
ರವಿ ಬೆಳಗೆರೆ
ಈ ಹೆಂಗಸು ಸೋನಿಯಾ ಬೆಂಗಳೂರಿನ ಕೊರಳಿಗೆ ಶಿಲುಬೆ ಕಟ್ಟಿ, ಇಲ್ಲಿನ ಲಕ್ಷಾಂತರ ಜನರನ್ನು ಅಂತಾರಾಷ್ಟ್ರೀಯ ವಂಚಕನೊಬ್ಬನ ಕೈಗೆ ಕೊಡಲು ತೀರ್ಮಾನಿಸಿದ್ದಾಳೆ. ಅಕಾರಕ್ಕೆ ಬಂದಾಗಿನಿಂದ ಸೊಂಟದ ಎಲುಬೇ ಸ್ಥಿರವಾಗಿ ನಿಲ್ಲದಿರುವ ಧರಂಸಿಂಗ್ ಸರ್ಕಾರ ಸೋನಿಯಾ ಅಪ್ಪಣೆಯ ಮೇರೆಗೆ ಕೊರಳಿಗೆ ಶಿಲುಬೆ ಕಟ್ಟಿಕೊಂಡು ಬೆನ್ನಿಹಿನ್ ಎಂಬ ಶತಸಿದ್ಧ ವಂಚಕನ ಬೂಟು ನೆಕ್ಕಲು ನಿಂತುಬಿಟ್ಟಿದೆ.
ಬೆನ್ನಿಹಿನ್ ಎಂಬ ಕ್ರಿಶ್ಚಿಯನ್ ವಾಮಾಚಾರಿಗೆ ಕೋಟ್ಯಂತರ ರೂಪಾಯಿ ದೋಚುವ ಇರಾದೆ ಇದೆ. ಮತಾಂತರ ಕೂಡ ಅವನ ಅಜೆಂಡಾಗಳಲ್ಲೊಂದು. ಇವೆರಡೇ ಆಗಿದ್ದಿದ್ದರೆ, ಬೆನ್ನಿಹಿನ್ ಬಂದು ಭಾಷಣ ಮಾಡಿಕೊಂಡು ಹೋಗಲಿ ಅನ್ನಬಹುದಿತ್ತು. ಆದರೆ ಬೆನ್ನಿಹಿನ್ ನಮ್ಮ ದೇಶದ ಸಂಸ್ಕೃತಿ fabricಗೇನೇ ಕೊಳ್ಳಿಯಿಡುತ್ತಿರುವ ಮಲ್ಟಿ ನ್ಯಾಷನಲ್ ಕಂಪನಿಯಂಥವನು. ನಮ್ಮ ಬದುಕು, ದುಡಿಮೆ, ನಮ್ಮ ಔಷ, ಚಿಕಿತ್ಸಾ ಪದ್ಧತಿ, ಕಡೆಗೆ ಮಾನವ ಪ್ರಯತ್ನದ ಮೇಲೆಯೇ ವಿಶ್ವಾಸ ಹೋಗಿಬಿಡುವಂತೆ ಮಾಡಿಬಿಡಬಲ್ಲ ವಿನಾಶಕಾರಿ ಮಲ್ಟಿ ನ್ಯಾಷನಲ್ ಕಂಪೆನಿಯಂಥವನು ಆತ.
ಕಳೆದ ಹತ್ತು ವರ್ಷಗಳ ಇತಿಹಾಸ ತೆಗೆದು ನೋಡಿದರೆ, ಭಾರತವೆಂಬ ದೇಶ ಮಲ್ಟಿ ನ್ಯಾಷನಲ್ ಕಂಪನಿಗಳನ್ನು resist ಮಾಡಲು ಸಂಪೂರ್ಣವಾಗಿ ವಿಫಲಗೊಂಡಿರುವುದು ನಿಮಗೆ ಮನವರಿಕೆಯಾಗುತ್ತದೆ. ಬೆಂಗಳೂರಿನಲ್ಲಿ ಕೆಂಟುಕಿ ಚಿಕನ್ ಮಳಿಗೆ ತೆರೆದರೆ ಊರಿಗೇ ಬೆಂಕಿ ಹಚ್ಚುತ್ತೇವೆ ಅಂದರು ರೈತ ಸಂಘದವರು. ಈಗ ಜಾಗತೀಕರಣದ ಹೆಸರಿನಲ್ಲಿ ಬರಬಾರದ ಔಷಗಳೆಲ್ಲ ನಮ್ಮ ಮೆಡಿಕಲ್ ಸ್ಟೋರ್ಗಳಿಗೆ ಬಂದವು. ಯಾರೂ ಉಸಿರೆತ್ತಲಿಲ್ಲ. ಸ್ವದೇಶಿ ಆಂದೋಲನವೆಂಬ ರಾಜೀವ್ ದೀಕ್ಷಿತರ ಕೂಗು ನಿಷಲ ಆರ್ತನಾದವಾಯಿತು. ಇಡೀ ದೇಶ ಮಲ್ಟಿ ನ್ಯಾಷನಲ್ಗಳ ಕೈಗೆ ಸಿಕ್ಕುಹೋಯಿತು.
ಹೀಗೆ ಭಾರತವೆಂಬ ದೇಶ ಮಲ್ಟಿ ನ್ಯಾಷನಲ್ ಕಂಪನಿಗಳ ಮುಂದೆ ಮೊಳಕಾಲೂರಿ ಕೂತು ಸೋಲೊಪ್ಪಿಕೊಂಡಿರುವಾಗ, ಪಕ್ಕದ ದೇಶದಲ್ಲೇ ಇಸ್ಲಾಂ ಧರ್ಮ ಬೃಹತ್ ಮಲ್ಟಿ ನ್ಯಾಷನಲ್ ಕಂಪೆನಿಯೊಂದರ ವಿರುದ್ಧ ಜಯ ಗಳಿಸಿವೆ. ಇಸ್ಲಾಂನ ತಾಕತ್ತೇ ಅಂತಹುದಿರಬೇಕು. ಅಸಲಿಗೆ ಆಗಿದ್ದೇನು ಅಂದರೆ, ಪಾಕಿಸ್ತಾನದ ಕರಾಚಿಯ ಬಳಿ ದೇಹ್ಚುಹಾರ್ ಅಂತ ಒಂದು ಪಟ್ಟಣವಿದೆ. ಇದನ್ನ ಇತ್ತೀಚಿನ ವರ್ಷಗಳಲ್ಲಿ Education City ಅಂತ ಕರೆಯುತ್ತಾರೆ. ಅಲ್ಲಿ ಸಿಂಧ್ ಇನ್ಸ್ಟಿಟ್ಯೂಟ್ ಆಫ್ ಯುರಾಲಜಿ ಅಂಡ್ ಟ್ರಾನ್ಸ್ಪ್ಲಾಂಟೇಷನ್, ದಿ ಆಗಾಖಾನ್ ಹಾಸ್ಪಿಟಲ್ ಅಂಡ್ ಮೆಡಿಕಲ್ ಕಾಲೇಜ್ ಫೌಂಡೇಷನ್, ದಿ ಆಗಾಖಾನ್ ಯೂನಿವರ್ಸಿಟಿ, ಷಹೀದ್ ಜುಲೀಕರ್ ಅಲಿ ಭುಟ್ಟೋ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ- ಮುಂತಾದ ಬೃಹತ್ ಶೈಕ್ಷಣಿಕ ಸಂಸ್ಥೆಗಳಿವೆ. ಇಂಥ `ವಿದ್ಯಾನಗರಿ'ಯ ಹತ್ತಿರದಲ್ಲೊಂದು ಬಾಟ್ಲಿ ನೀರಿನ ಪ್ಲಾಂಟ್ ಹಾಕುತ್ತೇನೆ ಅಂತ ಹೊರಟಿತು ಬಹುರಾಷ್ಟ್ರೀಯ NESTLE ಕಂಪೆನಿ.
ಬೆಂಗಳೂರಿನಲ್ಲೇನಾದರೂ ಬಾಟ್ಲಿ ನೀರಿನ ಪ್ಲಾಂಟ್ ಹಾಕ್ತೀವಿ ಅಂತ ಬಂದಿದ್ದಿದ್ದರೆ, ಈ ಧರಂ ಸಿಂಗು, ಆರ್.ವಿ. ದೇಶ ಪಾಂಡೆ ಮುಂತಾದವರು ಹೆಗಲ ಮೇಲೆ ಮಡಿನೀರು ಹೊತ್ತುಕೊಂಡು ಹೋಗಿ ಕಂಪೆನಿಯವರ ಪಾದ ತೊಳೆದು ಕರೆತರುತ್ತಿದ್ದರು. ಆದರೆ ಪಾಕಿಸ್ತಾನದ ಪ್ರeವಂತ ಮುಸಲ್ಮಾನರು ಏನು ಮಾಡಿದರೋ ನೋಡಿ.
ನೆಸ್ಲೆ ಕಂಪನಿಯವರ ಪ್ರಕಾ ಕರಾಚಿ ಸಮೀಪದಲ್ಲಿ ಆದು ಹಾಕಲಿದ್ದ ಬಾಟ್ಲಿ ನೀರಿನ ಘಟಕದ ಉದ್ದೇಶ, ಅಫಘನಿಸ್ತಾನದಲ್ಲಿ ಯುದ್ಧ ಮಾಡುತ್ತಿರುವ ಅಮೇರಿಕನ್ ಸೈನಿಕರಿಗೆ ಕುಡಿಯುವ ನೀರು ಒದಗಿಸುವುದು. ಈ ಪ್ರದೇಶದ ಭೂಮಿಯಾಳದಲ್ಲಿ ಸಿಗುವ ನೀರು ಕುಡಿಯಲು ಶುದ್ಧವಲ್ಲವಾದ್ದರಿಂದ ಅದನ್ನು ಶುದ್ಧಕರಿಸಿ, ಕುಡಿಯಲು ಯೋಗ್ಯವನ್ನಾಗಿ ಮಾಡಿಕೊಡುತ್ತೇವೆ ಎಂಬುದು ಅವರ ಸಮರ್ಥನೆ. ನೆಸ್ಲೆಯವರಿಗೆ ಈ ಕಾಂಟ್ರಾಕ್ಟು ಕೊಡಿಸಿದ್ದು ದುಬೈನ ಒಂದು ಶ್ರೀಮಂತ ಸಂಸ್ಥೆ. ಅಲ್ಲಿ ನೀರು ತೆಗೆಯಲು ಬಿಟ್ಟದ್ದೇ ಆದರೆ, ಪ್ರದೇಶದ ಅಭಿವೃದ್ಧಿಗಾಗಿ ಹತ್ತು ಮಿಲಿಯನ್ ಡಾಲರುಗಳ ಬಂಡವಾಳ ಹಾಕಲು ತಾನು ಸಿದ್ಧ ಎಂಬುದಾಗಿ ನೆಸ್ಲೆ ಹೇಳಿತ್ತು.
ಆದರೆ ಪಾಕಿಸ್ತಾನದ ಮುಸಲ್ಮಾನ ಭಾರತೀಯ ಬಾಯಿಬಡುಕ ಹೋರಾಟಗಾರರಿಗಿಂತ ಬುದ್ಧಿವಂತ. ಅವನೇನು ಮಾಡಿದನೋ ನೋಡಿ. ಕರಾಚಿ ಪಕ್ಕದಲ್ಲಿ ಎಂಟು ಹೆಕ್ಟೇರುಗಳ ವಿಸ್ತಾರದಲ್ಲಿ ಈ ಪ್ಲಾಂಟ್ ಹಾಕಲಿರುವ ನೆಸ್ಲೆ ವರ್ಷಕ್ಕೆ ೩೦೬ ಮಿಲಿಯನ್ ಲೀಟರುಗಳಷ್ಟು ನೀರನ್ನು ನೆಲದಿಂದ ಬಸಿಯುತ್ತದೆ.
ಈಗಾಗಲೇ ಪಾಕಿಸ್ತಾನದಲ್ಲಿ AVA ಹೆಸರಿನಲ್ಲಿ bottled ನೀರು ಮಾರುತ್ತಿರುವ ನೆಸ್ಲೆ, ದೊಡ್ಡ ಮಟ್ಟದ ಲಾಭ ಮಾಡುತ್ತಿದೆ. ಅದರ `ಮಿಲ್ಕ್ಪ್ಯಾಕ್' ಕೂಡ ತುಂಬ ಪ್ರಸಿದ್ಧ, ತುಂಬ ದುಬಾರಿ. ಇಂಥ ನೆಸ್ಲೆಗೆ ಈಗ ಕರಾಚಿ ಸಮೀಪದಲ್ಲಿ ನೆಲಕ್ಕೆ ತೂತು ಹಾಕಲು ಅವಕಾಶ ಕೊಟ್ಟು ಬಿಟ್ಟರೆ, ಪಕ್ಕದಲ್ಲಿರುವ `ವಿದ್ಯಾನಗರಿ'ಗೆ ತಿಕ ತೊಳೆಯಲಿಕ್ಕೂ ನೀರಿಲ್ಲದಂತಾದೀತು. ನೀರಿನ ಅಂತರ್ಜಲ ಕಡಿಮೆಯಾಗಿ ಹೋಗುವುದರಿಂದ ಪಾಕಿ ರೈತ ಕಂಗಾಲಾಗಿ ಕಂಗಾಲಾಗಿ ಬಿಡುತ್ತಾನೆ. ಈ ಪ್ರಾಂತ್ಯಕ್ಕೆ ವರ್ಷದಲ್ಲಿ ಬೀಳುವುದೇ ಐದಿಂಚು ಮಳೆ. ಆ ಮಳೆಯಲ್ಲಿ ೭೦% ನಷ್ಟು ಆವಿಯಾಗಿ ಹೋಗುತ್ತದೆ. ಉಳಿದ ೧೫% ನೀರು ಮಾತ್ರ ಜನಜಳಕೆಗೆ ಲಭ್ಯ. ನೆಸ್ಲೆ ಕಂಪೆನಿ ಆ ನೀರನ್ನೂ ಗುನ್ನ ಹೊಡೆದು ತೆಗೆದುಬಿಟ್ಟರೆ ಗತಿಯೇನು?
ಹಾಗಂತ ಕೇಳಿದರೆ, ಅಮೆರಿಕದ ಮೊಳಕೈ ಕೆಳಗೆ ನೀರು ಕುಡಿಯುತ್ತಿರುವ ಮುಷರ್ರಫ್ ಸರ್ಕಾರ ಹೇಗಾದರೂ ಬಾಯಿ ಮುಚ್ಚಿಸಿ ನೆಸ್ಲೆ ಕಂಪೆನಿಗೆ ಅನುಮತಿ ಕೊಟ್ಟು ಬಿಟ್ಟೀತು. ಕೇವಲ ಜನರ ಬವಣೆ ಹೇಳಿಕೊಂಡರೆ, ನ್ಯಾಯಾಲಯವೂ ವಾದವನ್ನು ಮನ್ನಿಸುವುದಿಲ್ಲ. ಹಾಗಂದುಕೊಂಡು ಪಾಕಿಸ್ತಾನಿ ಮುಸಲ್ಮಾನ ಎಂಥ ತಂತ್ರ ಹೂಡಿದ ಗೊತ್ತೆ ?
`ಈ ನೆಲದಲ್ಲಿ ಬಾಟ್ಲಿ ನೀರಿನ ಪ್ಲಾಂಟ್ ಹಾಕುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದು!' ಅಂದುಬಿಟ್ಟ.
ತಕ್ಷಣ ನ್ಯಾಯಾಲಯ ನೆಸ್ಲೆ ವಿರುದ್ಧ ತಡೆಯಾಜ್ಞೆ ನೀಡಿತು. ಅಷ್ಟೇಅಲ್ಲ : ಕರಾಚಿ ಪಕ್ಕದ ಈ ಪ್ರಾಂತ್ಯದಲ್ಲಿ ಯಾವತ್ತಿಗೂ ನೀರಿನ ಪ್ಲಾಂಟು ಹಾಕಲೇಕೂಡದೆಂದು ಶಾಶ್ವತವಾಗಿ ಸಿಂಧ್ ಹೈಕೋರ್ಟು ಆಜ್ಞೆ ಹೊರಡಿಸಿತು. ಇದಕ್ಕೋಸ್ಕರ ಇಸ್ಲಾಮಿಕ್ ಶಕ್ತಿಗಳು ಹೂಡಿದ ವಾದವೇನು ಗೊತ್ತೆ ?
`ಇಸ್ಲಾಂ ಧರ್ಮದ ಪ್ರಕಾರ ನೀರು ಅಲ್ಲಾಹುವಿನ ಸೃಷ್ಟಿ. ಎಲ್ಲರದೂ ಆಗಿರುವ ನೀರಿನ ಮೇಲೆ ಎಲ್ಲರಿಗೂ ಹಕ್ಕು ಇರತಕ್ಕದ್ದು. ಅದನ್ನು ಎಲ್ಲರೂ ಸಮನಾಗಿ ಉಪಯೋಗಿಸತಕ್ಕದ್ದು. ಅದನ್ನು ಎಲ್ಲರೂ ಸಮನಾಗಿ ಉಪಯೋಗಿಸ ತಕ್ಕದ್ದು. ಉಳಿದವರಿಗೆ ಉಪಯೋಗಿಸಲು ಆಗದಂತಹ ರೀತಿಯಲ್ಲಿ ಆ ನೀರನ್ನು ಯಾರೂ ನೆಲದಿಂದ ತೆಗೆಯಕೂಡದು. ಅದು ಇಸ್ಲಾಂ ವಿರೋ ಪ್ರಯತ್ನವಾದೀತು!' ಅಂದರು. ಆ ಮೇಲೆ ನೆಸ್ಲೆ ಕಂಪೆನಿ ಅಮೆರಿಕದ ವಕೀಲರನ್ನೆಲ್ಲ ಕರೆತಂದು ಬುದ್ಧಿ ಖರ್ಚು ಮಾಡಿಸಿದೆ. ಆದರೂ ಉಪಯೋಗವಾಗಿಲ್ಲ. ಕಡೆಗೆ ನೆಸ್ಲೆ ಗಂಟು ಮೂಟೆ ಕಟ್ಟಿಕೊಂಡು ಅಲ್ಲಿಂದ ಹಿಂತಿರುಗಿದೆ.
ಇದನ್ನು ನೀವು ಮತೀಯವಾದಿಗಳ ಕೆಲಸ ಅಂತೀರೇನೋ? ಅನ್ನಿ. ಅವರ ನೀರು ಅವರು ಉಳಿಸಿಕೊಂಡರು. ಇಲ್ಲಿ ಅಮೆರಿಕಕ್ಕೇ ನೇರವಾಗಿ ಹುಟ್ಟಿದವರಂತಾಡುವ ನಮ್ಮ ಬುದ್ಧಿ ಜೀವಿಗಳು, ಕಣ್ಣೆದುರಿನಲ್ಲೇ ನಮ್ಮ ಬೇವಿನ ಮರದ ಬೀಜದಿಂದ ಹಿಡಿದು ಹಪ್ಪಳ ಸಂಡಿಗೆಯ ತನಕ ಎಲ್ಲದರದ್ದೂ ಪೇಟೆಂಟ್ ಆಗಿಹೋದರೂ ಖಿಮಕ್ಕೆನ್ನಲಿಲ್ಲ. ಬಾಬಾ ಬುಡನ್ಗಿರಿಯ ತುದಿಯಲ್ಲಿನ ಸಮಾ ಹಿಂದೂಗಳದಾ, ಮುಸಲ್ಮಾನರದಾ ಎಂಬ issue ಇಟ್ಟುಕೊಂಡು ಈ ಬುದ್ಧಿಜೀವಿ ಅನಂತಮೂರ್ತಿ ತಲೆಯೆಲ್ಲ ಮಾತನಾಡುತ್ತಾರೆ. ಸರ್ಕಾರ ಕೊಡುವ ಯಾವ ಸವಲತ್ತೂ ಬಿಡದೆ ಜನಿವಾರಕ್ಕೆ ಗಂಟು ಕಟ್ಟಿಕೊಳ್ಳುವ ಬುದ್ಧಿಜೀವಿ ಅನಂತ ಮೂರ್ತಿ, ಬೆನ್ನಿಹಿನ್ನಂಥ ವಂಚಕ ಬಂದು ಊರು ಕೊಳ್ಳೆ ಹೊಡೆಯಲಿದ್ದಾನೆ ಅಂದರೆ ಅದನ್ನು ವಿರೋಸಿ ಚಿಕ್ಕದೊಂದು ಮಾತೂ ಆಡುವುದಿಲ್ಲ. `ಹಣೆಗೆ ಕುಂಕುಮವಿಟ್ಟುಕೊಳ್ಳುವವರೆಲ್ಲ ಭಜರಂಗಿಗಳು' ಎಂಬಂತೆ ಮಾತಾಡುವ ಜಿ.ಕೆ.ಗೋವಿಂದರಾಯರು, ಇಡೀ ವಿಧಾನಸೌಧಕ್ಕೇ ಶಿಲುಬೆ ಕಟ್ಟಲಾಗುತ್ತಿದ್ದರೂ ಕಿವಿಗೆ ಮೇಣ ಬಿದ್ದವರಂತೆ ಸುಮ್ಮನಿರುತ್ತಾರೆ. ಏಕೆಂದರೆ ಕ್ರಿಶ್ಚಿಯನ್ನರನ್ನು hurt ಮಾಡಲಿಕ್ಕೆಯಾರಿಗೂ ಇಷ್ಟವಿಲ್ಲ. ಮುಸ್ಲಿಮರ ವಿರುದ್ಧ ಮಾತನಾಡಿದರೆ ಒದ್ದಾರೆಂಬ ಭಯ. ಕ್ರಿಶ್ಚಿಯನ್ನರ ವಿರುದ್ಧ ಮಾತನಾಡಿದರೆ, ಅವರು hurt ಆದಾರೆಂಬ ಆತಂಕ. ಏನು ಮಾತನಾಡಿದರೂ, ಯಾವ ಹೇಳಿಕೆ ಕೊಟ್ಟರೂ, ಎಷ್ಟು ಕೆಟ್ಟದಾಗಿ ಬರೆದರೂ ಸುಮ್ಮನಿರುವ, ಸಹಿಸಿಕೊಳ್ಳುವ crowd ಒಂದಿದೆಯಲ್ಲ, ಹಿಂದೂಗಳದು ? ಅದರೆಡೆಗೆ ಅನಂತಮೂರ್ತಿ ಕಲ್ಲೆ ಸೆಯುತ್ತಲೇ ಬಂದಿದ್ದಾರೆ.
ಸಂತೋಷದ ಸಂಗತಿಯೆಂದರೆ Benny Hynn ನಂತಹ ವಂಚಕ ಮತ ಪ್ರಚಾರಕನನ್ನು ಬೆಂಗಳೂರಿನ ಕ್ರಿಶ್ಚಿಯನ್ನರೇ ವಿರೋಸಿದ್ದಾರೆ. ಅವನನ್ನು ಊರೊಳಕ್ಕೆ ಬಿಡಬೇಡಿ ಅಂದಿದ್ದಾರೆ. ನಾನಾ ದೇಶಗಳ ಕ್ರಿಶ್ಚಿಯನ್ ಸಂಘಟನೆಗಳು ಅವನನ್ನು ಛೀಮಾರಿಗೀಡುಮಾಡಿದೆ. ಬೆನ್ನಿ ಹಿನ್ ಕೇವಲ ಮತಪ್ರಚಾರಕನಲ್ಲ : ಅವನೊಬ್ಬ ಬೃಹತ್ವಂಚಕ ಎಂಬುದು ನೂರಾರು ದೇಶಗಳ ಸರ್ಕಾರಗಳಿಗೇ ಮನವರಿಕೆಯಾಗಿದೆ. ಆದರೆ ಸೋನಿಯಾ ಗಾಂಯಂಥ ಅವಿವೇಕಿ, ಅವನಿಗೆ ವೀಸಾ ಕಲ್ಪಿಸಿಕೊಡುತ್ತಾಳೆ. ಅವನ ಖಾಸಗಿ ವಿಮಾನ ಭಾರತದ air spaceನಲ್ಲಿ ಓಡಾಡಲು ಬಿಡುತ್ತಾಳೆ. ಅವನ ಕಾರ್ಯಕ್ರಮಕ್ಕೆ ಅತ್ಯಂತ ಆಯಕಟ್ಟಿನ ಜಾಗವಾದ ಜಕ್ಕೂರು ವಿಮಾನ ಆಶ್ರಯದ ಬಯಲನ್ನೇ ಕೊಡಿಸುತ್ತಾಳೆ. ತನ್ನ ಪಕ್ಷದ ಮುಖ್ಯಮಂತ್ರಿಗೆ `ಬೆನ್ನಿಹಿನ್ನ ಕಾರ್ಯಕ್ರಮ ಅಬಾತವಾಗಿ ಸಾಗುವಂತೆ ನೋಡಿಕೊಳ್ಳಿ' ಎಂಬ ಸಂದೇಶ ಕಳಿಸುತ್ತಾಳೆ.
ಇದನ್ನು ನಮ್ಮ ದೇಶ ಪ್ರತಿಭಟಿಸುವುದೂ ಇಲ್ಲ! ಏಕೆಂದರೆ, ಪ್ರಜಾಪ್ರಭುತ್ವ ಇಸ್ಲಾಂನಷ್ಟು ಪ್ರಭಾವಶಾಲಿಯಲ್ಲ.
ಮೇರಾ ಭಾರತ್ ಮಹಾನ್!
No comments:
Post a Comment