಾಂಡವಾಯಿತು. `ಲಬ್ಬೋ' ಅಂತ ಬೊಬ್ಬಿರಿದುಬಿಟ್ಟಿತು ಬುದ್ಧಿಜೀವಿ ಸಮೂಹ. ಹಿಂದೂ ಉಗ್ರರು ಕೊಂದ ಮುಸಲ್ಮಾನ ಶವಗಳನ್ನು ನೋಡಿ ನೋಡಿ ಕಣ್ಣೀರಿಟ್ಟಿತು. ಸಭೆ ನಡೆಸಿತು. ಠರಾವು ಪಾಸು ಮಾಡಿತು. ಎಲ್ಲ ಪತ್ರಿಕೆಗಳಲ್ಲೂ ಇವರ ಹೇಳಿಕೆಗಳು ಪ್ರಕಟವಾದವು. ಅಲ್ಲಿಗೆ ಮುಗಿಯಿತು.

ಈ ನರಮೇಧಕ್ಕೆ ಕೆಲವೇ ತಿಂಗಳಿಗೆ ಮುಂಚೆ ಅದೇ ಗುಜರಾತದಲ್ಲೊಂದು ಭೂಕಂಪವಾಗಿತ್ತು. ಸಾವಿರಾರು ಜನ ಸತ್ತಿದ್ದರು. ಇಡೀ ದೇಶ ಅವರಿಗಾಗಿ ಮರುಗಿ ತನ್ನ ಕೈಲಿದ್ದ ತುತ್ತು, ಗುಜರಾತಕ್ಕೆ ಕಳಿಸಿತು: ಹಿಂದೂ ಮುಸ್ಲಿಮರೆಂಬ ಭೇದವಿಲ್ಲದೆ. ಕಡೆಗೆ ಮುತ್ತಪ್ಪ ರೈ ನಂಥ ಭೂಗತ ಲೋಕದ ಮನುಷ್ಯ ಕೂಡ ಹಣ ಕಳಿಸಿದ. ಈ ಬುದ್ಧಿಜೀವಿಗಳ ಪೈಕಿ ಯಾರಾದರೂ ಅರ್ಧ ರೂಪಾಯಿ ಚಂದಾ ವಸೂಲು ಮಾಡಿ ಕಳಿಸಿದರಾ ಗುಜರಾತಕ್ಕೆ ?

ಪ್ರೀತಿಯ ಅಲೆ : ಮೊನ್ನೆಯ ಸುನಾಮಿ ಅವಘಡಕ್ಕೆ ಇವರು ಪ್ರತಿ ಕ್ರಿಯಿಸಿದ್ದು ಹೇಗೆ ? ಮನೆಮನೆ ಗಳಲ್ಲೂ ಕೂತು ಹಗಲೂ ರಾತ್ರಿ ಚಪಾತಿ ಲಟ್ಟಿಸಿ, ಸಮುದ್ರ ತೀರದ ಹಳ್ಳಿಗಳಿಗೆ ಲಾರಿಗಳಲ್ಲಿ ಕೊಂಡೊಯ್ದರು ಜನ. ಅವರ್‍ಯಾರೂ ಶ್ರೀಮಂತರಲ್ಲ, ಬುದ್ಧಿಜೀವಿಗಳು ಮೊದಲೇ ಅಲ್ಲ. ಮನುಷ್ಯನ ಸಂಕಟಕ್ಕೆ ಮನುಷ್ಯ ಮರುಗಬೇಕು ಅಂತ ಇಚ್ಛಿಸಿದ, ಹಾಗೆಯೇ ವರ್ತಿಸಿದ ಅತಿ ಸಾಮಾನ್ಯ ಜನ.

ಈ ಬುದ್ಧಿಜೀವಿಗಳು ಜೀವನದುದ್ದಕ್ಕೂ ಬರೆದದ್ದು ಆ ನಿರ್ಗತಿಕರ ಬಗ್ಗೆಯೇ! ಆದರೆ ಅವರನ್ನು ಸುನಾಮಿ ಅಲೆ ತಿಂದು ಹಾಕಿದಾಗ, ಈ ಜನ ರಜೆಯಲ್ಲಿದ್ದರು: ಲಾಂಗ್ ಲೀವ್! ತೀರ ಬಾಂಬೆ ಚಿತ್ರರಂಗದ ನಟ-ನಟಿಯರು, ತಂತ್ರಜ್ಞರು ಬಂದು show ಮಾಡಿ ಹಣ ಕೂಡಿಸಿಕೊಟ್ಟರು. ಜಾವೇದ್ ಅಖ್ತರ್‌ನಂಥ ಕವಿ `ಒಂದೊಂದು ಹನಿ ಪ್ರೇಮ, ಪ್ರೀತಿ, ಅಂತಃಕರಣ ಸೇರಿದರೆ ಉಂಟಾಗುವ ಅಲೆಯ ಮುಂದೆ ಸುನಾಮಿ ಅಲೆಯಾವ ಲೆಕ್ಕ? ಬನ್ನಿ. ಸಂತ್ರಸ್ತರಿಗೆ ಸಹಾಯ ಮಾಡೋಣ' ಅಂತ ಕರೆ ನೀಡಿದ. ಸಮಾಜ ಮುಖಿ ಚಿಂತನೆ ಅಂದರೆ ಅದು. ಜನಪರತೆ ಅಂದರೆ ಅದು.

ವರವರರಾವ್ ನಿಲುವು : ಆದರೆ ಇವರೇನು ಮಾಡಿದರು? ಇವರದು ಯಾವ ಜನಪರತೆ? ಹೋಗಲಿ, ತೆಗೆದುಕೊಂಡ ನಿಲುವುಗಳಿಗೆ ಬದ್ಧರಾಗಿಯಾದರೂ ಇರುತ್ತಾರಾ ? ಅವುಗಳ ಆಗುಹೋಗುಗಳ ಬಗ್ಗೆ ಯೋಚನೆಯನ್ನಾದರೂ ಮಾಡುತ್ತಾರಾ? ಅದೂ ಇಲ್ಲ. ಇವರ ಕಣ್ಣೆದುರಿಗೆ ಸಂಘ ಪರಿವಾರ ಎಂಬುದೊಂದು ಬೃಹತ್ `ಶತ್ರು'ವಿರುತ್ತದೆ. ಅದು ಏನನ್ನೇ ಮಾಡಿದರೂ, ಅದಕ್ಕೆ ಉಲ್ಟಾ ಹೊಡೆಯುವುದಷ್ಟೆ ಇವರ ಪ್ರಗತಿ ಪರತೆ. ಆಂಧ್ರದಿಂದ ಗದ್ದರ್ ಮತ್ತು ವರವರರಾವು ಬಂದರು. ತಕ್ಷಣ ನಮ್ಮ ಬುದ್ಧಿ ಜೀವಿಗಳು ಅವರೊಂದಿಗೆ ಐಡೆಂಟಿಫೈ ಮಾಡಿಕೊಂಡರು. ಸಾಕೇತ್ ಸಾವಿನ ಸುದ್ಧಿ ಕೇಳಿ ಧಾವಿಸಿ ಬಂದ ವರವರರಾವು, ಆಂಧ್ರದಲ್ಲಿ ಸರ್ಕಾರ ಮತ್ತು ನಕ್ಸಲ್ ಚಳವಳಿಯ ಮಧ್ಯದ ಮಾತುಕತೆಯ ಮುಖ್ಯಕೊಂಡಿ. ಹಾಗೊಂದು ಪಾತ್ರ ವಹಿಸುವಲ್ಲಿನ ಸಾಧಕ ಬಾಧಕಗಳೆರಡೂ ವರವರರಾವ್‌ಗೆ ಗೊತ್ತು. ಇವತ್ತು ಕೂಡ ಅಲ್ಲಿ ಆತ ಹೇಳಿಕೆ ಕೊಟ್ಟಿದ್ದಾರೆ: `ಇನ್ನು ಸರ್ಕಾರದೊಂದಿಗೆ ಮಾತುಕತೆಯ ಪ್ರಶ್ನೆಯಿಲ್ಲ. ನಕ್ಸಲರು ಶಸ್ತ್ರ ಕೆಳಗಿಟ್ಟರೇನೇ ಮಾತುಕತೆ ಅಂತ ವೈ.ರಾಜ ಶೇಖರ ರೆಡ್ಡಿ ಸರ್ಕಾರ ಹೇಳುತ್ತಿದೆ. ನಕ್ಸಲರು ಶಸ್ತ್ರ ಕೆಳಗಿಡುವುದಿಲ್ಲ ಅನ್ನುತ್ತಿದ್ದಾರೆ. ಹೀಗಾಗಿ ಮಾತುಕತೆ ಮುರಿದುಬಿದ್ದಿದೆ. ನನ್ನ ಅಭಿಪ್ರಾಯದ ಪ್ರಕಾರ ನಕ್ಸಲರು ಶಸ್ತ್ರಾಸ್ತ್ರ ಕೆಳಗಿಡುವುದು ಬೇಕಾಗಿಲ್ಲ' ಅಂದಿದ್ದಾರೆ ವರವರರಾವು. ಅದು ಚಳವಳಿಯ ಆಳ-ಅಗಲ ಗೊತ್ತಿರುವ, ಅದರಲ್ಲಿ ಪಳಗಿರುವ, ಸರ್ಕಾರದೊಂದಿಗೆ ಮಾತಿಗಿಳಿಯಬಲ್ಲ ಅಪ್ಪಟ negotiater ನ ಮಾತು. ಆದರೆ ಇವರೇನು ಮಾಡಿದರು ನೋಡಿ?

ಜನನಂಬುತ್ತಾರಾ? : ವೆಂಕಟಂಪಲ್ಲಿ ಹತ್ಯಾಕಾಂಡದ ಸುದ್ಧಿ ಬಂದ ತಕ್ಷಣ, `ಹ್ಞಾಂ, ಇದು ತಪ್ಪು. ಅಲ್ಲಿ ಮೆಣಸಿನ ಹಾಡ್ಯದಲ್ಲಿ ಪೊಲೀಸರು ನಕ್ಸಲರನ್ನು ಕೊಂದಿದ್ದೂ ತಪ್ಪು. ವೆಂಕಟಂಪಲ್ಲಿಯಲ್ಲಿ ಪೊಲೀಸರನ್ನು ನಕ್ಸಲರು ಕೊಂದಿದ್ದೂ ತಪ್ಪು. ಹಿಂಸೇನ ನಾವು ಬೆಂಬಲಿಸಲ್ಲಪ್ಪ !'ಅಂದುಬಿಟ್ಟರು. ಇವರ ನಿಲುವು ರಾತ್ರೋ ರಾತ್ರಿ ಹೇಗೆ ಬದಲಾಯಿತೆಂದರೆ, ವೆಂಕಟಂಪಲ್ಲಿ ಹತ್ಯಾಕಾಂಡದ ಜವಾಬ್ದಾರಿಯನ್ನು ನಾವು ಹೊರಬೇಕಾಗಿ ಬರುತ್ತದೇನೋ ಎಂಬಂತೆ ವರ್ತಿಸಿಬಿಟ್ಟರು. ಸಾಕೇತ್ ಸಾವಿಗೆ ಕಣ್ಣೀರಿಟ್ಟ ವರು ಘಳಿಗೆಯೇ ಪೊಲೀಸರ ಸಾವಿಗೂ ಕಣ್ಣೀರಿಟ್ಟರೆ -ಇವರನ್ನು ಜನ ನಂಬುವುದು ಹೇಗೆ? ನಂಬುತ್ತಾರಾದರೂ ಯಾರು?

ಗೌರಿಯಂಥವಳಿಗೆ ಚಳಿವಳಿಯ ಪರಿಣಾಮಗಳು ಗೊತ್ತಿಲ್ಲ. ರಾಜ್ಯಾಂಗದ ವಿರುದ್ಧ ಪ್ರತಿಭಟಿಸುವುದು ಬೇರೆ, ಸಂವಿಧಾನ ಬದ್ಧ ಸರ್ಕಾರದ ವಿರುದ್ಧ ಬಂಡೇಳುವುದು ಬೇರೆ. ನಕ್ಸಲ್‌ಚಳವಳಿ ೧೯೬೯ರಿಂದಲೂ ಇದೆ. ಅನೇಕರನ್ನು ಹೊಸಕಿ ನಾಶ ಮಾಡಿಬಿಟ್ಟಿದೆ. ತಾನೂ ಕಾಲದಿಂದ ಕಾಲಕ್ಕೆ ನಶಿಸಿದೆ. ಆದರೆ ಮತ್ತೆ ಜಿಗಿತಿದೆ. ಈತನಕ ಭಾರತದಲ್ಲಿ ಲಕ್ಷಾಂತರ ನಕ್ಸಲೀಯರನ್ನು ಸರ್ಕಾರಗಳು ಕೊಂದು ಹಾಕಿವೆ. ಆದರೂ ಚಳವಳಿ ಮತ್ತೆ ಮತ್ತೆ ತಲೆಯೆತ್ತಿದೆ. ವರವರರಾವು, ಗದ್ದರ್, ತಾರ್ಕುಂಡೆ, ಕನ್ನಬೀರನ್‌ನಂಥವರು ಲಾಠಿ- ಜೈಲು ಜೀವಿಗಳು ನಾಶವೇ ಆಗಿಹೋದರು.

ನಮ್ಮ ಬುದ್ಧಿಜೀವಿಗಳಲ್ಲಿ ಆ ಸ್ಥಿರತೆಯೂ ಇಲ್ಲ, ಬದ್ಧತೆಯೂ ಇಲ್ಲ. ಇವರಿಗೆ ಬುದ್ಧಿ ಹೇಳುವವರು ಯಾರು?