Tuesday, July 25, 2006

ಈ ಮತ ಪ್ರಚಾರಕ ಪಾಪಿಗಳನ್ನು ಯಾರು ಕ್ಷಮಿಸಬೇಕು ?

ರವಿ ಬೆಳಗೆರೆ


ಒಳ್ಳೆ ಸುದ್ದಿ ಬಂದಿದೆ. ಆಸ್ಟ್ರೇಲಿಯಾದ ಕ್ರೈಸ್ತ ಮತ ಪ್ರಚಾರಕ ಸ್ಟಿವರ್ಟ್ ಗ್ರಹಾಂ ಸ್ಟೇನ್ಸ್‌ನನ್ನು ಅವನ ಮಕ್ಕಳಾದ ಫಿಲಿಪ್ ಮತ್ತು ಟಿಮೂತಿ ಸಮೇತ ೧೯೯೯ರ ಜನವರಿ ೨೨ರಂದು ಒರಿಸ್ಸಾದ ಮನೋಹರ್ ಪುರದಲ್ಲಿ ದಾರಾ ಸಿಂಗ್ ಮತ್ತು ಇತರೆ ಒಂದಷ್ಟು ಜನ ಸೇರಿಕೊಂಡು, ವ್ಯಾನ್‌ನಲ್ಲಿ ಮಲಗಿದ್ದಂತೆಯೇ ಸುಟ್ಟು ಹಾಕಿದ್ದರಲ್ಲ ? ಅವರ ಪೈಕಿ ದಾರಾ ಸಿಂಗ್ ಸೇರಿದಂತೆ ಹದಿಮೂರು ಜನ ತಪ್ಪಿತಸ್ಥರೆಂದು ಒರಿಸ್ಸಾದ ನ್ಯಾಯಾಲಯ ಘೋಷಿಸಿದೆ. ಅವರಿಗೆ ಯಾವ ಶಿಕ್ಷೆ ನೀಡಬೇಕೆಂಬುದನ್ನು ನಾಳೆ ಸೆಪ್ಟೆಂಬರ್ ೨೨ರಂದು ನ್ಯಾಯಾಲಯವು ತಿಳಿಸಲಿದೆ.

`ದೇವರೇ, ಅವರನ್ನು ಕ್ಷಮಿಸು. ನನ್ನ ಗಂಡ ಹಾಗೂ ಇಬ್ಬರು ಮಕ್ಕಳನ್ನು ಜೀವಂತ ಸುಟ್ಟವರನ್ನು ನಾನು ಆವತ್ತೇ ಕ್ಷಮಿಸಿದ್ದೇನೆ. ಈಗ ಭಾರತೀಯ ನ್ಯಾಯಾಲಯ ತಾನು ಮಾಡಬೇಕಾಗಿದ್ದ ಕರ್ತವ್ಯವನ್ನು ದಕ್ಷತೆಯಿಂದ ಮಾಡಿದೆ. ಆದರೆ ಕ್ರೈಸ್ತ ಧರ್ಮದ ಮೂಲ ಮಂತ್ರವೇ ಪ್ರೀತಿ, ಕರುಣೆ, ಕ್ಷಮೆ ! ತಾವೇನು ಮಾಡುತ್ತಿದ್ದೇವೆಂದು ಗೊತ್ತಿಲ್ಲದೆಯೇ ತಪ್ಪು ಮಾಡಿದ ಆ ಜನರನ್ನು ಮರಣ ದಂಡನೆಗೆ ಮಾತ್ರ ಈಡು ಮಾಡಬಾರದು. ದೇವರೇ, ಅವರನ್ನು ಕ್ಷಮಿಸು...ಆಮೆನ್'ಅಂದಿದ್ದಾಳೆ ಗ್ರಹಾಂನ ಪತ್ನಿ ಗ್ಲಾಡಿಸ್ ಜೂನ್ ಸ್ಟೇನ್ಸ್.

ಪಾಪ, ದೊಡ್ಡ ಮನಸ್ಸಿನ ಹೆಣ್ಣು ಮಗಳು. ಗಂಡನನ್ನು ಕೊಂದ ಕಡು ಪಾಪಿಗಳನ್ನೇ ಕ್ಷಮಿಸು ಎಂದು ದೇವರಲ್ಲಿ ಮೊರೆಯಿಟ್ಟಿದ್ದಾಳೆ. ಆಕೆಯ ದೊಡ್ಡತನವನ್ನು ನಾವು ಮೆಚ್ಚಬೇಕು.ಅಂತೆಯೇ ಧರ್ಮ ಪ್ರಚಾರಕ ಗ್ರಹಾಂನನ್ನೂ ಅವನ ಇಬ್ಬರು ಅಪ್ರಾಪ್ತ ಮಕ್ಕಳನ್ನೂ ವ್ಯಾನಿನಲ್ಲಿ ಮಲಗಿರುವಾಗ ಜೀವಂತ ಸುಟ್ಟ ದಾರಾ ಸಿಂಗ್ ಮತ್ತು ಅವನ ಹಿಂದೂ ಮತಾಂಧ ಬೆಂಬಲಿಗರಿಗೆ ಕಟುವಾದ ಶಿಕ್ಷೆ ಆಗಲೇಬೇಕು. ಆದರೆ ನನ್ನದೊಂದು ಸಣ್ಣ ಪ್ರಶ್ನೆಯಿದೆ. ನಿಮಗದು ವಿಚಿತ್ರ ಎನಿಸಬಹುದು. ಗ್ರಹಾಂ ಸ್ಟೇನ್ಸ್‌ನನ್ನು ಸುಟ್ಟು ಕೊಂದವರಿಗೆ ಕೋರ್ಟು ಶಿಕ್ಷೆ ಕೊಡಲಿದೆ. ಗಂಡನನ್ನು ಸುಟ್ಟು ಕೊಂದರೂ ಆ ಪಾಪಿಗಳನ್ನು ಕ್ಷಮಿಸು ಎಂದು ಸ್ಟೇನ್ಸ್ ಪತ್ನಿ ಏಸುವಿನಲ್ಲಿ ಮೊರೆಯಿಟ್ಟಿದ್ದಾಳೆ. ಆದರೆ ಭಾರತಕ್ಕೆ ಎಲ್ಲೆಲ್ಲಿಂದಲೋ ಬಂದು ಮತ ಪ್ರಚಾರ ಮಾಡುತ್ತಿದ್ದಾರಲ್ಲ ?

ಈ ಮತ ಪ್ರಚಾರಕ ಪಾಪಿಗಳನ್ನು ಯಾರು ಕ್ಷಮಿಸಬೇಕು ? ಅಥವಾ ಇವರನ್ನು ಯಾರು ದಂಡಿಸಬೇಕು ?

ನನ್ನ ಪ್ರಶ್ನೆ ಅಲ್ಲಿಗೇ ನಿಲ್ಲುವುದಿಲ್ಲ. ಗೋ ಹತ್ಯೆಗೆ, ಗೋ ಮಾಂಸ ತಿನ್ನುವುದಕ್ಕೆ ಸಂಬಂಸಿದಂತೆ ದೇವೇಗೌಡರು ಆಡಿದರೆನ್ನಲಾದ ಮಾತುಗಳನ್ನು ಕೇಳಿಸಿಕೊಳ್ಳಿ. `ಅಯ್ಯೋ ಬಿಡ್ರೀ, ದನದ ಮಾಂಸ ತಿನ್ನೋರು ಎಲ್ಲಾ ಜಾತೀಲೂ ಇದ್ದಾರೆ. ಒಕ್ಕಲಿಗರು ತಿನ್ನಲ್ವಾ ? ಲಿಂಗಾಯತರು ತಿನ್ನಲ್ವಾ ?' ಎಂಬ ಧಾಟಿಯ ಅತ್ಯಂತ ಬೇಜವಾಬ್ದಾರಿಯುತ ಮಾತುಗಳಿವು. ಅವುಗಳನ್ನು ಗೌಡರು ತೀರ ಉದ್ದೇಶ ಪೂರ್ವಕವಾಗಿ ಆಡಿಲ್ಲ. ಲಿಂಗಾಯತರನ್ನಾಗಲೀ ವಕ್ಕಲಿಗರನ್ನಾಗಲೀ of course ಯಾವುದೇ ಜಾತಿಯವರನ್ನಾಗಲೀ ಒಬ್ಬ ರಾಜಕಾರಣಿ ತೀರ ಚುನಾವಣೆಗಳ ಸಮಯದಲ್ಲಿ ಹೀಗೆ ಎದುರು ಹಾಕಿಕೊಳ್ಳುವ ಧೈರ್‍ಯ ಮಾಡುವುದಿಲ್ಲ. ಆದರೆ ಮಾತನಾಡುವ ಭರದಲ್ಲಿ ಪಕ್ಕದಲ್ಲಿ ಕುಳಿತ ಮುಸ್ಲಿಮರಿಗೋ ಕ್ರೈಸ್ತರಿಗೋ ಖುಷಿಯಾಗಲೀ ಅಂತ `ಅಯ್ಯೋ ತಿನ್ನದೆ ಏನು ನಮ್ಮೋರೂ ತಿಂತಾರೆ ಬಿಡಿ !' ಅಂದಿರುತ್ತಾರೆ.

ನೀವು ಗಮನಿಸಿ ನೋಡಿ. ಹೀಗೆ ಮಾತನಾಡುವುದು ಭಾರತದ ಎಲ್ಲ ಜಾತಿಗಳ ಎಲ್ಲ ರಾಜಕೀಯ ಪಕ್ಷಗಳ ಕೆಲವೊಮ್ಮೆ ಎಲ್ಲ ಪತ್ರಕರ್ತ- ಬುದ್ಧಿಜೀವಿಗಳ ಅಭ್ಯಾಸ. ಅದು ಚಟ. ಅದು ಬಾಯಿ ತುರಿಕೆ. ಅದು ಮುಸ್ಲಿಂ- ಕ್ರಿಶ್ಚಿಯನ್ ಜಾತಿಗಳವರ ಓಟು ಸೆಳೆದುಕೊಳ್ಳುವ ಕ್ಷುದ್ರ ವಿಧಾನ. ಭಾರತದಂತಹ ದೇಶದಲ್ಲಿ ಮುಸ್ಲಿಮರ, ಕ್ರೈಸ್ತರ ಹತ್ಯೆಗಳಾದಾಗ ಅದನ್ನು ಲಬ್ಬಗುಟ್ಟಿ ಬಾಯಿ ಬಡಿದುಕೊಂಡು ಖಂಡಿಸಿದರೆ ಅದು ಸೆಕ್ಯುಲರಿಸಂ. ಉಳಿದಂತೆ ಪಂಜಾಬರ, ಸಿಖ್ಖರ, ಕಾಶ್ಮೀರಿ ಪಂಡಿತರ ನರಮೇಧಗಳು ನಡೆದು ಹೋದಾಗ ಆ ಬಗ್ಗೆ ದಿವ್ಯ ಮೌನ ಧರಿಸಿದರೆ, ಆಹಾ ಅದು ಕಣ್ರೀ ಜನಪ್ರಿಯತೆ. ಅದು ಕಣ್ರೀ ಮಾನವೀಯತೆ. ನಿಜವಾದ ಸೆಕ್ಯುಲರಿಸಂ ಅಂದರೆ ಅದಲ್ಲವೇ ? ಹೀಗಾಗಿ ನೀವು ಹೆಗಡೆ ಬೊಮ್ಮಾಯಿ- ದೇವೇಗೌಡ- ಕೃಷ್ಣ - ಕಾಗೋಡು ತಿಮ್ಮಪ್ಪ ಮುಂತಾದ ಯಾರೂ ಒಂದೇ ಒಂದು ಸಲ ಕಾಶ್ಮೀರದ ಹಿಂದೂ ಮತ್ತು ಸಿಖ್ ಹತ್ಯೆಗಳ್ನು ಖಂಡಿಸಿ ಒಂದೇ ಒಂದು ಹೇಳಿಕೆ ಕೊಡುವುದಿಲ್ಲ. ಶಹಬಾಸ್ ಸೆಕ್ಯುಲರಿಸಂ !

ಅದು ಒತ್ತಟ್ಟಿಗಿರಲಿ. ಗ್ರಹಾಂ ಸ್ಟೇನ್ಸ್ ಹತ್ಯೆಯನ್ನು ಮೈ ತುಂಬ ಬಾಯಿ ಮಾಡಿಕೊಂಡು ಖಂಡಿಸಿದ ರಾಜಕಾರಣಿಗಳ ಪಟ್ಟಿ ತೆಗೆದುನೋಡಿ. ಅದರಲ್ಲಿ ಸೋನಿಯಾ ಗಾಂಯಿಂದ ಹಿಡಿದು ಬಾಬುರಾವ್ ಚಿಂಚನಸೂರ್ ತನಕ ಎಲ್ಲ ತರಹದ ಅವಿವೇಕಿಗಳೂ ಇದ್ದಾರೆ. ನಡೆದು ಹೋದ ಮೂರು ಬರ್ಬರ ಹತ್ಯೆಗಳಿಗಾಗಿ ಅವರು ಕಣ್ಣೀರು ಸುರಿಸಿದ್ದಾರೆ.

ಆದರೆ ಭಾರತ ದೇಶದ ಇಡೀ ಈಶಾನ್ಯ ಭಾಗದಲ್ಲಿ ಪ್ರತಿನಿತ್ಯ ಸ್ಥಳೀಯ ಧರ್ಮದ ಕೊಲೆಯಾಗುತ್ತಿದೆ. ಕೊರಳಲ್ಲಿ ರುದ್ರಾಕ್ಷಿ, ಹಣೆಗೆ ನಾಮ, ರಾಮಮಂದಿರ, ಭಗವಾ ಧ್ವಜ, ಕೈಲಿ ತ್ರಿಶೂಲ ಇದ್ಯಾವುದೂ ಧರಿಸದೆ ತಮ್ಮ ಪಾಡಿಗೆ ತಾವು ಬದುಕುತ್ತಿದ್ದ ಬುಡಕಟ್ಟು ಜನ ಇವತ್ತು ಏನಾಗಿ ಹೋಗಿದ್ದಾರೆ ಎಂಬುದನ್ನು ಯಾರಾದರೂ ಗಮನಿಸಿದ್ದಾರಾ ? ಅವರು ಹಿಂದೂಗಳಾಗಿರಲಿಲ್ಲ. ಅವರು ರಾಮನ ಪೂಜೆಯವರಲ್ಲ. ಆರೆಸ್ಸೆಸಿಗರಲ್ಲ. ನಾನು ಅಂಥವರ ಪರವಾಗಿ ಮಾತನಾಡುತ್ತಿಲ್ಲ. ಅವರೆಲ್ಲ ಬುಡಕಟ್ಟಿನವರಾಗಿದ್ದರು. ಅವರಿಗೆ ತಮ್ಮದೇ ಆದ ದೇವ ದೇವತೆಗಳಿದ್ದವು. ಹಾಡಿದ್ದವು. ನೃತ್ಯಗಳಿದ್ದವು. ಅವರದೊಂದು ಸಂಸ್ಕೃತಿ ಅಂತ ಇತ್ತು. ಅದೆಲ್ಲದರ ನಡುವೆಯೂ ಅವರಿಗೆ ಭಾರತದ ಮೇಲೆ ಪ್ರೀತಿಯಿತ್ತು. ಚೀಣದಂತಹ ಚೀಣ ಮೈಮೇಲೇರಿ ಬಂದಾಗ ಅವರು ಭಾರತದ ಪರವಾಗಿ ನಿಂತು ಬಡಿದಾಡಿದ್ದರು. ಭಾರತದ ನೌಕರಿ- ಚಾಕರಿ ಮಾಡಿದ್ದರು. ಪ್ರತೀ ಜನವರಿ ೨೬ಕ್ಕೆ ದಿಲ್ಲಿಗೆ ಬಂದು ಪರೇಡಿನಲ್ಲಿ ಕುಣಿದು ಜೈ ಹಿಂದ್ ಅಂದು ತಂತಮ್ಮ ಬೆಟ್ಟಗಳ ತಪ್ಪಲುಗಳಿಗೆ ವಾಪಸು ಹೋಗಿದ್ದರು. ಈಶಾನ್ಯ ಭಾರತದ ಬುಡಕಟ್ಟಿನ ಜನ ನಮ್ಮ ಲಮಾಣಿಗರಂತೆ, ಹಕ್ಕಿ ಪಿಕ್ಕಿಗಳಂತೆ, ಸಿದ್ದಿಗಳಂತೆ ತಮ್ಮ ಪಾಡಿಗೆ ತಾವಿದ್ದರು. ಅವರ್‍ಯಾರನ್ನೂ `ನೀವು ಹಿಂದೂಗಳಾಗಿ' ಎಂದು ಭಾರತೀಯರು ಒತ್ತಾಯಿಸಿರಲಿಲ್ಲ. ರಥಯಾತ್ರೆಗೆ ಕರೆದಿರಲಿಲ್ಲ. ಇಟ್ಟಿಗೆ ಹೊರೆಸಿ ತಿಲಕ ಹಚ್ಚಿರಲಿಲ್ಲ.

ಆದರೆ ಅಂಥ ಲಕ್ಷಾಂತರ ಜನರ ಕೊರಳಿಗೆ ಇಂದು ಶಿಲುಬೆ ಹಾಕಿದವರ್‍ಯಾರು ಸ್ವಾಮಿ ? ನಿಮಗೂ ಗೊತ್ತಿರಬಹುದು. ಬುಡಕಟ್ಟು ಜನಾಂಗದವರು ಎಲ್ಲೆಲ್ಲಿರುತ್ತಾರೋ ಅಲ್ಲೆಲ್ಲ ಕ್ರೈಸ್ತ ಮತ ಪ್ರಚಾರಕರು ಕೆಲಸ ಮಾಡುತ್ತಾರೆ. ಅಲ್ಲಿಗೆ ಏಸುವು ಬರುವುದಿಲ್ಲ . ಕೋಟ್ಯಂತರ ಡಾಲರುಗಳು ಬರುತ್ತವೆ. ಪೆಪ್ಸಿ ಬರುತ್ತದೆ. ಅಮೆರಿಕದ ಅಪತ್ಯ ಮತ್ತು ಕ್ರೈಸ್ತ ಧರ್ಮ ಹೇಗೆ ಜೊತೆ ಜೊತೆಯಾಗಿ ಬಿಡುತ್ತವೋ ಗಮನಿಸಿ. ಇವತ್ತು ನಾಗಾಲ್ಯಾಂಡ್‌ನ ೯೦ ಪರ್ಸೆಂಟ್ ಜನ ಕ್ರೈಸ್ತರು. ಮಿಜೋರಾಂನಲ್ಲಿ ಅವರು ೮೫ ಪರ್ಸೆಂಟಿನಷ್ಟಿದ್ದಾರೆ. ಮೇಘಾಲಯದಲ್ಲಿ ಅರವತ್ತೈದು ಪರ್ಸೆಂಟು ! ತೀರ ಅರುಣಾಚಲ ಪ್ರದೇಶದಂತಹ ಗುಡ್ಡ ಮೋಡಗಳ ಸೀಮೆಯಲ್ಲಿ ೧೯೬೧ರಲ್ಲಿ ಬರೀ ೧೭೫೦ ಜನ ಕ್ರೈಸ್ತರಿದ್ದರು. ಅವರಿವತ್ತು ಒಂದು ಲಕ್ಷ ಹದಿನೈದು ಸಾವಿರದಷ್ಟಾಗಿದ್ದಾರೆ. ಅಲ್ಲಿ ಮೊದಲು ಒಂದೇ ಒಂದು ಗುಡಿಯಿರಲಿಲ್ಲ. ಇವತ್ತು ೭೦೦ ಚರ್ಚುಗಳಿವೆ. ಇದೂ ಸಂತೋಷವೇ. ಪ್ರೇಮ- ಕರುಣೆ-ಕ್ಷಮೆಯನ್ನು ಬೋಸುವ ಏಸುವಿನ ಧರ್ಮ ನಮ್ಮಲ್ಲಿಗೆ ಬಂದರೆ ಅದನ್ನು ಸ್ವೀಕರಿಸೋಣ. ಆದರೆ ತೀರ ಹಿರಿಯೂರಿನಂಥ ಚಿಕ್ಕ ಊರಿನಲ್ಲಿ, ಕರ್ನಾಟಕದ ನಟ್ಟ ನಡುವೆ ಪಾದ್ರಿಯೊಬ್ಬ ಬರೀ ಒಂದು ಸೈಕಲ್ ಕೊಡಿಸಿದುದಕ್ಕಾಗಿ ಇಡೀ ಒಂದು ಕುಟುಂಬದಷ್ಟು ಲಮಾಣಿಗರು ಕ್ರೈಸ್ತರಾಗಿ ಪರಿವರ್ತಿತರಾಗಿ ಹೋದರಲ್ಲ ? ಅಂಥ ಪಾತಕವನ್ನು ಹೇಗೆ ಸಹಿಸಿಕೊಳ್ಳೋಣ. ನೆನಪಿರಲಿ, ನಮ್ಮದು ಸಾವಿರ ದೇವರುಗಳ, ದೈವಗಳ ಬಗ್ಗೆ ಬಹುಮುಖೀ ನಂಬಿಕೆಗಳ ಬಣ್ಣ ಬಣ್ಣ ಸಮಾಜ. ಇದರ ಕೊರಳಿಗೆ ಒಂದೇ ಒಂದು ಶಿಲುಬೆ ಹಾಕಿ ಇಡೀ ಬಣ್ಣಗಳ ಸಮೂಹವನ್ನೇ ಬಿಳೀ ನಿಲುವಂಗಿಯಲ್ಲಿ ಮುಚ್ಚಿ ಹಾಕುವುದು ಗ್ರಹಾಂ ಸ್ಟೇನ್ಸ್‌ನ ಹತ್ಯೆಗಿಂತ ದೊಡ್ಡ ಅಪರಾಧ.

ಹೋಗಲಿ, ಬುಡಕಟ್ಟಿನ ಜನ ಏಸು ಸಿದ್ಧಾಂತಗಳೆಡೆಗೆ ಹೃತ್ಪೂರ್ವಕವಾಗಿ ಆಕರ್ಷಿತರಾಗಿ ಕನ್ವರ್ಟ್ ಆಗುತ್ತಾರಾ ? ಆದರೆ ಸಂತೋಷವೇ. ಆದರೆ ಬುಡಕಟ್ಟಿನವರಿರುವ ಹಳ್ಳಿಗಳಲ್ಲಿ ಕ್ರೈಸ್ತ ಪಾದರಿಗಳು ಮೊದಲು ಎಲ್ಲರನ್ನೂ ಪ್ರಾರ್ಥನೆಗೆ ಕರೆಯುತ್ತಾರೆ. ಅಲ್ಲಿ ಒಂದು ಮಿರ್‍ಯಾಕಲ್ ಬಾಕ್ಸ್ ಎಂಬ ಹೆಸರಿನ ಪವಾಡ ಪೆಟ್ಟಿಗೆ ಇಟ್ಟಿರುತ್ತಾರೆ. ಶಾಲೆಯ ಫೀಜಿಗೆ ನಂಗೆ ಹಣವಿಲ್ಲ. ಖಾಯಿಲೆಯ ಖರ್ಚಿಗೆ ಹಣವಿಲ್ಲ. ನಂಗೊಂದು ಹಸು ಬೇಕು. ಗಂಡನಿಗೆ ಸೈಕಲ್ ಬೇಕು- ಇಂಥ ವಿನಂತಿಗಳನ್ನು ಚೀಟಿಯಲ್ಲಿ ಬರೆದು ಹಾಕಿಬಿಟ್ಟರೆ ಸಾಕು. ಒಂದೇ ವಾರದಲ್ಲಿ ಪವಾಡ ಸಂಭವಿಸುತ್ತದೆ. ಫೀಜು, ಹಸು, ಸೈಕಲ್ಲು, ಔಷ - ಎಲ್ಲವೂ ಅವರವರ ಮನೆಗೆ ತಲುಪಿ ಪವಾಡ ಸಂಭವಿಸಿಬಿಟ್ಟಿರುತ್ತದೆ. ಅದರ ಮುಂದಿನ ವಾರ ಅವೆಲ್ಲ ಕುಟುಂಬಗಳ ಕೊರಳಿಗೆ ಶಿಲುಬೆ ನೇತಾಡುತ್ತಿರುತ್ತದೆ. ನಿಜವಾದ ಪವಾಡ ಅದು.

ಒರಿಸ್ಸಾದ ದಾರಾ ಸಿಂಗ್ ಮಾಡಿದ್ದು ಹೇಯ ಕೃತ್ಯ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು. ಖಂಡಿಸಬೇಕು. ಆದರೆ ಬದುಕಿದ್ದಷ್ಟು ದಿನ ಒರಿಸ್ಸಾದಲ್ಲಿ ಗ್ರಹಾಂ ಸ್ಟೇನ್ಸ್ ಮಾಡಿದ್ದು ಇದೇ ಪವಾಡಗಳನ್ನ. ಅದನ್ನು ಮಾತ್ರ ಯಾರೂ ಖಂಡಿಸುವುದಿಲ್ಲ. ಏಕೆಂದರೆ ಕ್ರೈಸ್ತರ, ಮುಸಲ್ಮಾನರ ಓಟುಗಳು ಎಣಿಕೆಗೆ ಸಿಗುತ್ತವೆ. ಕಾಶ್ಮೀರಿ ಪಂಡಿತರು, ಸಿಖ್ಖರು ಯಾವ ಗಿಡದ ತೊಪ್ಪಲು ?
ಇಷ್ಟಾಗಿ, ನಾನು ಹಿಂದೂ ಧರ್ಮ ಸಂರಕ್ಷಣೆಯಾಗಬೇಕು ಎಂದು ಬೊಬ್ಬಿರಿಯುತ್ತಿಲ್ಲ. ಅಸಲು ದೇವರನ್ನೇ ನಂಬದ ನನಗೆ ಎಲ್ಲ ಧರ್ಮಗಳೂ ಒಂದೇ. ಆದರೆ ನಮ್ಮ ದೇಶದ ಸಂಸ್ಕೃತಿ, ಅದರ ವೈವಿಧ್ಯತೆ, ಅದರ ಐಡೆಂಟಿಟಿಗಳಿಗೆ ಆಪತ್ತು ಬಂದಾಗ ಪ್ರತಿಭಟಿಸದೇ ಇದ್ದರೆ ಅದನ್ನು ನಾನು ಸೆಕ್ಯುಲರಿಸಂ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಒಮ್ಮೆ ಫ್ರಾನ್ಸ್ ಕಡೆಗೆ ತಿರುಗಿ ನೋಡಿ. ಅಲ್ಲಿ ಪಂಥ (Sect) ಗಳನ್ನು ನಿಯಂತ್ರಿಸಲೆಂದೇ ಒಂದು ಇಲಾಖೆಯಿದೆ. ಒಬ್ಬ ಮಂತ್ರಿಯಿದ್ದಾನೆ. ಫ್ರಾನ್ಸ್‌ನಲ್ಲಿ ಇತ್ತೀಚೆಗೆ ಬ್ರಹ್ಮಕುಮಾರಿ ಸಿದ್ಧಾಂತದ ಕುರಿತು ಪಾಠ ಮಾಡಿದ ಇಬ್ಬರು ಮೇಷ್ಟ್ರುಗಳನ್ನು ಫ್ರೆಂಚ್ ಪೊಲೀಸರು ಜೈಲಿಗೆ ಹಾಕಿದ್ದರು. ( ಟೈಮ್ಸ್ ಆಫ್ ಇಂಡಿಯಾ ೧೭.೧೦.೦೩). ಜಪಾನದಲ್ಲಿ ಸಾಯಿಬಾಬಾ ನಿಷಿದ್ಧ. ಅಮೆರಿಕದಿಂದ ರಜನೀಶರನ್ನು ಓಡಿಸಿದ್ದೇ, ಆತ ಕ್ರಿಸ್ತನ ವಿರುದ್ಧ ಮಾತನಾಡಿದ್ದಕ್ಕಾಗಿ. ಚೀನದಲ್ಲಿ ಮುಸ್ಲಿಮರನ್ನು ಸಂಘಟಿತರಾಗಲು ಬಿಡುವುದಿಲ್ಲ. ಇದನ್ನೆಲ್ಲ `ಸರಿ' ಅಂತ ನಾನು ವಾದಿಸುತ್ತಿಲ್ಲ. ನಮ್ಮದು ಪ್ರಜಾಪ್ರಭುತ್ವ. ಎಲ್ಲವುದಕ್ಕೂ ಇಲ್ಲಿ ಸ್ವಾಗತವಿದೆ. ಆದರೆ ಪ್ರಜೆಗಳ ಬದುಕಿನ ವೈವಿಧ್ಯತೆಯನ್ನೇ ದೋಚಿ ಇಡೀ ದೇಶದ ಕೊರಳಿಗೆ ಯಾರಾದರೂ ಶಿಲುಬೆ ಹಾಕುತ್ತಿದ್ದರೆ ಸುಮ್ಮನಿರಬೇಕಾ ? ಹಾಗೆ ಸುಮ್ಮನಿರುವವನ್ನು ಏನನ್ನಬೇಕು.

ದೇವೇಗೌಡ ? ಕೃಷ್ಣ ? ಸೆಕ್ಯುಲರಿಸಂ ? ಅಥವಾ ಓಟುಗಳಿಗಾಗಿ ಏನನ್ನು ಬೇಕಾದರೂ ಮಾರಿಕೊಳ್ಳುವ ದೇಶನಾಶಕರು ?
ಹೆಸರು ನೀವೇ ಇಡಿ.

3 comments:

Anonymous said...

ರವಿಯವರೆ,

ನಿಮ್ಮ ಲೇಖನ ಸತ್ಯವನ್ನು ಎತ್ತಿ ಹಿಡಿಯುತ್ತದೆ. ಉಳಿದ ಬುದ್ದಿಜೀವಿಗಳಂತೆ ಕಪಟತನ ನಿಮ್ಮಲ್ಲಿಲ್ಲ. ಇದ್ದದ್ದನ್ನು ಇದ್ದಹಾಗೆ ಹೇಳುವ ನೇರವಂತಿಕೆಯೇ ನಿಮ್ಮ ವೈಶಿಷ್ಟ್ಯ.

Anonymous said...

ಓ ಜೀಸಸ್...

ಪ್ರಪಂಚವನ್ನೆಲ್ಲಾ ನಿನ್ನ ಅನುಯಾಯಿಗಳನ್ನಾಗಿ ಮಾಡಬೇಕೆನ್ನುವ ನಿನ್ನ ಹಿಂಬಾಲಕರ ದುರ್ಬುದ್ದಿ ಹೋಗಲಾಡಿಸು. ಸೋಪು ಮಾರುವ ಸೇಲ್ಸ್‌ಮನ್‌ಗಳಂತೆ ಮನೆ ಮನೆ ತಿರುಗಿ, ಮುಗ್ದ ಜನರನ್ನು ಆಮಿಷ ಒಡ್ಡಿ ಮತಾಂತರಕ್ಕೆ ಪ್ರಚೋದಿಸುವ ನಿನ್ನ ಹಿಂಬಾಲಕರಿಗೆ ಸದ್ಬುದ್ದಿ ಕರುಣಿಸು. ನಿನ್ನ ಅನುಯಾಯಿಗಳಿಗೆ ಇತರ ಧರ್ಮಗಳನ್ನು ಗೌರವಿಸುವ ಬುದ್ದಿ ಕೊಡು. ಇತರ ಧಾರ್ಮಿಕರ ಆಚರಣೆ, ವಿಧಿಗಳನ್ನು ಅಪಹಾಸ್ಯಮಾಡುವ ಕೀಳುಬುದ್ದಿಯನ್ನು ಹೋಗಲಾಡಿಸು.

ಆಮೆನ್...

edwynrachel said...

Aussie casino: What is a welcome bonus? - JTM Hub
The online gambling industry is growing, and 성남 출장마사지 new 남원 출장샵 players alike are getting a welcome 김해 출장안마 bonus too. With 전주 출장마사지 the introduction of 서울특별 출장마사지 new games and